ಎಸ್ ಎಸ್ ಮಲ್ಲಿಕಾರ್ಜುನ್ ರಾತ್ರೋರಾತ್ರಿ ಇದ್ದಕ್ಕಿದ್ದಂತೆ 2 ಲಕ್ಷ ಕಟ್ಟಿ ಅರ್ಜಿ ಹಾಕಿದ್ದಾರೆ – ಯಶವಂತರಾವ್ ಜಾದವ್

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಮಾಜಿ ಶಾಸಕರು ಮಾಜಿ ಮಂತ್ರಿಗಳಾದ ಎಸ್ಎಸ್ ಮಲ್ಲಿಕಾರ್ಜುನ್ ಅವರು ಅವರ ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಸಲ್ಲಿಸುವಾಗ ನಾನು ಪ್ರಮಾಣಿಕ ನಿದ್ದೇನೆ 2 ಲಕ್ಷ ರೂಪಾಯಿ ಕಟ್ಟಿ ಏಕೆ ಅರ್ಜಿ ಹಾಕಬೇಕು ಎಂದು ಮಾಧ್ಯಮಗಳ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದರು. ಎಸ್ ಎಸ್
ಮಲ್ಲಿಕಾರ್ಜುನ್ ಏಕೆ ರಾತ್ರೋರಾತ್ರಿ ಕಳ್ಳರ ತರ ಇದ್ದಕ್ಕಿದ್ದ ಹಾಗೆ ಎರಡು ಲಕ್ಷ ರೂಪಾಯಿ ಕಟ್ಟಿ ಅರ್ಜಿ ಹಾಕಿದ್ದಾರೆ,
ಇವರ ಪ್ರಾಮಾಣಿಕತೆ ಎಲ್ಲಿ ಹೋಯಿತು, ಮತ್ತು ಇವನು ಸಹ ಅಪ್ರಮಾಣಿಕ ಎಂದು ಒಪ್ಪಿಕೊಂಡಂತಾಯಿತು, ಮತ್ತು ಪಕ್ಷ ಯಾವುದೇ ಇರಲಿ ಆ ಪಕ್ಷದ ರಾಜ್ಯಾಧ್ಯಕ್ಷರು ಏನು ಆದೇಶವನ್ನು ಕೊಡುತ್ತಾರೆ ಅವುಗಳನ್ನೆಲ್ಲ ಪಾಲನೆ ಮಾಡುವುದು ಅವುಗಳಿಗೆ ಗೌರವ ಕೊಡುವುದು ಆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಕರ್ತವ್ಯ ಅದುನ್ನ ಬಿಟ್ಟು ನಾನು ಪ್ರಾಮಾಣಿಕ ಆಕಾಶದಿಂದ ನೇರವಾಗಿ ಭೂಮಿಗೆ ಬಂದಿದ್ದೇನೆ ಎಂಬ ಅಹಂಕಾರದಿಂದ ಈ ರೀತಿ ನಡೆದುಕೊಂಡರೆ ಯಾವುದೇ ವ್ಯಕ್ತಿ ಎಷ್ಟೇ ದೊಡ್ಡವನಿರಲಿ ಎಷ್ಟೇ ಶ್ರೀಮಂತನಿರಲಿ ಪಕ್ಷದ ಚೌಕಟ್ಟಿಗೆ ತಲೆಬಾಗಲೇ ಬೇಕಾಗುತ್ತದೆ
ಯಾವಾಗ ಪಕ್ಷದ ರಾಜ್ಯ ಅಧ್ಯಕ್ಷರು, ಎಸ್ಎಸ್ ಮಲ್ಲಿಕಾರ್ಜುನಿಗೆ ಮುಖಕ್ಕೆ ಮಂಗಳಾರತಿ ಮಾಡಿದರು ಆಗ, ನೀನು ಹೇಗೆ ಟಿಕೆಟ್ ಪಡೆದುಕೊಳ್ಳುತ್ತಿ ನೋಡುತ್ತೇನೆ ಎಂದು ಹೇಳಿದ ತಕ್ಷಣ ಹೋಗಿ ಅರ್ಜಿ ಹಾಕಿದ ಮಲ್ಲಿಕಾರ್ಜುನ್ ನಿನ್ನ ಪ್ರಾಮಾಣಿಕತೆ ನಿಷ್ಠೆ ಎಲ್ಲಾ ಮಣ್ಣು ಪಾಲಾಗಿ ಹೋಯಿತು, ಒಂದು ಸತ್ಯ ಮಲ್ಲಿಕಾರ್ಜುನ್ ಗೆ ಗೊತ್ತಿರಲಿ ಈ ದೇಶದೊಳಗೆ ಪಕ್ಷ ಯಾವುದೇ ಇರಲಿ, ವ್ಯಕ್ತಿಗಿಂತ ಪಕ್ಷ ದೊಡ್ಡದು ಪಕ್ಷಕ್ಕಿಂತ ದೇಶ ದೊಡ್ಡದು ಈ ಸತ್ಯವನ್ನ ಅರಿತು ಮಲ್ಲಿಕಾರ್ಜುನ್ ನಡೆದುಕೊಳ್ಳಲಿ…
ಯಶವಂತರಾವ್ ಜಾದವ್ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರು