ರೇಣುಕಾ ಮಂದಿರ ಪಕ್ಕದ ಹಳೇ ಅಂಡರ್ ಪಾಸ್ ಗೆ ಮೇಯರ್ ವಿರೇಶ್ ಭೇಟಿ

ದಾವಣಗೆರೆ: ಇಂದು ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರ ರಾದ ಎಸ್.ಟಿ.ವೀರೇಶ್ ಅವರು ನಗರರ ಹಳೆ ಮತ್ತು ಹೊಸ ನಗರಕ್ಕೆ ಸಂಪರ್ಕ ಕಲ್ಪಿಸುವ ರೇಣುಕಾ ಮಂದಿರ ಪಕ್ಕ ಇರುವ ಎರಡನೇ ಅಂಡರ್ ಪಾಸ್ ವೀಕ್ಷಿಸಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಬೀದಿ ದೀಪ, ಪೇವರ, ಅಳವಡಿಸಿ, ಸಾರ್ವಜನಿಕ ಯಾರು ಕೂಡಾ ಎಲ್ಲರಿಂದಲ್ಲಿ ಕಸ ನಿಯಂತ್ರಿಸಲು ಸಿ ಸಿ ಟಿವಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು,
ಬಾರಲೈನ್ ರಸ್ತೆಯಲ್ಲಿ ಚಿಕನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿನ ತ್ಯಾಜ್ಯಗಳನ್ನು ಮಹಾನಗರ ಪಾಲಿಕೆ ತ್ಯಾಜ್ಯ ಸರಬರಾಜು ವಾಹನಗಳಿಗೆ ನೀಡಬೇಕು ಎಂದು ಚಿಕನ್ ಸೆಂಟರ್ ಮಾಲೀಕರಿಗೆ ತಿಳಿಸಿದರು,

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ ಟಿ.ಪಾಟೀಲ, ಪಂಜು ,ಈಶ್ವರ, ಪೀಸಾಳಿ ಶ್ರೀನಿವಾಸ್ ಶ್ರೀ ಕಾಂತ್ ನಿಲಗುಂದ್,ರಮೇಶ್ ಬಸಪ್ಪ,
ಪಾಲಿಕೆ ಅಧಿಕಾರಿಗಳಾದ ಉದಯಕುಮಾರ್
ಸ್ಥಳೀಯರು ಉಪಸ್ಥಿತರಿದ್ದರು