ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಯತ್ನ.! ರೈತರು, ಕನ್ನಡಪರ ಸಂಘಟನೆ ಕಾರ್ಯಕರ್ತರ ಬಂಧನ

ದಾವಣಗೆರೆ : ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆಯ ವಿರೋಧಿಸಿ ಇಂದು ಕರೆದಿದ್ದ ಭಾರತ್ ಬಂದ್ ಬೆಂಬಲಿಸಿ ವಿವಿಧ ರೈತ ಸಂಘಟನೆಗಳು ಕೋಡಿಹಳ್ಳಿ ಚಂದ್ರಶೇಖರ್ ಬಣದ ಜಿಲ್ಲಾಧ್ಯಕ್ಷರು ಚನ್ನಬಸಪ್ಪ ತಾಲೂಕಿನ ಕಾರ್ಯಾಧ್ಯಕ್ಷರು ಸಂತೋಷ್, ಶೇರ್ ಅಲಿ ಜೈ ಕರುನಾಡ ವೇದಿಕೆ ಜಿಲ್ಲಾಧ್ಯಕ್ಷ ಟಿ ಮಂಜುನಾಥ್ ಗೌಡ ಮತ್ತು ಕಾರ್ಯಕರ್ತರೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಮುಂದಾದಾಗ ಪೊಲೀಸರಿಂದ ಸುಮಾರು 20 ಕ್ಕು ಹೆಚ್ಚು ರೈತ ಹಾಗೂ ಕನ್ನಡ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ಬಂದಿಸಿ ಕರೆದೊಯ್ಯಲಾಯಿತು.
ದಾವಣಗೆರೆ ಜಿಲ್ಲಾ ಪಂಚಾಯತ್ ಕಚೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಪ್ರತಿಭಟನಾ ನಿರತ 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ