ಸೇವಾಲಾಲ್ ಸಮಿತಿಯಿಂದ ಬಂಜಾರ ಆಟೋ ಚಾಲಕರಿಗೆ ಪುಡ್ ಕಿಟ್ ವಿತರಣೆ
ದಾವಣಗೆರೆ: ಶ್ರೀ ಸೇವಾಲಾಲ್ ಮರಿಯಮ್ಮ ಸೇವಾ ಸಮಿತಿಯಿಂದ ಬಂಜಾರ ಸಮಾಜದ ಆಟೋ ಚಾಲಕರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಇಲ್ಲಿನ ಸರಸ್ವತಿ ನಗರ ಶ್ರೀ ಸೇವಾಲಾಲ್ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಿನಸಿ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಹನುಮಂತ ನಾಯ್ಕ್, ಅಧ್ಯಕ್ಷರು ಮಂಜ ನಾಯ್ಕ್, ಸಮಿತಿಯ ಪದಾಧಿಕಾರಿಗಳಾದ ಪ್ರಕಾಶ್, ಪಾಲಿಕೆ ಸದಸ್ಯರಾದ ಶಿವಪ್ರಕಾಶ್, ಮಂಜುನಾಥ್ ನಾಯ್ಕ್, ಹಾಲೇಕಲ್ ಚಂದ್ರನಾಯ್ಕ, ವೆಂಕಟೇಶ್ ನಾಯ್ಕ್, ಲಿಂಗರಾಜ್ ನಾಯ್ಕ್, ಶಂಕರ್ ನಾಯ್ಕ್, ಮಹೇಶ್ ನಾಯ್ಕ್, ಚಂದ್ರಶೇಖರ ನಾಯ್ಕ್, ಮುರುಗೇಂದ್ರ, ಅರುಣ್ ಕುಮರ್, ಬಸವರಾಜ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ದೇವಿರಮ್ಮ ಬಾಯಿ, ಶಶಿಕುಮಾರ್. ವಿಠ್ಠಲ್, ರವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.