ಎಸ್ ಎಸ್ ಎಂ ಅಭಿಮಾನಿ ಬಳಗದಿಂದ ಸಿರಿಗೆರೆ ಮಠಕ್ಕೆ 200 ಕ್ವಿಂಟಾಲ್ ಅಕ್ಕಿ ವಿತರಣೆ

IMG-20210921-WA0025

 

ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ ಅವರ ಅಭಿಮಾನಿಗಳ ಬಳಗದ ವತಿಯಿಂದ ಶ್ರೀ ತರಳಬಾಳು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 29ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ 200 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಯಿತು.

ನಗರದ ಕಲ್ಲೇಶ್ವರ ಮಿಲ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಅಕ್ಕಿಯನ್ನು ಸಮರ್ಪಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಪ್ರತಿವರ್ಷವೂ ಸಹ ದಾವಣಗೆರೆ ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದ ಭಕ್ತರು ಅಕ್ಕಿ ಸಮರ್ಪಿಸುತ್ತಾ ಬಂದಿದ್ದು, ಈ ಬಾರಿಯೂ ನೀಡುತ್ತಿದ್ದಾರೆ.  ‌ಶ್ರೀ ತರಳಬಾಳು ಜಗದ್ಗುರು ಲಿಂ.ಶ್ರೀ 1108 ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ  29ನೇ ಶ್ರದ್ಧಾಂಜಲಿ ಕಾರ್ಯಕ್ರಮವೂ ಸಹ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು. ಆದರೂ ದಾವಣಗೆರೆ ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದ ಭಕ್ತರು 200 ಕ್ವಿಂಟಾಲ್ ಅಕ್ಕಿಯನ್ನು ಮಠದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮರ್ಪಿಸಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು.

ಈ ಸಂದರ್ಭದಲ್ಲಿ ಚಿ. ಎಸ್.ಎಂ.ಸಮರ್ಥ, ಎಸ್.ಎಸ್.ಮಲ್ಲಿಕಾರ್ಜುನ ಅವರ ಅಭಿಮಾನಿಗಳ ಬಳಗದ ಮುದೇಗೌಡ್ರ ಗಿರೀಶ್, ಬಿ.ಕರಿಬಸಪ್ಪ, ಬಿ.ಕೆ.ಪರಶುರಾಮ್, ಜಿ.ಎಸ್.ಮಂಜುನಾಥ್, ಶ್ಯಾಗಲೆ ಜಯಕುಮಾರ್, ಕಾಡಜ್ಜಿ ಚಂದ್ರಣ್ಣ, ಬೂದಾಳ್ ಬಾಬು, ಕೆ.ಎಸ್.ಬಸವಂತಪ್ಪ,ಹೆಚ್.ಆನಂದಪ್ಪ, ಕಡ್ಲೆಬಾಳು ಮರುಳಸಿದ್ದೇಶ್, ಬೇವಿನಹಳ್ಳಿ ಯಶವಂತಗೌಡ, ಬೇತೂರು ಬಸವರಾಜಯ್ಯ,  ಮಂಜುನಾಯ್ಕ, ಕರಿಬಸಪ್ಪ ಯರಗುಂಟೆ, ಕಲಪನಹಳ್ಳಿ ಚೇತನಕುಮಾರ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!