ಮತ್ತೆ ಮೊಳಗಿದ ಮುಂದಿನ ಸಿಎಂ ಸಿದ್ದರಾಮಯ್ಯ ಘೊಷಣೆ!! ಎಲ್ಲಿ ಅಂತೀರಾ ಇದನ್ನ ಓದಿ

ex cm siddu attends mla ramappa daughter

ದಾವಣಗೆರೆ: ಕರೋನಾ ಮಧ್ಯೆಯೂ ಶಾಸಕ ಎಸ್. ರಾಮಪ್ಪ ಅವರ ಪುತ್ರಿಯ ವಿವಾಹ ಯಾವುದೇ ಮಾರ್ಗಸೂಚಿ ಪಾಲಿಸದಂತೆ ನಡೆದಿದೆ!

ಹೌದು, ಸಾಮಾನ್ಯ ಜನರಿಗೆ ಅನ್ವಯಿಸುವ ಯಾವುದೇ ಕಾನೂನುಗಳು ಈ ಜನಪ್ರತಿನಿಧಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಅವರು ಹೇಗೆ ನಡೆದುಕೊಂಡರು, ಕಾನೂನು ಉಲ್ಲಂಘಿಸಿದರೂ ಅದು ಲೆಕ್ಕಕ್ಕೆ ಇರಲ್ಲ ಎನ್ನುವ ಮಾತು ಮತ್ತೊಮ್ಮೆ ಹರಿಹರ ಶಾಸಕ ರಾಮಪ್ಪ ಅವರ ಪುತ್ರಿಯ ವಿವಾಹದಲ್ಲಿ ಸಾಬೀತಾಗಿದೆ.

ಮದುವೆ ಸಮಾರಂಭಕ್ಕೆ ಐವತ್ತಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ ಎಂದು ಸರ್ಕಾರದ ಆದೇಶವಿದ್ದರೂ ಸಹ ರಾಮಪ್ಪ ಪುತ್ರಿಯ ವಿವಾಹದಲ್ಲಿ ಸಾಮಾಜಿಕ ಅಂತರ ಮರೆತು ಜನರು ನೂಕುನುಗ್ಗಲು ಉಂಟಾಯಿತು.

ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೂಕುನುಗ್ಗಲು ಹೆಚ್ಚಾಯಿತು. ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ‌ ಉಲ್ಲಂಘನೆ ನಡೆಯಿತು.

ಸಿದ್ದರಾಮಯ್ಯನೇ ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನಿಗಳ ಜೈಕಾರದ ಘೋಷಣೆ ಪ್ರತಿಧ್ವನಿಸಿತು.

ಕಲ್ಯಾಣ ಮಂಟಪಕ್ಕೆ ಸಿದ್ದರಾಮಯ್ಯ ಬರುತ್ತಿದ್ದಂತೆ ಅಭಿಮಾನಿಗಳ ಜೈಕಾರ ಕೇಳಿಬಂತು. ಸಮಾರಂಭದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ನವ ವಧುವರರಿಗೆ ಶುಭಹಾರೈಸಿ, ಆಶೀರ್ವದಿಸಿ ಅಲ್ಲಿಂದ ತೆರಳಿದರು.

Leave a Reply

Your email address will not be published. Required fields are marked *

error: Content is protected !!