ದಮ್ಮಯ್ಯ ಬಿಟ್ಟು ಬಿಡಿ, ನಿಮಗೆ ನಾನು ನೆರಳು, ಗಾಳಿ, ನಿಮ್ಮ ವಾಹನಗಳಿಗೆ ರಕ್ಷಣೆ ಕೊಟ್ಟಿದ್ದೀನಿ, ಮರದ ಮಾತು ಕೆಳದೇ ಮರಕಡಿತಲೆ ಮಾಡಿಯೇ ಬಿಟ್ಟ! ಎಲ್ಲಿ ಗೊತ್ತಾ

Tree cut zp dvg

ಹೆಚ್ ಎಂ ಪಿ ಕುಮಾರ್

ದಾವಣಗೆರೆ:ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟ ನಂತರ 1999 ರಲ್ಲಿ ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ನೇತೃತ್ವದಲ್ಲಿ ದಾವಣಗೆರೆಯನ್ನ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಯಿತು. ಅಂದು ಮಾನ್ಯ ಮುಖ್ಯಮಂತ್ರಿಗಳು ದಾವಣಗೆರೆ ಹೊರ ವಲಯದಲ್ಲಿ ಜಿಲ್ಲಾ ಪಂಚಾಯತ್ ಕಟ್ಟಡವನ್ನ ಉದ್ಘಾಟಿಸಿದ್ದರು, ಅಂದಿನಿಂದ ಇಲ್ಲಿಯವರೆಗೂ ಜಿ ಪಂ ಆವರಣದಲ್ಲಿದ್ದ ಮರಗಳಿಂದ ಸಿಬ್ಬಂದಿ ಗಳಿಗೆ ಉತ್ತಮವಾದ ವಾತಾವರಣ ನಿರ್ಮಾಣವಾಗಿತ್ತು, ಆದ್ರೆ ನಾಳೆಯಿಂದ ಜಿಪಂ ಸಿಬ್ಬಂದಿಗಳಿಗೆ ಉತ್ತಮ ಗಾಳಿ ಸೀಗೊದು ಅನುಮಾನ.

ದಾವಣಗೆರೆ ಜಿಲ್ಲಾ ಪಂಚಾಯತಿ ಆವರಣದಲ್ಲಿ ಜೆಸಿಬಿ ಬಳಸಿ ಮರಕಡಿತಲೆ ಮಾಡುತ್ತಿರುವುದು. ಸುಮಾರು ವರ್ಷದಿಂದ ಗಾಳಿ ನೆರಳು ನೀಡಿದ್ದ ಮರವೀಗ ಕನಸು ಮಾತ್ರ,

ದಾವಣಗೆರೆ ಜಿಲ್ಲಾ ಪಂಚಾಯತ್ ಆವರಣದಲ್ಲಿ ಅರಣ್ಯ ಇಲಾಖೆಯ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಪುನಃ ಮರ ಕಡಿತಲೆಗೆ ಮುಂದಾಗಿದ್ದಾರೆ, ಆವರಣದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹೆಸರಲ್ಲಿ ಮರಕಡಿತಲೆ ಮಾಡಲಾಗಿದೆ, ರಸ್ತೆ ಕಾಮಗಾರಿಗೂ ಮರಕಡಿತಲೆಗು ಏನು ಸಂಬಂಧ..?

ಜಿಲ್ಲಾ ಪಂಚಾಯತ್ ಆವರಣದಲ್ಲಿ ಸುಮಾರು ವರ್ಷಗಳಿಂದ ಈ ಮರದಿಂದ ಯಾರಿಗೂ ಇದುವರೆಗೂ ತೊಂದರೆಯಾಗಿದ್ದಿಲ್ಲ, ಇತ್ತೀಚಿಗೆ ಯಾರದೋ ಕಾರಿಗೆ ಮರದ ರೆಂಬೆ ಬಿದ್ದು ಗಾಜು ಹೊಡೆದಿತ್ತಂತೆ ಅದಕ್ಕೆ‌ ಮರದ ಕೊಂಬೆಗಳನ್ನ ಕಟ್ ಮಾಡಲು ತಿಳಿಸಿದ್ದಾರೆ ಅಂತಾರೆ ಸ್ಥಳೀಯ ಕಾಮಗಾರಿ ನಡೆಸುತ್ತಿದ್ದ ವ್ಯಕ್ತಿ,ಆದರೆ ಮರದ ಹೊಣಗಿರುವ ಗಾಳಿಗೆ ಬೀಳುವ ಟೊಂಗೆಗಳನ್ನ ಮಾತ್ರ ಕಟ್ ಮಾಡಬಹುದಾಗಿದೆ ಆದರೆ ಇಲ್ಲಿ ಬುಡದಿಂದ ಹತ್ತಾರು ಅಡಿ ಬಿಟ್ಟು ಮರದಲ್ಲಿದ್ಧ ಎಲ್ಲಾ ಟೊಂಗೆಗಳನ್ನ ಕಡಿಯಲಾಗಿದೆ.

ಪರವಾನಿಗೆಯನ್ನು ಪಡೆಯದೇ ಮರಕಡಿತಲೆ ಮಾಡಿದ್ದು ಎಷ್ಟು ಸರಿ,

ಮರಕಡಿತಲೆ ಬಗ್ಗೆ ನಾವುಗಳು ವಿರೋಧ ಮಾಡಿದ್ದಕ್ಕೆ ಹಾಗು ಅರಣ್ಯ ಇಲಾಖೆಯವರ ಗಮನಕ್ಕೆ ತಂದಾಗ ತಾತ್ಕಾಲಿಕವಾಗಿ ಮರದ ಕೊಂಬೆಗಳನ್ನ ಕಟ್ ಮಾಡಿ ಹಾಗೆ ಬಿಡಲಾಗಿತ್ತು.ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬರುವುದನ್ನ ಖಚಿತ ಪಡಿಸಿಕೊಂಡು ಸ್ಥಳದಿಂದ ಕಾಂಟ್ರಾಕ್ಟ್ ರ್ ಎಸ್ಕೇಪ್ ಆಗಿದ್ದ. ನಂತರ ಕಾಮಗಾರಿಯ ಮುಖ್ಯ ಗುತ್ತಿಗೆದಾರ ಬಂದು ಪುನಃ ಮರದಲ್ಲಿದ್ದ ಎಲ್ಲಾ ರೆಂಬೆಗಳನ್ನ ಜೆಸಿಬಿ ಯಿಂದ ಕಟ್ ಮಾಡಿ ಪಂಚಾಯಿತಿಯ ಹೊರಗಡೆ ಬಿಸಾಡಲಾಗಿದೆ. ಈ ಬಗ್ಗೆ ಪುನಃ ಅರಣ್ಯ ಇಲಾಖೆಯ ಗಮನಕ್ಕೆ ತಂದಾಗ, ನಾಳೆ ಬೆಳಗ್ಗೆ ಬಂದು ಸಂಬಂದಿಸಿದವರ ಮೇಲೆ ಕೇಸ್ ಮಾಡಲಾಗುವುದು ಎಂದಿದ್ದಾರೆ ಅರಣ್ಯಾಧಿಕಾರಿಗಳು.

ಮರವನ್ನ ಯಾಕೆ ಹಾಗೂ ಯಾರು ಕಡಿಯಲು ಹೇಳಿದ್ದಾರೆ ಅಂತಾ ಕೇಳಿದ್ರೆ, ಎಇಇ ಹಾಗೂ ಇಂಜಿನಿಯರ್ ಪುಟ್ಟಸ್ವಾಮಿ ಮತ್ತು ಜಿಲ್ಲಾ ಪಂಚಾಯಿತಿ ಮೆಂಟೆನೆನ್ಸ್ ಮಾಡುವ ಪ್ರಭು ಎಂಬುವವರು ಹೇಳಿದ್ದಾರೆ ಅಂತಾರೆ, ಮರ ಕಡಿಯಲು ಪರವಾನಿಗೆ ತೋರಿಸಿ ಅಂದ್ರೆ ಅಲ್ಲಿದೆ ಇಲ್ಲಿದೆ ಅಂತಾರೆ, ಕೊನೆಗೂ ಸ್ಥಳದಲ್ಲಿ ಇದ್ದವರಿಂದ ಪರವಾನಿಗೆ ಬಗ್ಗೆ ಕೇಳಿದ್ರೆ ಉತ್ತರವಿಲ್ಲ ಇದನ್ನ ನೋಡಿದ್ರೆ ಇವರ ನಡುವಳಿಕೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಜಿಪಂ ಸಿಬ್ಬಂದಿಗಳ ವಾಹನಕ್ಕಿಲ್ಲ ನೆರಳು

ಇದೇ ಜಿಲ್ಲಾ ಪಂಚಾಯತ್ ಆವರಣದಲ್ಲಿ ಕಳೆದ ಮೂರು ತಿಂಗಳ ಹಿಂದೆ ಕೂಡ ಕ್ಯಾಂಟಿನ್ ನಿರ್ಮಾಣ ಮಾಡಲು ಮರಗಳನ್ನ ಕಡಿಯಲಾಗಿತ್ತು. ಅರಣ್ಯ ಇಲಾಖೆಯವರು 8000 ರುಪಾಯಿ ದಂಡ ವಿಧಿಸಿ ಕೇಸ್ ಕೂಡ ಮಾಡಲಾಗಿತ್ತು, ಆದ್ರೆ ಇಂದು ಮತ್ತೆ ಮರ ಕಡಿತಲೆ ಮಾಡಲಾಗಿದೆ, ಕಚೇರಿಯ ಸಿಬ್ಬಂದಿಗಳಿಗೆ ಉತ್ತಮ ನೆರಳು ಗಾಳಿ ಅಲ್ಲದೆ ತಮ್ಮ ವಾಹನಗಳಿಗೆ ಈ ಮರದ ನೆರಳಿನಲ್ಲಿ ನಿಂತು ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದವು,ಇದೀಗ ಬಿಸಿಲಿನ ತಾಪಕ್ಜೆ ವಾಹನಗಳಿಗೆ ಇನ್ನಿಲ್ಲದಂತೆ ತೊಂದರೆಗಳು ನಿರ್ಮಾಣವಾಗುವುದಂತು ಸತ್ಯ.

ಒಟ್ಟಾರೆ ಮರಕಡಿತಲೆಗೆ ಯಾರ ಪರವಾನಗಿಯನ್ನು ಪಡೆಯದೇ ಕಡಿದು ನಂತರ ದಂಡ ವಿಧಿಸಿದರೆ ಏನು ಬಂತು, ಮತ್ತೆ ಅದೇ ರೀತಿ ಪುನಃ ಮರ ಬೆಳೆಯಲು ಎಷ್ಟು ವರ್ಷ ಬೇಕು..? ಕೊರೊನಾ ದಿಂದ ಆಕ್ಸಿಜನ್ ಗಾಗಿ ಎಲ್ಲರೂ ಓದ್ದಾಡುತ್ತಿದ್ದರೆ, ದಾವಣಗೆರೆಯಲ್ಲಿ ಯಾರ ಮೂಲಾಜಿಲ್ಲದೆ ಕಾಮಗಾರಿ ನೆಪದಲ್ಲಿ ಕುಂಟು ನೆಪ ಹೇಳಿಕೊಂಡು ಮರಗಳನ್ನ ಕಡಿಯಲಾಗುತ್ತಿದೆ, ಇದನ್ನ ರಕ್ಷಿಸುವವರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಾರಾ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!