ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಗೆ ಹರಿದುಬಂದ ಶುಭಾಶಯಗಳ ಮಹಾಪೂರ: ಕೇದಾರ ಶ್ರೀಗಳಿಂದ ಆಶೀರ್ವಾದ

ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 54ನೇ ಜನ್ಮದಿನದ ಹಿನ್ನೆಲೆಯಲ್ಲಿ ಸಾವಿರಾರು ಗಣ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಅಧಿಕಾರಿ ವರ್ಗದವರು ಶುಭಾಶಯಗಳನ್ನು ಕೋರಿದರು.
ಇಂದು ಬೆಳಿಗಿನಿಂದಲೂ ಶಿವಪಾರ್ವತಿ ನಿವಾಸಕ್ಕೆ ಆಗಮಿಸಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಶುಭಶಯಗಳ ಸುರಿಮಳೆಗೈದರು.
ದಾವಣಗೆರೆಗೆ ಆಗಮಿಸಿದ್ದ ಕೇದಾರ ಪಂಚಪೀಠದ ಶ್ರೀ ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮಿಗಳವರು ಮಲ್ಲಿಕಾರ್ಜುನ್ ಅವರಿಗೆ ಆಶೀರ್ವದಿಸಿ, ಜನ್ಮದಿನಕ್ಕೆ ಶುಭಕೋರಿದರು.
ಮೊದಲಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಪುತ್ರ ಎಸ್.ಎಂ.ಸಮರ್ಥ, ಸಂಬಂಧಿಗಳಾದ ಶ್ರೀಮತಿ ಗಿರಿಜಮ್ಮ ಪರಮೇಶ್ವರಪ್ಪ, ಶ್ರೀಮತಿ ಗಿರಿಜಾ ಉಮಾಪತಿ, ಜೆಜೆಎಂ ಕಾಲೇಜು ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶ್ ಸೇರಿದಂತೆ ಕುಟುಂಬದ ಸದಸ್ಯರುಗಳು, ಸಂಬಂಧಿಕರು ಶುಭಾಶಯ ತಿಳಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಆಗಮಿಸಿ ಶುಭಾಶಯ ತಿಳಿಸಿದರು.
ಕೋವಿಡ್-19 ಹಿನ್ನಲೆಯಲ್ಲಿ ಜನ್ಮದಿನದ ಶುಭಾಶಯ ತಿಳಿಸಲು ತಾವುಗಳು ಗುಂಪು-ಗುಂಪಾಗಿ ಬರದೆ ನೀವು ಇದ್ದ ಕಡೆಯಿಂದಲೇ ನನಗೆ ಶುಭ ಹಾರೈಸಬೇಕೆಂದು ಮಲ್ಲಿಕಾರ್ಜುನ್ ಅವರು ಮಾಧ್ಯಮಗಳ ಮೂಲಕ ವಿನಂತಿಸಿದ್ದರೂ ಸಹ ವಿವಿಧ ಸಂಘ-ಸಂಸ್ಥೆಗಳವರು, ಗಣ್ಯರು, ಅಧಿಕಾರಿವರ್ಗದವರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೂ ತಂಡೋಪತಂಡವಾಗಿ ಶುಭಾಷಯ ತಿಳಿಸಲು ಆಗಮಿಸಿದ್ದರು.
ಜೆಜೆಎಂ ವೈದ್ಯಕೀಯ ಕಾಲೇಜು ಮತ್ತು ಎಸ್.ಎಸ್.ವೈದ್ಯಕೀಯ ಕಾಲೇಜುಗಳ ವತಿಯಿಂದ ರಕ್ತದಾನ ಶಿಬಿರ, ಕೋವಿಡ್-19 ಉಚಿತ ಲಸಿಕಾ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ನಡೆದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಘಟಕದಿಂದ ತುರ್ಚಘಟ್ಟದ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರಿಗೆ ಹೋಳಿಗೆ ಊಟ ನೀಡಿ ಕೇಂದ್ರಕ್ಕೆ ವಿವಿಧ ವಸ್ತುಗಳನ್ನು ಮಲ್ಲಿಕಾರ್ಜುನ್ ಅವರಿಂದಲೇ ವಿತರಿಸಲಾಯಿತು.
ನಂತರ ಬೆಳವನೂರು ಗ್ರಾಮದಲ್ಲಿ ಏರ್ಪಡಿಸಿದ್ದ ಜನ್ಮದಿನದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಅವರು ಭಾಗವಹಿಸಿದ್ದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಘಟಕದಿಂದ ಹಾಗೂ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ (ರಾಂ ಅಂಡ್ ಕೋ)ದಲ್ಲಿ ಪೌರಕಾರ್ಮಿಕರಿಗೆ ಸೀರೆ ಮತ್ತು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಮಲ್ಲಿಕಾರ್ಜುನ್ ಅವರ ನಿವಾಸದ ಬಳಿಯೂ ಸಹ ಅವರ ಅಭಿಮಾನಿಗಳು ಏರ್ಪಡಿಸಿದ್ದ ಅನ್ನಸಂತರ್ಪಣೆಗೆ ಮಲ್ಲಿಕಾರ್ಜುನ್ ಅವರೇ ಚಾಲನೆ ನೀಡಿದರು.
ನಗರದ ರಾಜೇಂದ್ರ ಬಡಾವಣೆಯ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಕುಂಕುಮ ಅರ್ಚನೆ ನಡೆಸಿದ ಸೇವಾದಳದವರು ಸಾರ್ವಜನಿಕರಿಗೆ ಮಾಸ್ಕ ಹಾಗೂ ಸ್ಯಾನಿಟೇಜರ್ ಹಂಚಿ ಸಸಿ ನೆಡುವ ಮೂಲಕ ಆಚರಣೆ ಮಾಡಿದರು.
ಅಸಂಘಟಿತ ಕಾರ್ಮಿಕರಿಂದ ವೃದ್ದಾಶ್ರಮದವರಿಗೆ ಹಣ್ಣು-ಹಂಪಲು ಹಾಗೂ ಮಾಯಕೊಂಡ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಪೌಷ್ಠಿಕ ಆಹಾರವನ್ನು ವಿತರಿಸಲಾಯಿತು.
ಬಸಾಪುರದಲ್ಲಿ ಕೆ.ಎಲ್. ಹರೀಶ್ ಕುಟುಂಬ ವರ್ಗದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ ಬೂದಾಳ್ ರಸ್ತೆಯಲ್ಲಿ ಏರ್ಪಡಿಸಿದ್ದ ಮಯೂರ ಫಿಟ್ನೆಸ್ ಕೇಂದ್ರವನ್ನು ಉದ್ಘಾಟಿಸಿದ ಮಲ್ಲಿಕಾರ್ಜುನ್ ಅವರು ಬಿ.ಕಲಪನಹಳ್ಳಿ ಮತ್ತು ಭಾರತ್ ಕಾಲೋನಿ, ಶೇಖರಪ್ಪ ನಗರ ನಿವಾಸಿಗಳು ಏರ್ಪಡಿಸಿದ್ದ ಜನ್ಮದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.