DHUDA: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಬಸನಗೌಡ ಕೋಟೂರ ನೇಮಕ

dhuda new commissioner basanagouda kotura

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ತಹಸೀಲ್ದಾರ ಆಗಿದ್ದ ಬಸನಗೌಡ ಕೋಟೂರ ಅವರನ್ನ ದಿನಾಂಕ 1.12.2022 ರಲ್ಲಿ ಕೆ.ಎ.ಎಸ್ (ಕಿ.ಶ್ರೇ) ವೃಂದಕ್ಕೆ ಬಡ್ತಿ ನೀಡಿ ಕಾರ್ಯದರ್ಶಿ, ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು.  ಆಡಳಿತಾತ್ಮಕ ಹಿತದೃಷ್ಟಿಯಿಂದ ಸದರಿ ಆದೇಶವನ್ನು ಮಾರ್ಪಡಿಸಿ ದಿನಾಂಕ 24.01.2023 ರಂದು ತಕ್ಷಣದಿಂದ ಜಾರಿಗೆ ಬರುವಂತೆ ಇವರನ್ನು ಆಯುಕ್ತರು, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ದಾವಣಗೆರೆ ಇಲ್ಲಿಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ.

ದುಡಾ ಆಯುಕ್ತರಾಗಿದ್ದ ಬಿ.ಟಿ.ಕುಮಾರಸ್ವಾಮಿ, ಕೆ.ಎ.ಎಸ್ (ಹಿ.ಶ್ರೇ), ಅಧಿಕಾರಿ ಇವರಿಗೆ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗಾಗಿ, ಸಿಆಸು ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿ ಸರ್ಕಾರ ಆದೇಶಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!