ಎಸ್ಎಸ್ಎಂ ಮಾಲೀಕತ್ವದ ಇಂಡಿಯನ್ ಕೇನ್ ಪವರ್ ಲಿ. ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯಕ್ಕೆ ಪ್ರಥಮ

images (40)
ಬಾಗಲಕೋಟೆ ಮುಧೋಳ: ವಿಶ್ವಾದ್ಯಂತ ಸಕ್ಕರೆ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಮ್ಮ ದೇಶ ಸಕ್ಕರೆ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದ್ದು, ಮುಧೋಳ ತಾಲೂಕು ಉತ್ತುರ ಗ್ರಾಮದಲ್ಲಿರುವ ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಾಲೀಕತ್ವದ ಇಂಡಿಯನ್ ಕೇನ್ ಪವರ್ ಲಿ. 19.90 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 2.21 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.
ಶಾಸಕರು ಹಾಗೂ ಹಿರಿಯರಾದ ಡಾ. ಶಾಮನೂರು ಶಿವಶಂಕರಪ್ಪನವರು ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಲಾಗಿದ್ದು, ಆಡು ಮುಟ್ಟದ ಸೊಪ್ಪಿಲ್ಲ ಶಾಮನೂರು ಶಿವಶಂಕರಪ್ಪನವರು ಮಾಡದ ಉದ್ಯಮ ಇಲ್ಲ ಎಂದರೆ ತಪ್ಪಾಗಲಾರದು.
ದೇಶ ವಿದೇಶಗಳನ್ನು ಸುತ್ತಿ ಸದಾ ಹೊಸ ಆವಿಷ್ಕಾರ, ವಿಶಿಷ್ಟ ರೀತಿಯ ಯೋಜನೆಗಳನ್ನು ರೂಪಿಸುವ ಎಸ್.ಎಸ್. ಮಲ್ಲಿಕಾರ್ಜುನ್ ರವರ ಈ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ರಾಜ್ಯ ಸರ್ಕಾರವು ಯಶಸ್ವಿ ಉದ್ದಿಮೆದಾರರುಗಳಿಗೆ ಗೌರವಿಸಿ ಪ್ರಶಸ್ತಿ ನೀಡುವ ಮೂಲಕ ಉತ್ತೇಜಿಸಬೇಕು ಎಂದು ಕೇಳಿಕೊಳ್ಳಲಾಯಿತು ಅಂತಾರೆ ಸಾಮಾಜಿಕ ಜಾಲತಾಣದ ಹರೀಶ್
ಶಿಕ್ಷಣ,ವಾಣಿಜ್ಯೋದ್ಯಮ, ಸಮಾಜಸೇವೆ ಮುಖಾಂತರ ಎಸ್.ಎಸ್. ಕುಟುಂಬ ದಾವಣಗೆರೆ ಅಲ್ಲದೆ ರಾಜ್ಯದ್ಯಂತ ಸೇವೆ ಸಲ್ಲಿಸುತ್ತಾ ಬಂದಿದ್ದು ಈ ಯಶಸ್ವಿ ನಾಯಕರುಗಳು ನಮ್ಮ ನಗರದವರೇ ಎಂಬುದೇ ನಮಗೆ ಹೆಮ್ಮೆ.
ಶಾಮನೂರು ಶಿವಶಂಕರಪ್ಪ, ಎಸ್ ಎಸ್ ಮಲ್ಲಿಕಾರ್ಜುನ
ಎಸ್ ಎಸ್ ಮಲ್ಲಿಕಾರ್ಜುನ್ ರವರು ಮುಧೋಳ ದಲ್ಲಿ ಪ್ರಾರಂಭಿಸಿರುವ ಕಾರ್ಖಾನೆಯಂತೆ ದಾವಣಗೆರೆ ಜಿಲ್ಲೆಯಲ್ಲಿಯು ಹೊಸ ಕಾರ್ಖಾನೆಗಳನ್ನು ಪ್ರಾರಂಭಿಸಿ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡಬೇಕು.
ದಾವಣಗೆರೆ ಜಿಲ್ಲೆಯ ಜನತೆ, ಹಾಗೂ ಯುವಕರು ತಮ್ಮ ಕುಟುಂಬದ ಮೇಲೆ ಅಪಾರವಾದ ಅಭಿಮಾನ ಮತ್ತು ನಂಬಿಕೆಯನ್ನು ಹೊಂದಿದ್ದು…
ಯುವ ಜನತೆಗೆ ಉದ್ಯೋಗ ಹಾಗೂ ಜಿಲ್ಲೆಯ ಜನರಿಗೆ ಆರ್ಥಿಕ ಸ್ವಾವಲಂಬನೆ ಗೆ ಯೋಜನೆ ರೂಪಿಸಬೇಕೆಂದು ಜನತೆಯ ಆಗ್ರಹ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!