ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಸರ್ಕಾರದ ಆದೇಶಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ವಿರೋಧ

ದಾವಣಗೆರೆ: ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ಜು.7 ರಿಂದ ನೀರು ಹರಿಸಲು ನೀಡಿರುವ ಸರ್ಕಾರದ ಆದೇಶಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಜಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತುಂಗಾದಿಂದ 15 ಟಿಎಂಸಿ ನೀರನ್ನು ಭದ್ರಾಕ್ಕೆ ಲಿಫ್ಟ್ ಮಾಡಬೇಕು. ಆ ನಂತರ, ಅಪ್ಪರ್ ಭದ್ರಾಕ್ಕೆ ನೀರು ನೀಡಲು ನಮ್ಮ ಅಭ್ಯಂತರವಿಲ್ಲ. ತುಂಗಾದಿಂದ ನೀರು ಲಿಫ್ಟ್ ಮಾಡದೇ ಭದ್ರಾದಿಂದ ವಾಣಿವಿಲಾಸ ಸಾಗರಕ್ಕೆ ಹರಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಂಗಾ ನೀರನ್ನು ಲಿಪ್ಟ್ ಮಾಡದ ಹೊರತು ಒಂದು ಹನಿ ನೀರನ್ನು ಭದ್ರಾ ಮೇಲ್ದಂಡೆಗೆ ಬಿಡಬಾರದು. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಇದನ್ನು ವಿರೋಧಿಸಿದ್ದು, ನಾನು ಸಹಾ ಇದನ್ನು ವಿರೋಧಿಸುತ್ತೇನೆ. ಆದ್ದರಿಂದ, ಕೂಡಲೇ ಸರ್ಕಾರ ಈ ಆದೇಶ ಹಿಂಪಡೆಯುವಂತೆ ಅವರು ಒತ್ತಾಯಿಸಿದರು.