IGP SQUAD: ಕಲ್ಲು ಗಣಿಗಾರಿಕೆಗೆ ಬಳಸಲು ಅಕ್ರಮ ಡಿಟೊನೆಟರ್ ಸಾಗಾಟ: ಓರ್ವ ವ್ಯಕ್ತಿ ಬಂಧಿಸಿದ ದಾವಣಗೆರೆ ಐಜಿಪಿ ವಲಯದ ಪೊಲೀಸ್ ತಂಡ

GARUDAVOICE EXCLUSIVE
ದಾವಣಗೆರೆ : ಕಠಿಣ ಕಾನೂನು ಕೇವಲ ದಾಖಲೆಗಳಿಗೆ ಮಾತ್ರ ಎಂಬಂತಾಗಿದೆ ಎಂಬುದಕ್ಕೆ ಹಲವು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಕಲ್ಲು ಗಣಿಗಾರಿಕೆ ಮಾಡಲು ಅಕ್ರಮ ಸ್ಫೋಟಕ ಮಾಡಲು ಬಳಸುವ ಜಿಲೆಟಿನ್ ಸಿಕ್ಜಿರುವುದು ಇದಕ್ಕೆ ಪುಷ್ಟಿ ಎನ್ನುವಂತೆ ಒಂದು ತಿಂಗಳ ಅಂತರದಲ್ಲ ಎರಡನೇ ಪ್ರಕರಣ ನಿನ್ನೆ ಮತ್ತೊಂದು ದಾಖಲಾಗಿದೆ.
ಹೌದು ಅಕ್ರಮ ಸ್ಫೊಟಕ ಬಳಕೆ ನಿಷೇದ ಕೇವಲ ಕಾಗದದ ದಾಖಲೆಗೆ ಮಾತ್ರ ಎಂಬುದಕ್ಕೆ ಪುಷ್ಠಿ ಎಂಬಂತೆ ದಾವಣಗೆರೆಯಲ್ಲಿ ಶನಿವಾರ ಅಕ್ರಮವಾಗಿ ಬೈಕ್ ನಲ್ಲಿ ಸ್ಫೊಟಕ ಸಾಗಾಟ ಮಾಡುತ್ತಿದ್ದಂತಹ ಪ್ರಕರಣ ದಾಖಲಾಗಿದೆ.ದಾವಣಗೆರೆ ತಾಲ್ಲೂಕಿನ ಅಲೂರು ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಕಲ್ಲು ಬಂಡೆಯನ್ನ ಸ್ಫೋಟ ಮಾಡುವ ಉದ್ದೇಶದಿಂದ ಅಪಾಯಕಾರಿಯಾಗಿ ಯಾರ ಭಯವಿಲ್ಲದೇ ಬೈಕ್ನಲ್ಲಿ 8 ಜಿಲೆಟಿನ್ ಕಡ್ಡಿಗಳನ್ನ ವಶಕ್ಕೆ ಪಡೆಯಲಾಗಿದೆ.ಪೂರ್ವ ವಲಯ ಐಜಿಪಿ ಕಚೇರಿಯ ಡಿ ವೈ ಎಸ್ ಪಿ ತಿರುಮಲೇಶ್ ಹಾಗೂ ಸಿಬ್ಬಂದಿ ತಂಡದಿಂದ ಈ ಪ್ರಕರಣವನ್ನ ಬೇಧಿಸಿ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪರವಾನಗಿ ಇಲ್ಲದೇ ಅಕ್ರಮವಾಗಿ ಸ್ಪೋಟಕಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಗ್ರಾಮಾಂತರ ಪೋಲಿಸರು ಆರೋಪಿಗಳಿಬ್ಬರನ್ನು ಬಂಧಿಸಿ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊರ್ವ ಆರೋಪಿ ಪರಾರಿಯಾಗಿದ್ದಾನೆ.ಈ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ಜರುಗಿದೆ.
ಹನುಮಂತಪ್ಪ, ಬಂಧಿತ ಆರೋಪಿ. ನಿನ್ನೆ ಸಂಜೆ 5-20 ಸಮಯದಲ್ಲಿ ಪೊಲಿಸರು ಎಲೆಬೇತೂರು ಗ್ರಾಮದಲ್ಲಿ ಪರಿಶೀಲನೆ ನಂತರ ಪುಟಗನಾಳು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಪೂರ್ವ ವಲಯ ಐಜಿಪಿಗೆ ಅಕ್ರಮ ಸ್ಪೋಟಕ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಕೂಡಲೇ ಗ್ರಾಮಾಂತರ ಪೊಲೀಸರಿಗೆ ಸೂಚನೆ ನೀಡಿ ಕ್ರಮವಹಿಸಲು ಸೂಚಿಸಿದ್ದಾರೆ. ನಂತರ ದಾವಣಗೆರೆ ಗ್ರಾಮಾಂತರ ಪೊಲೀಸರು ಆಲೂರು ಗ್ರಾಮದ ಕೃಷ್ಣಪ್ಪ ಅವರ ಅಕ್ರಮ ಕಲ್ಲು ಕ್ವಾರಿ ಬಳಿ ರಸ್ತೆಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿಕೊಂಡು ಸ್ಫೋಟಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ. ಮೋಟಾರ್ ಬೈಕ್ನಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ತನ್ನ ಹಿಂಬದಿ ಸವಾರನನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದು ಪೊಲಿಸರನ್ನು
ಕಂಡು ಬೈಕ್ನ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾರೆ.
ಬೈಕ್ನ ಸೈಡ್ ಬ್ಯಾಗ್ನಲ್ಲಿ ಒಂದು ಪೇಪರ್ನಲ್ಲಿ 8 ಜಿಲೆಟಿನ್ ಟ್ಯೂಬ್ ಗಳು, ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆರೋಪಿ ಹನುಮಂತಪ್ಪ ಮತ್ತು ಚಂದ್ರಪ್ಪ ಅವರು ಕೃಷ್ಣಪ್ಪರವರ ಕಲ್ಲು ಕ್ವಾರಿಯಲ್ಲಿ ಸ್ಫೋಟಕವನ್ನು ಉಪಯೋಗಿಸಿ ಉಳಿದ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಸ್ಫೋಟಕ ವಸ್ತುಗಳನ್ನು ಆರೋಪಿ ಹನುಮಂತಪ್ಪ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವ ಸಲುವಾಗಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುವ ಉದ್ದೇಶದಿಂದ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸದೇ ದಹಿಸುವ ಅಥವಾ ಸ್ಫೋಟಕ ಸಾಮಾಗ್ರಿಗಳನ್ನು ಅಕ್ರಮವಾಗಿ ಮೋಟಾರ್ ಬೈಕ್ನಲ್ಲಿಯೇ ಸಂಗ್ರಹ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಶಪಡಿಸಿಕೊಂಡ ಸ್ಫೋಟಕ ವಸ್ತುಗಳಲ್ಲಿ 8 ಜಿಲಿಟಿನ್ ಟ್ಯೂಬ್ಗಳನ್ನು ಸುರಕ್ಷತೆ ದೃಷ್ಟಿಯಿಂದ ಅವುಗಳನ್ನು ತೆಗೆದುಕೊಂಡು ಬಂದು ಕಾಡಜ್ಜಿ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿ ಎಕ್ಸಪ್ಲೋವ್ ಮ್ಯಾಗಜಿನ್ನಲ್ಲಿ ಜಿಲಿಟಿನ್ಗಳನ್ನು ಪ್ರತ್ಯೇಕವಾಗಿ ಸುರಕ್ಷಿತವಾಗಿ ಇಡಲಾಗಿದೆ. ಆರೋಪಿತರುಗಳಾದ ಹನುಮಂತಪ್ಪ, ಚಂದ್ರಪ್ಪ ಹಾಗೂ ಕೃಷ್ಣಪ್ಪ ಇವರುಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.