ಮಹಾನಗರ ಪಾಲಿಕೆ ಎದುರಿನ ರೈಲ್ವೆ ಅಂಡರ್ ಬ್ರಿಡ್ಜ್ ಸಾರ್ವಜನಿಕ ಸೇವೆಗೆ ಲಭ್ಯವಾಗಲಿ – ಎಂ ಜಿ ಶ್ರೀಕಾಂತ್

WhatsApp Image 2021-11-01 at 7.11.13 PM

ದಾವಣಗೆರೆ: ಹಲವಾರು ‌ದಿನಗಳಿಂದ ಶಾಶ್ವತ ಕಾಮಗಾರಿ ಯಾಗಬೇಕೆಂಬ ದಾವಣಗೆರೆ ಜನರ ಆಗ್ರಹಕ್ಕೆ ಹಾಗೂ ಸಾಮಾಜಿಕ ತಾಣದ ಅಭಿಯಾನಕ್ಕೆ ಸ್ಪಂದಿಸಿ ತ್ವರಿತವಾಗಿ ವಾಗಿ ರೈಲ್ವೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸ್ಥಳಕ್ಕೆ ಕರೆಸಿ ಅವರ ಜೊತೆ ಚರ್ಚಿಸಿದ ದಾವಣಗೆರೆ ಮೇಯರ್ ಎಸ್ ಟಿ ವಿರೇಶ್ ಅವರ ಮುತುವರ್ಜಿ, ವಿಶೇಷ ಕಾಳಜಿಗಿ ನಮ್ಮದೊಂದು ಸಲಾಂ.

ಪ್ರತಿ ದಿನ‌ ಭೇಟಿಯ ಪರಿಣಾಮದಿಂದ ಹಾಗೂ ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಹಾಗೂ ಪಾಲಿಕೆ ಅಧಿಕಾರಿಗಳ ತ್ವರಿತಗತಿಯಲ್ಲಿ ನೀಡಿದ ಸಹಕಾರದಿಂದ ಮಹಾನಗರ ಪಾಲಿಕೆ ಎದುರು ಇರುವ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ಬಂದಾಗ ನಿಲ್ಲುತ್ತಿದ್ದ ನೀರು ಹರಿದು ಹೋಗಲು ಸೆನ್ಸಾರ್ ಇರುವ ಮೋಟಾರ್ ಅಳವಡಿಕೆ ಮಾಡಿಸಿದ್ದಾರೆ.

ದಾವಣಗೆರೆಯ ಗುತ್ತಿಗೆದಾರರಾದ ವೀರಣ್ಣ. ಮಾಲತೇಶ್ ಅವರ ಸಿಬ್ಬಂದಿ ಗಳು ಸಹ ಇಲ್ಲಿ ದಿನವೆಲ್ಲಾ ಕೆಲಸ ಮಾಡಿದ್ದಾರೆ. ಪೇಂಟ್ ಹೊಡೆಸಿ.ಬೀದಿ ದೀಪ ಗಳನ್ನು ಸಹ ಅಳವಡಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಅಂಡರ್ ಪಾಸ್ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಪ್ರತ್ಯೇಕವಾಗಿ ಪರೋಕ್ಷವಾಗಿ ಇದರ ಶಾಶ್ವತ ಕಾಮಗಾರಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ಪೆಟ್ರೋಲ್ ದರ ಎರಿಕೆಯಲ್ಲಿ ಸುತ್ತಾಡಿ‌ ಸುತ್ತಾಡಿ ಹಳೇ ಭಾಗದಲ್ಲಿ ಖರೀದಿಗೆ ಹೋಗುತಿದ್ದ ಜನರು ಸ್ವಲ್ಪ ಸಮಾದಾನ ಪಡುತ್ತಾರೆ. ಎರಡು ತಿಂಗಳು ಉತ್ತರ ಸಂಚಾರ ಪೊಲೀಸ್ ಇಲಾಖೆಯವರು ಸಂಚಾರ ನಿಯಂತ್ರಣ ಮಾಡಲು ಬಹಳಷ್ಟು ಶ್ರಮ ವಹಿಸಿದ್ದಾರೆ. ಆದರೆ ಕೆಲವು ಕಡೆ ಪಾರ್ಕಿಂಗ್ ಸಮಸ್ಯೆ ಇರುತ್ತದೆ. ರೈಲ್ವೆ ನಿಲ್ದಾಣದ ಆವರಣದಲ್ಲಿ ಕಾರ್ ಪಾರ್ಕಿಂಗ್ ಮಾಡಲು ದಾವಣಗೆರೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕಾಗಿದೆ.

ಅತಿಥಿ ಚಿತ್ರ ಬರಹ: ಎಂ ಜಿ ಶ್ರೀಕಾಂತ್

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!