ಹರಿಯುವ ನೀರಿನಲ್ಲಿ ಮೀನು ಹಿಡಿಯುವ ಸಾಹಸಕ್ಕೆ ಕೈ ಹಾಕಿದ್ದ ಯುವಕ: ಮುಂದೆನಾಯ್ತು.?

IMG-20210724-WA0020

 

ದಾವಣಗೆರೆ: ಹರಿಯುವ ನೀರಿನಲ್ಲಿ ಮೀನು ಹಿಡಿಯುವ ದುಸ್ಸಾಹಸಕ್ಕೆ‌ ಮುಂದಾಗಿದ್ದ ಯುವಕನೋರ್ವ ಪ್ರಾಣಾಪಾಯದಿಂದ ಬಚಾವ್ ಆಗಿರುವ ಘಟನೆ ದೇವರಬೆಳಕೆರೆ ಪಿಕಪ್ ಡ್ಯಾಂ ಬಳಿ ನಡೆದಿದೆ.

ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಮೀನು ಹಿಡಿಯುವ ದುಸ್ಸಾಹಸಕ್ಕೆ ಯುವಕನೋರ್ವ ಮುಂದಾಗಿದ್ದು, ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.

ದೇವರಬೆಳಕೆರೆ ಪಿಕಪ್ ಡ್ಯಾಂ ನಲ್ಲಿ ವರುಣನಾ ಅಬ್ಬರದಿಂದಾಗಿ ಒಳಹರಿವು ಹೆಚ್ಚಾದ ಹಿನ್ನೆಲೆ ಎಲ್ಲ ಗೇಟ್ ಗಳನ್ನು ಸಿಬ್ಬಂದಿಗಳು ತೆಗೆದಿದ್ದು, ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಇಂತಹ ವೇಳೆಯಲ್ಲೂ ನೀರಿನಲ್ಲಿ ಮೀನು ಹಿಡಿಯಲು ಯುವಕ ಮುಂದಾಗಿದ್ದ, ನೀರಿನ ಹರಿವು ಹೆಚ್ಚಾಗಿದ್ದರಿಂದ ಇದ್ದಕ್ಕಿದ್ದಂತೆ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ಕೆಲ ಯುವಕರ ಗುಂಪು ಹಗ್ಗ ಬಿಟ್ಟು ಯುವಕನನ್ನು ರಕ್ಷಣೆ ಮಾಡಿತು.

ಪಿಕಪ್ ಡ್ಯಾಂಗೆ ಭಾರಿ ನೀರು ಬಂದ ಹಿನ್ನೆಲೆ ಇಂತಹ ಅವಘಡಗಳು ಸಂಭವಿಸುವ ಭೀತಿಯಲದಲಿರುವ ಅಲ್ಲಿನ ಸ್ಥಳೀಯರು ಪೊಲೀಸ್ ಭದ್ರತೆ ನೀಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!