Rti Sridhar: ಆರ್ ಟಿ ಐ ಶ್ರೀಧರ್ ಹತ್ಯೆ ಮಾಡಿದ್ದ 6 ಜನ ಆರೋಪಿ ಸೇರಿದಂತೆ ಮಾಜಿ ಪುರಸಭೆ ಅದ್ಯಕ್ಷ ಪಿಟಿಪಿ ಆಪ್ತ ಹಾಲೇಶ್ ಬಂಧನ

rti sridhar killers arrested ptp son bharath absconding

 

ದಾವಣಗೆರೆ: ಹರಪನಹಳ್ಳಿ ಪಟ್ಟಣದ ಆರ್.ಟಿ.ಐ ಕಾರ್ಯಕರ್ತ ಟಿ. ಶ್ರೀಧರ್ ಹತ್ಯೆಗೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಜು.15 ರಂದು ಪಟ್ಟಣದ ಎ.ಡಿ.ಬಿ ಕಾಲೇಜು ಆವರಣದ ಕ್ಯಾಂಟಿನಿನಲ್ಲಿ ಆರ್.ಟಿ.ಐ ಕಾರ್ಯಕರ್ತನಾದ ಶ್ರೀಧರ್ ಟಿ (40) ಟೀ ಕುಡಿಯುವ ವೇಳೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹತ್ಯೆಗೈದಿದ್ದರು.

ಹತ್ಯೆಯಾಗಿದ್ದ ಶ್ರೀಧರ್ ಕೊಲೆಯು ಹಲವು ಅನುಮಾನಗಳನ್ನು ಮೂಡಿಸಿತ್ತು. ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಪುತ್ರ ಭರತ್ ಹೆಸರು ಈ ಹತ್ಯೆಯಲ್ಲಿ ಕೇಳಿಬಂದಿತ್ತು. ನಿನ್ನೆಯಷ್ಟೆ ಇದಕ್ಕೆ ಇಂಬು ಕೊಡುವಂತೆ ಶ್ರೀಧರ್ ಪತ್ನಿ ದೂರಿನಲ್ಲಿ ಭರತ್ ಹೆಸರು ಸೇರಿದಂತೆ ಹಲವರ ಹೆಸರು ಉಲ್ಲೇಖಿಸಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಬೆನ್ನತ್ತಿದ ಪೊಲೀಸರು ರಾಯದುರ್ಗದ ವಾಗೀಶ್, ರಾಯದುರ್ಗದ ಯಲ್ಲಪ್ಪ, ಹನುಮಂತಪ್ಪ, ಹಳೆ ಬೇಡರ ಹನುಮಂತ, ಮ್ಯಾಕಿ ಹನುಮಂತ, ರಾಯದುರ್ಗದ ಹನುಮಂತ ಹಾಗೂ ಪ್ರಕರಣದಲ್ಲಿ ಮೃತನನ್ನು ಕೊಲೆ ಮಾಡಲು ಒಳಸಂಚು ರೂಪಿಸಿದ್ದ ಹೆಚ್.ಕೆ.ಹಾಲೇಶ ಈ ಆರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!