ದಾವಣಗೆರೆಯ S D P I ಪಾರ್ಟಿಯ ಕಾರ್ಯಕರ್ತರ ಸಭೆ, ಪಕ್ಷಕ್ಕೆ ಹೊಸದಾಗಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ.!

sdpi cadre convention

ದಾವಣಗೆರೆ: ದಾವಣಗೆರೆಯ ಬಾಷನಗರದಲ್ಲಿರುವ ಎಸ್. ಎಸ್.ಕಲ್ಯಾಣ ಮಂಟಪದಲ್ಲಿ S D P I ಪಾರ್ಟಿಯ ಕಾರ್ಯಕರ್ತರ ಸಭೆ ಹಾಗು ಪಕ್ಷಕ್ಕೆ ಹೊಸದಾಗಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಸಭೆಯನ್ನುದ್ದೆಶಿಸಿ ಮಾತನಾಡಿದ ಜಿಲ್ಕಾದ್ಯಕ್ಷರಾದ ಇಸ್ಮಾಯಿಲರವರು ದಾವಣಗೆರೆ ದಕ್ಷಿಣ ಭಾಗದಲ್ಲಿ ನಾವುಗಳು 30 ವರ್ಷಗಳಿಂದ ಒಂದೇ ಪಕ್ಷದ ಅಬ್ಯರ್ಥಿಯನ್ನು ಚುನಾಯಿಸುತ್ತಾ ಬಂದಿದ್ದೇವೆ, ಈ ಬಾಗದಲ್ಲಿ ಸಾರ್ವಜನಿಕ ಹಾಸ್ಪಿಟಲ್ ಇದ್ದು ಇಲ್ಲದಂತಾಗಿದೆ. ಸರ್ಕಾರೀ ಶಾಲಾ ಕಾಲೇಜು, ಸುಸಜ್ಜಿತ ಕ್ರೀಡಾಂಗಣವಾಗಲಿ, ಈ ಭಾಗದದವರಿಗೆ ಮರಿಚೀಕೆಯಾಗಿದೆ ಎಂದರು. S D P I ರಾಜ್ಯ ಕಾರ್ಯದರ್ಶಿ ಅಶ್ರಫ್ ಕೊಡಲಿಪೇಟೆ ಮಾತನಾಡಿ ರಾಜಕೀಯ ಪಕ್ಷಗಳಲ್ಲಿ ಹಾರ ತುರಾಯಿ ಹಾಕಿ ಸ್ವಾಗತಿಸುವುದು ಮುಂದುವರಿದ ಭಾಗ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ. ರಾಜಕೀಯ ವ್ಯವಸ್ತೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ವಿಧಾನಸೌಧದ ಪ್ರವೇಶದ್ವಾರದಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆದಿದ್ದಾರೆ, ಒಬ್ಬ ರಾಜಕಾರಿಣಿಯು ಸಹ ತಮ್ಮ ಅಧಿಕಾರದ ಅವದಿಯಲ್ಲಿ ಈ ಪದ ಅನ್ವಯಿಸುವಂತೆ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು.

ರಾಜ್ಯಧ್ಯಕ್ಷರಾದ ಅಬ್ದುಲ್ ಮಜಿದ್ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ದಲಿತರ, ಅಲ್ಪಸಂಖ್ಯಾತರ, ನಿರ್ಗತಿಕರ, ಆದಿವಾಸಿಗಳ, ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸುವುದಿಲ್ಲ, ನಾವುಗಳು ಯಾವ ರಾಜಕೀಯ ಮನೆತನದಿಂದ ಆಗಲಿ ಬೇರೆ ಯಾವುದೇ ಪಕ್ಷದಿಂದ ಹೊರಬಂದು ಪಕ್ಷ ಕಟ್ಟಲಿಲ್ಲ ಬಹುಸಂಖ್ಯಾತರಿಂದ ದಲಿತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ ದೌರ್ಜನ್ಯವನ್ನು ಮಟ್ಟ ಹಾಕಲು ಹಾಗು ಸಂವಿಧಾನ ನೀಡಿರುವ ಹಕ್ಕನ್ನು ಸರ್ವರಿಗು ಸಿಗುವ ನಿಟ್ಟಿನಲ್ಲಿ ಪಕ್ಷವನ್ನು ಕಟ್ಟಿದ್ದೇವೆ. ಯಾರೇ ಒಬ್ಬ ಪ್ರಜೆಯ ಮೇಲೆ ಹಿಂಸೆ ನಡೆದರು ನಾವು ವಿರೋಧಿಸುತ್ತೆವೆ, ಸಂವಿಧಾನಿಕವಾಗಿ ಹೋರಾಡುತ್ತೆವೆ. S D P I ಯಾರ ಸೊತ್ತಲ್ಲ, ನಮ್ಮ ನಿಮ್ಮೆಲ್ಲರ ಪಕ್ಷ ಯುವಕರು ಪಕ್ಷಕ್ಕೆ ಸೇರ್ಪಡೆ ಆಗುವುದರ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದು ಕರೆಕೊಟ್ಟರು,

ಇದೆ ಸಂದರ್ಭದಲ್ಲಿ J D S ಪಕ್ಷ ತೊರೆದು ಇಂಡಿಯನ್ ಚಿಕನ್ ಸೆಂಟರ್ ಮಾಲಿಕರಾದ ಅಹಮದ್ ಬಾಷ ಹಾಗು ಅವರ ಬೆಂಬಲಿಗರು ನುರಾರು ಕಾರ್ಯಕರ್ತರು S  P I ಪಕ್ಷದ ಸದಸ್ಯತ್ವ ಪಡೆದರು.

Leave a Reply

Your email address will not be published. Required fields are marked *

error: Content is protected !!