NEP -2020 ವಿರೋಧಿಸಿ ಎ ಐ ಡಿ ಎಸ್ ಓ ಪ್ರತಿಭಟನೆ

ದಾವಣಗೆರೆ :ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಜೆಶನ್ ಸಂಘಟನೆಯಿಂದ ರಾಜ್ಯದಲ್ಲಿ ಎನ್.ಇ.ಪಿ.-2020 ಅನುಷ್ಠಾನ ವಿರೋಧಿಸಿ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ರಾಜ್ಯದ ಶ ಶಿಕ್ಷಣ ತಜ್ಞರು ಉಪನ್ಯಾಸಕರು ಸಾಹಿತಿಗಳು ವಿದ್ಯಾರ್ಥಿಗಳು ಹಾಗೂ ಪೋಷಕರ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ಇವೆಲ್ಲದರ ನಡುವೆ ರಾಜ್ಯ ಸರ್ಕಾರ ಅತ್ಯಂತ ತರಾತುರಿಯಲ್ಲಿ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಎನ್.ಇ ಪಿ 2020 ಆಧಾರಿತ ಪಠ್ಯಕ್ರಮ ತಯಾರ್ ಇಲ್ಲದಿದ್ದರೂ ಶಿಕ್ಷಕರಿಗಾಗಲಿ ಅಥವಾ ವಿದ್ಯಾರ್ಥಿ ಗಳಿ ಗಾಗಲಿ ಪಠ್ಯಕ್ರಮ ಸಿಗುತ್ತಿಲ್ಲ.
ನೂತನ ಶಿಕ್ಷಣ ನೀತಿಯಡಿ ಪಾಠಮಾಡುವ ಶಿಕ್ಷಕರಿಗೆ ತರಬೇತಿ ದೊರೆತಿಲ್ಲ ಈ ರೀತಿ ಪೂರ್ವತಯಾರಿ ಗಳಿಲ್ಲದೆ ಏಕಾಏಕಿ ಏರ್ಪಟ್ಟಿರುವ ನೂತನ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾಗುತದೆ. ಮತ್ತೊಂದು ಕಡೆ ಶಿಕ್ಷಣದ ಗುಣಮಟ್ಟಕ್ಕೆ ಮಾರಕವಾಗುತ್ತದೆ ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು
ಹಾಗೂ ಈ ಶಿಕ್ಷಣ ನೀತಿಯನ್ನು ಕುಲಂಕುಶವಾಗಿ ಗಮನಿಸಿ ಅನುಷ್ಠಾನಕ್ಕೆ ತಂದಿರುವ 4 ವರ್ಷದ ಪದವಿ ಕೋರ್ಸ್ ಅನ್ನು ವಿದ್ಯಾರ್ಥಿಗಳು ಶಿಕ್ಷಕರ ಭವಿಷ್ಯ ಆಗುವ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಸರ್ಕಾರ ವಾಪಸ್ ಪಡೆಯಬೇಕು ಎಂದರು
ಇದರೊಂದಿಗೆ ಈ ವರ್ಷದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಎಐಡಿಎಸ್ಓ ಪೂಜಾ ನಂದಿಹಳ್ಳಿ, ಕಾವ್ಯ, ಪುಷ್ಪ ,ತಿಪ್ಪೇಸ್ವಾಮಿ, ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು