ಅನೈತಿಕ ಚಟುವಟಿಕೆಗಳ ತಾಣ ಸರ್ಕಾರಿ ಶಾಲೆ: ಕ್ರಮಕ್ಕೆ ಡಿಎಸ್‌ಎಸ್ ಆಗ್ರಹ

Govt school a hotbed of immoral activities: DSS demands action

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ದಾವಣಗೆರೆ ನಗರದಲ್ಲಿ ಅಭಿವೃದ್ದಿ ಆಗುತ್ತಿದೆ. ಆದರೆ ಬೂದಾಳು ರಸ್ತೆಯಲ್ಲಿನ ಎಸ್‌ಪಿಎಸ್ ನಗರದ ೧ನೇ ಹಂತದಲ್ಲಿರವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣ, ಅವ್ಯವಸ್ಥೆಯ ಆಗರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ªಸಮಿತಿ ದೂರಿದೆ.

ಈ ಕುರಿತ ಮನವಿಯೊಂದನ್ನು ಜಿಲ್ಲಾಧಿಕಾರಿ ಕಚೇರಿ, ಸಾರ್ವಜನಿಕ ಶಕ್ಷಣ ಇಲಾಖೆಯ ಉಪನಿರ್ದೇಶಕರು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿದ್ದು, ಸೌಲಭ್ಯ ವಂಚಿತ ಶಾಲೆಯು ದುಸ್ಥಿತಿಯಲ್ಲಿದ್ದು, ಭಯ ಹುಟ್ಟಿಸುತ್ತಿರುವ ಪೋಲಿ ಪಡೆಗಳ ಮತ್ತು ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟುವಂತೆ ಒತ್ತಾಯಿಸಿದೆ.


೨೦೦೩ ರಲ್ಲಿ ನಿರ್ಮಾಣಗೊಂಡ ಈ ಶಾಲೆಯಲ್ಲಿ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಆದರೆ, ಈ ಶಾಲೆಯು ಸೌಲಭ್ಯ ವಂಚಿತಗೊAಡಿದೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೮೬ಕ್ಕೆ ಕುಸಿದಿದೆ. ಇದಕ್ಕೆ ಶಿಥಿಲಗೊಂಡ ಕಟ್ಟಡ, ಬಿದ್ದುಹೋದ ಶಾಲೆಯ ಕಾಂಪೌAಡು,ಮದ್ಯದ ಬಾಟಲಿಗೂ, ಗುಟ್ಕಾ ಚೀಟಿಗಳೇ ಕಾರಣ ಎಂದು ಡಿಎಸ್‌ಎಸ್ ಮುಖಂಡರು ದೋರಿದ್ದಾರೆ.

ಸುಣ್ಣ ಬಣ್ಣದಿಂದ ಕಂಗೊಳಿಸಬೇಕಾಗಿದ್ದ ಶಾಲಾ ಗೋಡೆಗಳು ಗುಟ್ಕಾ ತಿಂದು ಉಗುಳಿದ ಕೆಂಪು ಬಣ್ಣದಿಂದ ಕಾಣುತ್ತಿವೆ. ಶಾಲೆಯಲ್ಲಿ ಇರುವ ಶೌಚಾಲಯ ಪಾಳು ಬಿದ್ದ ಕಾರಣ ಶಾಲಾ ಆವರಣದಲ್ಲೇ ಮಲ ಮೂತ್ರ ವಿಸರ್ಜನೆ ಮಾಡಲಾಗಿತ್ತಿದೆ. ಈ ಶಾಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು, ಸಥಾಯಿ ಕರ್ಮಚಾರಿಗಳು ಸೇರಿದಂತೆ ಎಲ್ಲರೂ ಬಡವರ್ಗದವರೇ ಇದ್ದಾರೆ. ಕಾರಣ ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಪಾಳು ಬಿದ್ದ ಶಾಲೆಗೆ ಉತ್ತಮ ರೂಪ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗಿವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!