ಅಧಿಕಾರಶಾಹಿಗಳು ಜವಾಬ್ದಾರಿಯನ್ನು ಕೈಚೆಲ್ಲುವ ಮುನ್ನ ಜನರು ಜಾಗೃತರಾಗಿ: ಕೊರೊನಾ ಹತೋಟಿಗೆ ತರಲು ವೈದ್ಯರನ್ನ ಗೌರವಿಸಿ,ತಮ್ಮ ಹಕ್ಕಿನ ಚಿಕಿತ್ಸೆ ಪಡೆದುಕೊಳ್ಳಿ

IMG-20210511-WA0081

ವರದಿ:  ಚೇತನ್ 

ಬೆಂಗಳೂರು: ಕೊರೋನಾ ಮೊದಲನೇ ಅಲೆಗೂ ಎರಡನೇ ಅಲೆಗೂ ಅಜಗಜಾಂತರ ವ್ಯತ್ಯಾಸವಿದ್ದು, ತಮ್ಮ ತಮ್ಮ ಜೀವಕ್ಕೆ ತಾವೇ ರಕ್ಷಕ ರಾಗಬೇಕು, ಸರ್ಕಾರ ಏನು ಮಾಡುತ್ತಿಲ್ಕ, ಅಧಿಕಾರಿಗಳು ವೈದ್ಯರುಗಳು ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿಕೊಂಡು ಕುಳಿತರೆ, ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ, ಆರೋಪಗಳನ್ನು ಮೊದಲು ನಿಲ್ಲಿಸಿ, ಜಾಗೃತರಾಗಿ.

ವೈದ್ಯೋ ನಾರಾಯಣ ಹರಿ, ವೈದ್ಯರೇ ದೇವರು. ಬಹುತೇಕರು ಮಕ್ಕಳನ್ನು ಡಾಕ್ಟರ್ ಮಾಡಬೇಕು ಎಂಬುವುದು ಅವರ ಜೀವನದ ಕನಸಾಗಿಸಿ ಕೊಂಡಿರುತ್ತಾರೆ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೊಡ್ಡವನಾದ್ಮೇಲೆ ಏನಾಗುತ್ತಿಯ ಎಂಬ ಪ್ರಶ್ನೆ ಕೇಳಿದರೆ ತಟ್ಟಂತ ಬರುತ್ತಿದ್ದ ಮೊದಲ ಉತ್ತರವೇ ನಾನು ಡಾಕ್ಟರ್ ಆಗುತ್ತೇನೆ ಸರ್ ಎಂದು. ಆದರೆ ಇಂದು ವೈದ್ಯ ವೃತ್ತಿ ಕಠಿಣ ಹಾಗೂ ಕಠೋರವಾಗಿದೆ. ಯಾಕಾದರೂ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆವು ಎಂಬ ಭಾವನೆ ಅವರಲ್ಲಿ ಮೂಡಿದೆ.

ಬಹುತೇಕ ವೈದ್ಯರುಗಳು ಇಂದು ಮಾನಸಿಕವಾಗಿ ಕುಗ್ಗುತ್ತಿದ್ದಾರೆ, ಪ್ರತಿದಿನ ಕೋರೊನದಿಂದ ಸಾವನ್ನಪ್ಪುತ್ತಿರುವ ರೋಗಿಗಳನ್ನು ಕಂಡು ಕರ್ತವ್ಯ ನಿರ್ವಹಿಸಲು ಭಯಪಡುತ್ತಿದ್ದಾರೆ.ಕೋರೋನ ಪರಿಸ್ಥಿತಿ ಕೈ ಮೀರುತ್ತಿದ್ದು, ವೈದ್ಯರು,ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡುವ ಬದಲು ಸಾರ್ವಜನಿಕರು ಸಂಪೂರ್ಣವಾಗಿ ಅವರಿಗೆ ಸಹಕಾರ ನೀಡಬೇಕಿದೆ ಒಗ್ಗಟ್ಟಿನಿಂದ ಕೋರೋನ ನಿರ್ಮೂಲನೆಗೆ ಕೈಜೋಡಿಸಬೇಕಾಗಿದೆ.

ಅಧಿಕಾರಿಗಳು ಕೈಚೆಲ್ಲಿದರೆ ಕಷ್ಟ:
ಪ್ರತಿದಿನ ಕೋರೋನದಿಂದ ಸಾವು ಸಂಭವಿಸುತ್ತಿದೆ. ಸುಮಾರು ಕೊರೋನಾ ಪಾಸಿಟಿವ್ ಕೇಸ್ ಗಳು ದಾಖಲಾಗಿದೆ, ನಿತ್ಯ ಪಾಸಿಟಿವ್ ಶತಕ ಬಾರಿಸುತ್ತಿದೆ. ಹೆಚ್ಚಾಗುತ್ತಿರುವ ಕೊರೋನ ಆರ್ಭಟದಲ್ಲಿ ಸಾರ್ವಜನಿಕರು ಸಹ ಭಯ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ವರ್ಗ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದು. ಯಾರಿಗೆ ಬೇಕು ಈ ಕೆಲಸ ಎಂಬ ಮನಸ್ಥಿತಿಗೆ ಬರುತ್ತಿದ್ದಾರೆ, ಕೆಲ ವೈದ್ಯರು ರಾಜೀನಾಮೆ ಕೊಡಲು ಸಿದ್ಧರಾಗುತ್ತಿದ್ದಾರೆ, ಅಧಿಕಾರಿಗಳ ವರ್ಗ ಕೊರೋನ ತಡೆಗಟ್ಟುವಲ್ಲಿ ಉದಾಸೀನ ಮಾಡಿದರೆ ಪರಿಸ್ಥಿತಿ ಬಯಾನಕರ ವಾಗುತ್ತದೆ, ಅಧಿಕಾರಿ ವರ್ಗ ಜವಾಬ್ದಾರಿಯನ್ನು ಕೈಚೆಲ್ಲುವ ಮುನ್ನ ಜಾಗೃತರಾಗಿ ತಮ್ಮ ತಮ್ಮ ಆರೋಗ್ಯದ ಬಗ್ಗೆ ತಾವೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ.

ಗೌರವಿಸಿ,ತಮ್ಮ ಹಕ್ಕನ್ನು ಪಡೆದುಕೊಳ್ಳಿ:
ಸಂವಿಧಾನ ಭಾರತದ ಪ್ರತಿಯೊಬ್ಬ ಪ್ರಜೆಗೂ ಹಕ್ಕು ಹಾಗೂ ಕರ್ತವ್ಯವನ್ನು ನೀಡಿದೆ. ತಮ್ಮ ಪಾಲಿನ ಹಕ್ಕುಗಳನ್ನು ಪ್ರಶ್ನೆ ಮಾಡಿ ಪಡೆದುಕೊಳ್ಳುವ ಅಧಿಕಾರವಿದೆ. ಆದರೆ ಈ ಪರಿಸ್ಥಿತಿಯನ್ನು ಗಮನಿಸಿದರೆ ಕೋರೋನ ಇಡೀ ಸಮಾಜವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಜೀವ ಉಳಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಆರೋಗ್ಯ ಇಲಾಖೆ ಇದರಲ್ಲಿ ಹೆಚ್ಚು ಪಾತ್ರವಹಿಸುತ್ತಿದ್ದು, ವೈದ್ಯರುಗಳು ಹಾಗೂ ಆರೋಗ್ಯ ಸಿಬ್ಬಂದಿಗಳು ಗಾಸಿಯಾಗಿದ್ದಾರೆ. ಸಂಬಳವಿಲ್ಲದೆ ಯಾರೂ ಕೆಲಸ ಮಾಡುವುದಿಲ್ಲ ನಿಜ,ಆದರೆ ಕೋರೋನ ದಿನದಿಂದ ದಿನಕ್ಕೆ ಮಾರಣಾಂತಿಕ ಕಾಯಿಲೆಯಾಗಿ ಮಾರ್ಪಾಡು ಆಗುತ್ತಿದೆ. ಅವರು ಸಹ ನಮ್ಮ ಹಾಗೆ ಮನುಷ್ಯರಲ್ಲವೇ, ಅವರನ್ನು ಗೌರವಿಸಿ ಚಿಕಿತ್ಸೆ ಪಡೆದುಕೊಳ್ಳಿ ಅವಾಚ್ಯ ಶಬ್ದಗಳಿಂದ ನಿಂದಿಸಬೇಡಿ ಕರೋನ ತಡೆಗಟ್ಟಲು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕಾಗಿದೆ.

ಸಾಕಾಗಿ ಹೋಗಿದೆ ಸಾರ್ ಎಷ್ಟು ಒಳ್ಳೆಯ ಕೆಲಸ ಮಾಡಿದರೂ ಜನ ಅವರ ಬುದ್ಧಿಯನ್ನು ಬಿಡುವುದಿಲ್ಲ, ಅಮ್ಮ ತಾಯಿ ಎಂಬ ಅವಾಚ್ಯಶಬ್ದಗಳಿಂದ ಬೈಯ್ಯುತ್ತಾರೆ, ನಮಗೂ ಸಂಸಾರವಿದೆ ಮನೆಯಲ್ಲಿ ಮಕ್ಕಳಿದ್ದಾರೆ ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಮುಂದುವರೆದರೆ ವೈದ್ಯವೃತ್ತಿ ಮಾಡುವುದೇ ಕಷ್ಟವಾಗುತ್ತದೆ ಅಂತಾರೆ ಹೆಸರು ಹೇಳಲು ಇಚ್ಚಿಸದ ವೈದ್ಯ

Leave a Reply

Your email address will not be published. Required fields are marked *

error: Content is protected !!