ಜಿಲ್ಲೆಯಲ್ಲಿ  ಮತದಾರರ ಮಾಹಿತಿ ಸಂಗ್ರಹಣೆ ಹಾಗೂ ಸಮೀಕ್ಷೆ :ಖಾಸಗಿ ಸಂಘ-ಸಂಸ್ಥೆಗಳ ನಿಷೇಧ: ಓರ್ವನ ವಿರುದ್ಧ ಎಫ್ ಐ ಆರ್ ದಾಖಲು

davanagere dc shivanand kapasi

ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿ ಹಾಗೂ ಸಂಘ-ಸಂಸ್ಥೆಗಳು ಮತದಾರರಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಭೌತಿಕವಾಗಿ ಅಥವಾ ಮಾಹಿತಿ ತಂತ್ರಜ್ಞಾನ ಸಲಕರಣೆಗಳ ಮೂಲಕ ಸಂಗ್ರಹಣೆ ಮಾಡುವುದು, ಮನೆ-ಮನೆ ಸಮೀಕ್ಷೆ ಮಾಡುವುದು ಹಾಗೂ ಗುರುತಿನ ಚೀಟಿಗಳನ್ನು ದುರ್ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ಆದೇಶ ಹೊರಡಿಸಿದ್ದಾರೆ.

ಹರಿಹರದ ಶಿಲ್ಪ ಜೆರಾಕ್ಸ್ ಸೆಂಟರ್‍ನಲ್ಲಿ ಅನಧಿಕೃತ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿದ್ದಕ್ಕೆ ಹರಿಹರ ತಹಶೀಲ್ದಾರ್, ಇವರು ಗುನ್ನೆ ನಂ.0242/2022 ದಿ: 18.12.2022  ರಲ್ಲಿ FIR ದಾಖಲಿಸಿರುವ ಅಂಶವನ್ನು ಸಾರ್ವಜನಿಕರು ಗಮನಕ್ಕೆ ತರುತ್ತಾ ಮತದಾರರ ಗುರುತಿನ ಚೀಟಿಗಳನ್ನು ಮುದ್ರಣ ಮಾಡಲು ಹಾಗೂ ವಿತರಿಸಲು ಭಾರತ ಚುನಾವಣಾ ಆಯೋಗವಾಗಲೀ, ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರುರವರಾಗಲೀ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ದಾವಣಗೆರೆರವರಾಗಲೀ ಯಾವುದೇ ವ್ಯಕ್ತಿ/ಸಂಘ ಸಂಸ್ಥೆ/ಏಜೆನ್ಸಿಗಳನ್ನು ನೇಮಕ ಮಾಡಿರುವುದಿಲ್ಲ.

ಜಿಲ್ಲೆಯಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಉಚಿತವಾಗಿ ಮತದಾರರಿಗೆ ನೇರವಾಗಿ ಅಂಚೆ ಇಲಾಖೆ/ಮತಗಟ್ಟೆ ಮಟ್ಟದ ಅಧಿಕಾತಿಗಳ(ಬಿ.ಎಲ್.ಓ) ಮುಖಾಂತರ ವಿತರಿಸಲಾಗುತ್ತಿದೆ. ಮತದಾರರು ಅನಧಿಕೃತ ಸಂಸ್ಥೆ/ವ್ಯಕ್ತಿಗಳಿಗೆ ಹಣ ಪಾವತಿಸಿ ಚುನಾವಣಾ ಗುರುತಿನ ಚೀಟಿ ಪಡೆಯಬಾರದು. ಮತದಾರರ ಪಟ್ಟಿ ಹಾಗೂ ಗುರುತಿನ ಚೀಟಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಮತದಾರರ ಸಹಾಯವಾಣಿ ಸಂಖ್ಯೆ 1950  ಹಾಗೂ ಜಿಲ್ಲಾ ದೂರು ನಿರ್ವಹಣಾ ಕೇಂದ್ರ ದೂ.ಸಂ.08192-272953ಕ್ಕೆ ಕಚೇರಿ ಸಮಯದಲ್ಲಿ ಕರೆಮಾಡಿ ದೂರು ಸಲ್ಲಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!