ಪಿ ಪಿ ಇ‌ ಕಿಟ್ ಧರಿಸಿದ್ದ ಆದಿಚುಂಚನಗಿರಿ ಸ್ವಾಮೀಜಿ ಕೊವಿಡ್ ವಾರ್ಡ್ ನಲ್ಲಿ, ಶ್ರೀಗಳು ಕೊವಿಡ್ ವಾರ್ಡ್‌ನಲ್ಲಿ ಏನು ಮಾಡಿದ್ರು..? ಇದನ್ನ ಓದಿ

Aadichunchanagiri Swamyji PPE Kit Wearing

ಹೆಚ್ ಎಂ ಪಿ ಕುಮಾರ್

ಬೆಂಗಳೂರುಃ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಇಂದು ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನ AIMS ಕೋವಿಡ್ ವಾರ್ಡ್ ಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ವಿತರಣೆ ಮಾಡುವುದರ ಮೂಲಕ ಸಾಂತ್ವನ ಹೇಳಿದರು.  ಮಂಡ್ಯದ ನಾಗಮಂಗಲದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಕಾಲೇಜ್‌ನ ಆಸ್ಪತ್ರೆಗೆ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಸೋಂಕಿತರನ್ನು ಭೇಟಿ ನೀಡಿ ಆತ್ಮಸ್ಥೈರ್ಯ ನೀಡಿದರು.ಶೀಘ್ರ ಗುಣಮುಖರಾಗಿ ಎಂದು ಆಶೀರ್ವದಿಸಿ ಹಣ್ಣು-ಹಂಪಲು ನೀಡಿದರು.

ಇದಕ್ಕೂ ಮುನ್ನ ಸ್ವಾಮೀಜಿಗಳಿಗೆ ಆಸ್ಪತ್ರೆಯ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿದ್ರು, ಸ್ವಾಮೀಜಿಗಳು ಕೂಡ ಯಾವುದೇ ಅಂಜಿಕೆಯಿಲ್ಲದೆ ದೈರ್ಯವಾಗಿ ಆಸ್ಪತ್ರೆಯಲ್ಲಿರುವ ರೋಗಿಗಳಿನ್ನ ಬೇಟಿ ಮಾಡಿದ್ರು.

ಕೋವಿಡ್ ಚಿಕಿತ್ಸಾ ಕೇಂದ್ರ ಭೇಟಿ ನೀಡಿದ ನಂತರ ಮಾತನಾಡಿದ ಶ್ರೀಗಳು, ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕಯನ್ನು ಪ್ರತಿಯೊಬ್ಬರು ಸಹ ಹಾಕಿಸಿ ಕೊಳ್ಳಬೇಕು. ಕೋವಿಡ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಥಳದ ಅಭಾವ ಆದರೆ ನಮ್ಮ ಬೆಂಗಳೂರಿನ ವಿದ್ಯಾರ್ಥಿ ನಿಲಯಗಳನ್ನು ಸರ್ಕಾರ ಉಪಯೋಗಿಸಿ ಕೊಳ್ಳ ಬಹುದು ಎಂದರು.ಕೋವಿಡ್ ರೋಗವು ಅತಿಯಾಗಿ ಉಲ್ಬಣ ಆಗಿರುವ ಕಾರಣ ಶ್ರೀ ಕ್ಷೇತ್ರ ಆಗಮಿಸುವ ನಮ್ಮ ಭಕ್ತರು ದೂರದಲ್ಲಿಯೇ ದೇವರನ್ನು ಪ್ರಾರ್ಥನೆ ಸಲ್ಲಿಸಬೇಕು ಎಂದು ಆದಿಚುಂಚನಗಿರಿಗಳು ಭಕ್ತರಿಗೆ ಮನವಿ ಮಾಡಿದರು.

 

Leave a Reply

Your email address will not be published. Required fields are marked *

error: Content is protected !!