ಜಗಳೂರು ಪೋಲಿಸ್ ರ ಕಾರ್ಯಾಚರಣೆ, ಓರ್ವ ಬೈಕ್ ಕಳ್ಳನ ಬಂಧನ, 06 ಬೈಕ್‌ಗಳು ವಶ

IMG_20210502_210506

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಿರೇಅರೇಕೆರೆ ಗ್ರಾಮದ ಉಮಾಪತಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೆಎ-17-ವೈ-2049 ನೇ ಮೋಟಾರ್ ಬೈಕನ್ನು ದಿನಾಂಕ-27.08.2020 ರಂದು ಜಗಳೂರು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ನನ್ನ ಬೈಕ್ ಅನ್ನ ಯಾರೋ ಆರೋಪಿ ಮತ್ತು ಮೊಟಾರ್ ಬೈಕುಗಳನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸುವಂತೆ ದೂರನ್ನು ಸಲ್ಲಿಸಿರುತ್ತಾರೆ. ಜಗಳೂರು ಪೊಲೀಸ್ ಠಾಣೆಯ ಗುನ್ನೆ ನಂ-159/2020 ಕಲಂ-379 ಐಪಿಸಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.

ಸದರಿ ದೂರಿನ ಅನ್ವಯ, ದಿನಾಂಕ-01.05.2021ಪೊ ಲೀಸ್ ಠಾಣೆಯ ಗುನ್ನೆ ನಂ-159/2020 ಪ್ರಕರಣದಲ್ಲಿ ಆರೋಪಿತರಾದ ಮಂಜುನಾಥ 40 ವರ್ಷ, ಬೈಕ್ ಮೆಕಾನಿಕ್ ಕೆಲಸ, ಜಗಳೂರು ಗೊಲ್ಲರಹಟ್ಟಿ ಗ್ರಾಮ, ಜಗಳೂರು ತಾ, ಈತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ‘ ಪ್ರಕರಣಕ್ಕೆ ಸಂಬಂಧಿಸಿದ ಕೆಎ-17-ವೈ-2049 ನೇ ಮೋಟಾರ್ ಬೈಕ್ ಮತ್ತು 2020-21 ನೇ ಸಾಲಿನಲ್ಲಿ ವಿವಿಧ ದಿನಾಂಕಗಳಲ್ಲಿ ಕಳ್ಳತನ ಮಾಡಿದ್ದ ಇತರೆ ಒಟ್ಟು 05 ಮೋಟಾರ್ ಬೈಕುಗಳು ಒಟ್ಟು 06 ಬೈಕುಗಳನ್ನು (ಅಂದಾಜು ಬೆಲೆ 1,50,000/-ರೂಗಳು) ಆರೋಪಿತನಿಂದ ಅಮಾನತ್ತು ಪಡಿಸಿಕೊಂಡಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿ ಪತ್ತೆ ಕಾರ್ಯಾಚರಣೆಯನ್ನು ದಾವಣಗೆರೆ ಎಸ್ ಪಿ ಹನುಮಂತರಾಯ, ರಾಜೀವ್,ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ.ನರಸಿಂಹ ವಿ ತಾಮ್ರಧ್ವಜ ರವರುಗಳು ಮಾರ್ಗದರ್ಶನದಲ್ಲಿ ಜಗಳೂರು ವೃತ್ತ ನಿರೀಕ್ಷಕ ಮಂಜುನಾಥ ಪಂಡಿತ್ ನೇತೃತ್ವದಲ್ಲಿ, ಜಗಳೂರು ಪೊಲೀಸ್ ಠಾಣೆ ಪಿ.ಎಸ್.ಐ  ಸಂತೋಷ್ ಬಾಗೋಜಿ, ಎ.ಎಸ್.ಐ ಶ್ರೀ ನಾಗರಾಜ ಆರ್, ಶ್ರೀ ಚಂದ್ರಶೇಖರ್ ಸಿ.ಎನ್ ಹಾಗೂ
ಸಿಬ್ಬಂದಿಗಳಾದ ನಾಗಭೂಷಣ, ಪ್ರವೀಣ ಪಾಟೀಲ್, ನಾಗರಾಜ ಹೆಚ್, ಹನುಮಂತಪ್ಪ ಕವಾಡಿ, ಮಾರುತಿ, ಬಸವರಾಜ,ಎಂ, ಮಂಜುನಾಥ ಹೆಚ್ ಹಾಗು ಅಶೋಕ್ ರವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿರುತ್ತಾರೆ, ಜಿಲ್ಲಾ ಪೊಲೀಸ್ ಅಧೀಕ್ಷಕರು ರವರು ಸದರಿ ಪತ್ತೆ ಮಾಡಿದ ತಂಡಕ್ಕೆ ಶ್ಲಾಘನೆ ಮಾಡಿರುತ್ತಾರೆ..

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!