ವರ್ಷಧಾರೆಯಿಂದ ರೈತರಲ್ಲಿ ಸಿಹಿ – ಕಹಿ: ಕೆರೆಯಲ್ಲಿ ಭರ್ಜರಿ ಮೀನು ಹಿಡಿದ ಗ್ರಾಮಸ್ಥರು

IMG_20210718_160655

 

ದಾವಣಗೆರೆ: ಕಳೆದ ರಾತ್ರಿ ಇಡೀ ತಾಲೂಕಿನಲ್ಲಿ ಸುರಿದ ವರ್ಷ‌ಧಾರೆಯಿಂದ ಕೆರೆ, ಹಳ್ಳ-ಕೊಳ್ಳಗಳು ತುಂಬಿಹರಿಯುತ್ತಿದ್ದರೆ, ಮತ್ತೊಂದೆಡೆ ಕೆರೆ ತುಂಬಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ ಹೊಲಗದ್ದೆಗಳು ಜಲಾವೃತವಾಗಿವೆ.

ರಾತ್ರಿ‌ ಇಡೀ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮಗಳ ರಸ್ತೆಗಳು ಹಳ್ಳಗಳಾಗಿವೆ. ಮುಂಗಾರು ಬಿತ್ತನೆಯಾಗಿರುವುದರಿಂದ ಗ್ರಾಮಸ್ಥರಲ್ಲಿ, ರೈತರಲ್ಲಿ ಒಂದೆಡೆ ಆನಂದ ಮೂಡಿದರೆ ಮತ್ತೊಂದೆಡೆ ಮಳೆಯ ಅಬ್ಬರ ಕಂಡು ಆತಂಕ ಆವರಿಸಿದೆ.

ತಾಲ್ಲೂಕಿನ ಮಾಳಗೊಂಡನಹಳ್ಳಿ ಕೆರೆ ತುಂಬಿ‌ ಕೋಡಿ‌ಬಿದ್ದಿದ್ದು, ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಜನಸಾಗರ ಹರಿದು ಬರುತ್ತಿದೆ.‌ ಕೆರೆ ಕೋಡಿಯಲ್ಲಿ ಮೀನುಗಳು ಹರಿದು ಬರುತ್ತಿವೆ. ಮೀನು‌ ಹಿಡಿಯಲು‌ ಗ್ರಾಮಸ್ತರು ಮುಗಿ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!