ಸೇವಂತಿ ಹೂ ಉಪಬೆಳೆಯಾಗಿ ಬೆಳೆದು ನೇರ ಮಾರಾಟದಿಂದ ಅಧಿಕ ಲಾಭಗಳಿಸಿದ ರೈತ.

ಚನ್ನಗಿರಿ: ತಾಲೂಕಿನ ಸಂತೇಬೆನ್ನೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದ ತಿಮ್ಮಣ್ಣ ಅಡಿಕೆಗಿಡಗಳ ನಡುವೆ ಅಂತರ ಬೆಳೆ ಯಾಗಿ ಸೇವಂತಿ ಹೂವನ್ನು ಬೆಳೆದು ಆರ್ಥಿಕ ಲಾಭ ಗಳಿಸುತ್ತಿದ್ದಾರೆ
ಕುಟುಂಬದ ಸದಸ್ಯರ ನೆರವಿನೊಂದಿಗೆ ಬೆಳೆದು, ತಾವೇ ನೇರ ಮಾರಾಟದ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ.
ಸುಮಾರು 30 ಗುಂಟೆ ಜಮೀನಿನಲ್ಲಿ ಸೇವಂತಿಹೂವು ಜೊತೆ ಸುಗಂಧರಾಜ ಹೂವಿನ ಕೃಷಿಯನ್ನೂ ಮಾಡುತ್ತಿದ್ದಾರೆ.
ನಿತ್ಯ ಸುಮಾರು 30 ಕೆ.ಜಿ. ಸೇವಂತಿ ಹೂವು . 2 ಕೆ.ಜಿ.ಯಷ್ಟು ಸುಗಂಧರಾಜ ಸಿಗುತ್ತದೆ.
ಕಟ್ಟಿದ ಸೇವಂತಿ ಹೂವನ್ನು ಭೂಮಿಯ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಮಾರಾಟ ಮಾಡುತಿದೂ .
ನಿತ್ಯ 100ರಿಂದ 150 ಮಾರು ಸೇವಂತಿ ಹೂವು ಮಾರಾಟವಾಗುತ್ತಿದೆ. 35 ರಿಂದ 50 ರೂಪಾಯಿವರೆಗೂ ಪ್ರತಿ ಮಾರು ಸೇವಂತಿಗೆ ಬಿಕರಿಯಾಗುತ್ತಿದೆ . ಸುಗಂಧರಾಜ ಪ್ರತಿ ಕೆ.ಜಿ.ಗೆ 80 ರೂಪಾಯಿಯಂತೆ ಮಾರಾಟವಾಗುತ್ತಿವೆ. ಶ್ರಾವಣಮಾಸದ ಜೊತೆ ಸಾಲು ಸಾಲು ಹಬ್ಬಗಳಿಂದ ಬೇಡಿಕೆ ಹೆಚ್ಚಿದೆ. ಗೌರಿ ಗಣೇಶ ಹಬ್ಬ, ದಸರಾ, ದೀಪಾವಳಿ ಹಬ್ಬಗಳಲ್ಲಿ ಸೇವಂತಿ ಹೂವಿಗೆ ಭಾರಿ ಬೇಡಿಕೆ ಇದೆ. ಆದ್ದರಿಂದ ಉತ್ತಮ ಲಾಭ ಗಳಿಸುವ ನಿರೀಕ್ಷೆ ಇದೆ. ಮನೆಯವರೆಲ್ಲಾ ಸೇರಿ ಪುಷ್ಪ ಕೃಷಿ ಮಾಡುತ್ತಿರುವುದರಿಂದ ಕೂಲಿ ವೆಚ್ಚ ಕಡಿಮೆ ಎನ್ನುತ್ತಾರೆ ಈ ರೈತ