ಕೌಶಲ್ಯಗಳಿಂದ ವಿದ್ಯಾರ್ಥಿಯೂ ಪರಿಪೂರ್ಣನಾಗುತ್ತಾನೆ

ದಾವಣಗೆರೆ : ವಿದ್ಯಾರ್ಥಿಗಳು ಪರಿಪೂರ್ಣತೆ ಹೊಂದಲು ಕೌಶಲ್ಯಗಳ ಅವಶ್ಯಕತೆ ತುಂಬಾ ಇದೆ ಇಂದು ಕೌಶಲ್ಯ ಇದ್ದರೆ ವಿದ್ಯಾರ್ಥಿ ಎಂಬುದನ್ನು ಗುರುತಿಸಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಶಿವಮೊಗ್ಗದ ಜಂಟಿ ನಿರ್ದೇಶಕರಾದ ಪ್ರೊ ರಾಜಶೇಖರ್ ಹೆಬ್ಬಾರ್ ರವರು ಹೇಳಿದರು.
ಅವರು ಇಂದು ಆರ್ ಜಿ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ವೇದಿಕೆಯ ಸಹಯೋಗದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿ ಅಧ್ಯಾಪಕರು ಸಂಪೂರ್ಣ ಜ್ಞಾನವನ್ನು ಪಡೆದು ಪರಿಪೂರ್ಣ ವಿದ್ಯಾರ್ಥಿಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಆಗ ಸ್ವಾಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು . ವ್ಯವಸ್ಥೆ ಬದಲಾದಂತೆಲ್ಲ ನಾವು ಬದಲಾಗಬೇಕು ಆಗ ಬದಲಾವಣೆಯಿಂದ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಾಪಕರನ್ನು ಕುರಿತು ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ ಅನಿತಾ ಎಚ್ ಎಸ್ ಅವರು ಮಾತನಾಡುತ್ತಾ ಹೊಸ ವ್ಯವಸ್ಥೆಗಳು ಬಂದಾಗ ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಲ್ಲ ಎಲ್ಲರಲ್ಲೂ ಆತಂಕ ಅನುಮಾನಗಳು ಮೂಡುವುದು ಸಹಜ ಒಂದೊಂದನ್ನೇ ನೋಡುತ್ತಾ ಹೋದಾಗ ವ್ಯವಸ್ಥೆಯ ಜಾರಿ ಸುಲಭವಾಗುತ್ತದೆ ಎಂದು ಹೇಳಿದರು .
ಈ ನಿಟ್ಟಿನಲ್ಲಿ ಅಧ್ಯಾಪಕರಿಗೆ ತೊಂದರೆಯಾಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ವಿವಿ ತೆಗೆದುಕೊಳ್ಳುತ್ತದೆ ಹಾಗೂ ವಿದ್ಯಾರ್ಥಿ ಅಧ್ಯಾಪಕರ ಸ್ನೇಹಿಯಾಗಿ ಕಾರ್ಯ ವಿಶ್ವವಿದ್ಯಾನಿಲಯವು ಕಾರ್ಯ ನಿರ್ವಹಿಸುವಲ್ಲಿ ಪ್ರಯತ್ನಪಡುತ್ತಿದೆ ವೇದಿಕೆಯ ಸಹಕಾರದೊಂದಿಗೆ ಈ ತರದ ಕಾರ್ಯಾಗಾರರನ್ನು ಆಯೋಜಿಸಿರುವುದು ಸೂಕ್ತ ಇದರಿಂದ ಎಲ್ಲರಲ್ಲಿರುವ ಆತಂಕ ಅನುಮಾನಗಳು ಪರಿಹಾರಗೊಳ್ಳುತ್ತದೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ವೇದಿಕೆ ಕಾರ್ಯದರ್ಶಿ ವೆಂಕಟೇಶ್ ಬಾಬುರವರು ಪ್ರತಿಯೊಬ್ಬ ಅಧ್ಯಾಪಕರಿಗೂ ಶಿಕ್ಷಣ ನೀತಿ ಯಲ್ಲಿರುವ ಗೊಂದಲಗಳನ್ನು ಬಗೆಹರಿಸಲು ವೇದಿಕೆಯ ಯಾವಾಗಲೂ ಪ್ರಯತ್ನಿಸುತ್ತಲೇ ಇರುತ್ತದೆ.
ಶಿಕ್ಷಕರು ಬದಲಾಗದ ಹೊರತು ಶಿಕ್ಷಣ ವ್ಯವಸ್ಥೆ ಬದಲಾಗುವುದಿಲ್ಲ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕು ಆಗ ಮಾತ್ರ ವಿದ್ಯಾರ್ಥಿಗಳನ್ನು ಬದಲಾಯಿಸಿ ಬದಲಾಗುವ ಸಮಾಜಕ್ಕೆ ಕೊಡುಗೆಯಾಗಿ ನೀಡಲು ಸಾಧ್ಯ ಎಂದು ಹೇಳಿದರು.
ಆರ್ ಜಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಶಿವಪ್ರಕಾಶ್ ಅವರು ಮಾತನಾಡಿದರು ಹಾಗೂ ವೇದಿಕೆ ಅಧ್ಯಕ್ಷರಾದ ಡಾ.ಕರಿಬಸಪ್ಪನವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ
ಆರ್ ಜಿ ಕಾಲೇಜಿನ ನಿರ್ದೇಶಕರಾದ ಶ್ವೇತಾ ಗಾಂಧಿ ರವರು ಮಾತನಾಡುತ್ತಾ ಆರ್ ಜಿ ಕಾಲೇಜು ಯಾವಾಗಲೂ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ವೇದಿಕೆಯೊಂದಿಗೆ ಇತರೆ ಕಾರ್ಯ ಕ್ರಮಗಳನ್ನು ಆಯೋಜಿಸಲು ಸದಾ ಸಿದ್ಧರಿರುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಸುಮಾರು ನೂರೈವತ್ತಕ್ಕೂ ಹೆಚ್ಚು ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಗೀತಾ ಅವರು ನಿರೂಪಿಸಿದರು. ಉಪನ್ಯಾಸಕ ಶರಣ್ ಪ್ರಾರ್ಥಿಸಿದರೆ ಸ್ನೇಹ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವ್ಯವಸ್ಥಾಪಕರಾದ ರಜತ್ ಕಟ್ಟಿಮನಿ ಉಪನ್ಯಾಸಕ ಪ್ರವೀಣ್ ಸ್ನೇಹ ಸಹನಾ ಹಾಗೂ ಎಲ್ಲಾ ಸಿಬ್ಬಂದಿಯವರು ಭಾಗವಹಿಸಿದ್ದರು.