ಹರಿಹರ ತಾಲೂಕು ಕಮಲಾಪುರದಲ್ಲಿ ಮನೆ ಕುಸಿತ, ಓರ್ವ ಮಹಿಳೆ ಗಾಯ.! 12 ಮಂದಿ ಪವಾಡ ಸದೃಶ ಪಾರು

ದಾವಣಗೆರೆ: ಭಾರೀ ಮಳೆ ಸುರಿದರಿಂದಾಗಿ ಮನೆಯೊಂದು‌ ಕುಸಿದ ಪರಿಣಾಮ ಮಹಿಳೆಯೊಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 2 ಹಸುಗಳು‌ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಮಧ್ಯರಾತ್ರಿ‌ ನಡೆದಿದೆ.ಗ್ರಾಮದ ನೀಲಮ್ಮ ಗಾಣಿಗೇರ ಎಂಬುವವರೇ ಗಾಯಗೊಂಡ ಮಹಿಳೆ.

ಮನೆ ಕುಸಿಯುವ ಸಂದರ್ಭ ಮನೆಯಲ್ಲಿ 12 ಜನ‌ ಮಲಗಿದ್ದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಅಪಾಯದಿಂದ ಪಾರಾಗಿದ್ದಾರೆ‌. ಗಿರಿಜಮ್ಮ ಎಂಬ ಮಹಿಳೆ ಮಣ್ಣಿನಲ್ಲಿ ಹೂತು ಹೋಗಿದ್ದರು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಹೊರ ತೆಗೆಯಿತಲಾದರೂ ತೀವ್ರ ಅಸ್ವಸ್ಥರಾದ ಪರಿಣಾಮ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ‌ ಇರಿಸಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್, ಪಿಡಿಒ, ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!