ದವನ್ ಕಾಲೇಜಿನಲ್ಲಿ 31ಕ್ಕೆ ದವನ್ ಕಾರ್ನಿವಲ್, ಅಹಾರ ಮೇಳ

ದಾವಣಗೆರೆ: ದವನ್ ಕಾಲೇಜು ವತಿಯಿಂದ ದವನ್ ಕಾರ್ನಿವಲ್-೨೦೨೨ನ್ನು ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಡಿಸೆಂಬರ್೩೧ರ ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಉಪಪ್ರಾಂಶುಪಾಲೆ ಅನಿತಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ, ವಾಣಿಜ್ಯ, ಮತ್ತು ನಿರ್ವಹಣಾ ಜ್ಞಾನದ ಅರಿವು ಮೂಡಿಸುವುದು ಈ ಯುವ ಉತ್ಸವದ ಪ್ರಮುಖ ಉದ್ದೇಶವಾಗಿರುತ್ತದೆ ಎಂದರು.
ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಆಟದ ಮಳಿಗೆಗಳ ವ್ಯವಸ್ಥೆಯನ್ನು ಮಾಡಿಕೊಡಲಾಗಿದ್ದು, ವ್ಯಾಪಾರ ವಹಿವಾಟುಗಳಲ್ಲಿ ವಿದ್ಯಾರ್ಥಿಗಳು ತೊಡಗಲಿದ್ದಾರೆ. ಕಾರ್ನಿವಲ್ನ ವಿಶೇಷತೆಯನೆಂದರೆ, ಪ್ರತಿ ತರಗತಿಗಳಿಂದ ಒಂದು ತಂಡದAತೆ ಒಟ್ಟು ೧೬ತಂಡಗಳಿಗೆ ೧೬ ಮಳೀಗೆಗಳನ್ನು ನೀಡಲಾಗಿದೆ. ಪ್ರತಿ ಮಳಿಗೆಯಲ್ಲೂ ತಲಾ ಎರಡು ಭಾಗಗಳು ಒಂದು ಆಹಾರ ನಿರ್ವಹಣೆಗೆ ಹಾಗೂ ಆಟಗಳ ಮಳಿಗೆ,೧೨ ತಂಡಗಳಿಗೆ ಭಿನ್ನ ಸಂಸ್ಕತಿಯ ಆಹಾರ ತಯಾರಿಕೆ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ಕಾರ್ನಿವಾಲ್ ಮೂಲಕ ಆಯವ್ಯಯ ಮಂಡನೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ,ವ್ಯವಹಾರ ಜ್ಞಾನ ಹಾಗೂ ನಿರ್ವಹಣಾ ಸಾಮರ್ಥ್ಯದ ಅತಿವು, ಮಾರಾಟದ ರೂಪುರೇಷ ಮತ್ತು ವಿಧಾನ ಕುರಿತು ಕಲಿಯಲಿದ್ದಾರೆ ಎಂದರು.
ಇದರ ಜೊತೆಗೆ ಆಹಾರ ಸಮಿತಿ,ಕ್ರೀಡಾ ಸಮಿತಿ, ನಿರ್ವಹಣಾ ಸಮಿತಿ, ಶಿಸ್ತು ವಾಲನಾ ಸಮಿತಿಗಳು ವಿದ್ಯಾರ್ಥಿಗಳಿಂದಲೇ ನಿರ್ವಿಹಿಸಲ್ಪಡುತ್ತದೆ. ೧೬ ತಂಡಗಳಿAದ ಸಾಂಸ್ಕೃತುಕ ಕಾರ್ಯಕ್ರಮಗಳು ನಡೆಯಲಿದೆ ಎಂದvರು.
ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಮಳಿಗೆಗಳಲ್ಲಿ ಗಳಿಸಿದ ಮೊತ್ತದಲ್ಲಿ ಒಂದು ಭಾಗವನ್ನು ವಿದ್ಯಾರ್ಥಿಗಳು ಸಾಮಾಜಿಕ ನಿಧಿಗೆ ಮೀಸಲಿಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಸಹ ಹಮ್ಮಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ನಿವಾಲ್ ನಲ್ಲಿ ವಿದ್ಯಾರ್ಥಿಗಳು, ಪಾಲಕರು,ಮತ್ತು ಪೋಷಕರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಅಪರಾಹ್ನ ೨:೩೦ರಿಂದ ೪ ಗಂಟೆಯವರೆಗೆ ಸಾರ್ವಜನಿಕರಿಗೆ ಆಹಾರ ಮತ್ತು ಆಟದ ಮಳಿಗೆಗಳಿಗೆ ಪ್ರವೇಶವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ,ಮಧುಕರ್,ಡಾ.ಹರೀಶ ತಿಗರಿ,ಎಲ್.ಅರುಣ್ ಚೌವ್ಹಾಣ್,ಜಿ.ವಿ.ಬಸವರಾಜ್ ಪಾಟೀಲ್ ಇತರರು ಇದ್ದರು.