ಎಸ್ಸೆಸ್ಸೆಂ ನಿವಾಸಕ್ಕೆ ಹೆಚ್.ಕೆ.ಪಾಟೀಲ್ ಭೇಟಿ

ದಾವಣಗೆರೆ: ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಮಾಜಿ ಸಚಿವರೂ, ಶಾಸಕರೂ ಹಾಗೂ ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್ ಗಳ ಮಹಾಮಂಡಳದ ಅಧ್ಯಕ್ಷರಾದ ಹೆಚ್.ಕೆ.ಪಾಟೀಲ್ ಅವರು ಆಗಮಿಸಿದ್ದರು.
ಹೆಚ್.ಕೆ.ಪಾಟೀಲ್ ಅವರನ್ನು ಮಾಜಿ ಸಚಿವರೂ, ಶಾಸಕರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರೂ, ಶಾಸಕರೂ ಆದ ಪಿ.ಟಿ.ಪರಮೇಶ್ವರನಾಯ್ಕ, ದಾವಣಗೆರೆ ಅರ್ಬನ್ ಬ್ಯಾಂಕ್ ನಿರ್ದೇಶಕರುಗಳಾದ ಬಿ.ಸಿ.ಉಮಾಪತಿ, ಕಂಚಿಕೆರೆ ಮಹೇಶ್, ರಾಜಣ್ಣ ಮತ್ತಿತರರಿದ್ದರು.