ಮುರುಘಾ ಶರಣರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಫೋಕ್ಸೋ ಕೇಸ್ ದಾಖಲು ! ಷಡ್ಯಂತ್ರ ನಡೆದಿದೆ ಎಂದ ಭಕ್ತರು.!

ಮೈಸೂರು: ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಚಿತ್ರದುರ್ಗ ಶ್ರೀ ಮುರಘಾ ಮಠದ ಡಾ.ಮುರಾಘ ಶರಣರ ವಿರುದ್ದ ಫೋಕ್ಸೋ ಅಡಿ ದೂರು ದಾಖಲಾಗಿದೆ.
ಮಠದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇಬ್ಬರು ವಿದ್ಯಾರ್ಥಿನಿಯರು ಚಿತ್ರದುರ್ಗ ದಿಂದ ಮೈಸೂರಿಗೆ ತೆರಳಿ ಮೈಸೂರಿನ ಓಡನಾಡಿ ಸಂಸ್ಥೆ ಮಹಿಳಾ ಸಾಂತ್ವನ ಮತ್ತು ವಸತಿ ಕೇಂದ್ರಕ್ಕೆ ದೂರು ನೀಡಿದ್ದಾರೆ. ಪ್ರತಿಷ್ಠಿತ ಮಠದ ಹಾಸ್ಟೆಲ್ ನಲ್ಲಿರುವ ಕೆಲ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಉಚಿತ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರು ಹಣ್ಣುಗಳನ್ನು ನೀಡಲು ಸ್ವಾಮೀಜಿ ಬಳಿ ಹೋಗಿಬೇಕು, ಈ ವೇಳೆ ಮತ್ತು ಬರುವಂತೆ ಮಾಡಿ ಸ್ವಾಮೀಜಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎನ್ನಲಾಗಿದ್ದು, ಈ ಸಂಬಂಧ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರಕ್ಕೆ ದೂರು ನೀಡಿದ್ದಾರೆ.
ಶರಣರಿಗೆ ಪ್ರತಿ ದಿನ ಓರ್ವ ವಿದ್ಯಾರ್ಥಿನಿ ಮುರಾಘ ಮಠದ ಶರಣರಿಗೆ ಗೆ ಹಣ್ಣು ತೆಗೆದುಕೊಂಡು ಹೋಗಬೇಕು ಶರಣರ ರೂಮ್ ಗೆ ಹೋದಮೇಲೆ ವಿದ್ಯಾರ್ಥಿಗೆ ಮತ್ತು ಬರುವ ಹಾಗೇ ಮಾಡಿ ಆ ಬಾಲಕಿ ಮೇಲೆ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ. ಮಕ್ಕಳ ರಕ್ಷಣಾ ಸಮಿತಿ ವಿಚಾರಣೆ ನಡೆಸಿ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶರಣರು ಸೇರಿ ಒಟ್ಟು ಐವರ ವಿರುದ್ದ ಫೊಕ್ಸೋ ಆಕ್ಟ್ ಅಡಿ ಎಫ್ ಐ ಆರ್ ದಾಖಲಾಗಿದೆ. ಈಗ ಈ ಕೇಸ್ ಚಿತ್ರದುರ್ಗ ಪೊಲೀಸ್ ಠಾಣೆ ಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಚಿತ್ರದುರ್ಗದ ಮಠದ ಭಕ್ತರು ಮಠದ ಬಳಿ ಜಮಾವಣೆ ಗೊಂಡಿದ್ದಾರೆ. ಇದು ಪೂರ್ವ ನಿಯೋಜಿತ ಕೆಲಸ, ಅವರಿಗೆ ತಪ್ಪಿನ ಅರಿವಾಗಿ ಕೇಸ್ ವಾಪಾಸ್ ಪಡೆಯಲಿ ಆ ದೇವರು ಅವರಿಗೆ ಬುದ್ದಿ ಕೊಡಲಿ, ಯಾವುದೋ ಮಠದ ವಿರೋಧಿ ಶಕ್ತಿಗಳ ಷಡ್ಯಂತ್ರ ಕೆಲಸ ಮಾಡಿದೆ, ಶರಣರಿಗೆ ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ, ಮುಂದೆ ಕಾನೂನು ಹೋರಾಟ ಮಾಡಲಾಗುವುದು ಎಂದು ವಕೀಲ ವಿಶ್ವನಾಥಯ್ಯ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದ್ದಾರೆ.