Chain snatch:ಹಾಡುಹಗಲೇ ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ 3 ಜನ ಆರೋಪಿಗಳ ಬಂಧಿಸಿದ ದಾವಣಗೆರೆ ನಗರ ಪೊಲೀಸ್

chain snatcher and ganza recovered

ದಾವಣಗೆರೆ: ಹಾಡಹಗಲೇ ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಮೂವರು ದುಷ್ಕರ್ಮಿಗಳನ್ನು ವಿದ್ಯಾನಗರ ಮತ್ತು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಈ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದ  ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಪರಮೇಶಿ (25), ಪ್ರದೀಪ್ (26), ಹನುಮಂತ (27) ಬಂಧಿತರಾಗಿದ್ದು, 14 ಪ್ರಕರಣಗಳಿಗೆ ಸಂಬಂಧಿಸಿದಂತೆ 123.2 ಗ್ರಾಂ ಆಭರಣಗಳನ್ನು ಮತ್ತು 02 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿತರನ್ನು ಪತ್ತೆ ಮಾಡುವಲ್ಲಿ ದಾವಣಗೆರೆ ನಗರ ಉಪವಿಭಾಗದ ಪೋಲೀಸ್ ಉಪಾಧೀಕ್ಷಕರಾದ ನಾಗೇಶ್ ಐತಾಳ್, ಕೆ.ಟಿ.ಜೆ ನಗರ ವೃತ್ತದ ಸಿಪಿಐ ಹೆಚ್. ಗುರುಬಸವರಾಜ, ವಿದ್ಯಾನಗರ ಠಾಣೆಯ ಪಿಎಸ್‌ಐ ರೂಪತೆಂಬದ, ಕೆಟಿಜೆ ಪೋಲೀಸ್ ಠಾಣೆ ಪಿ.ಎಸ್.ಐ ಅಬ್ದುಲ್ ಫಲಾನಿ, ಸಿಬ್ಬಂದಿಯವರಾದ ಪ್ರಕಾಶ, ಶಂಕರ್ ಜಾಧವ್,ಮಂಜುನಾಥ, ಮಂಜು, ತಿಮ್ಮಣ್ಣ, ಗಿರೀಶಗೌಡ,ಚಂದ್ರು,ಲೋಕಾ ನಾಮ್, ತಿಮ್ಮಣ್ಣ ಷಣ್ಮುಖ, ದಾದಾಖಲಂದರ, ಗಣೇಶ, ರಾಘವೇಂದ್ರ, ಉಮೇಶ, ಬಿಸನಾಳ್, ಶಾಂತಕುಮಾರ್ ತಂಡದಲ್ಲಿದ್ದರು.

ದಾವಣಗೆರೆ ಬಡವಣೆ ಹಾಗೂ ವಿದ್ಯಾನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಎಸ್ ಪಿ ರಿಷ್ಯಂತ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!