ಕೃಷಿಕರ ಯುವ ಪ್ರತಿಭೆಗಳಿಗೆ ನವಂಬರ್ 19 ರಂದು “ಮಂಗಳ ರೈತ ಪ್ರತಿಭೆ” ತರಬೇತಿ

ದಾವಣಗೆರೆ: ಮಂಗಳೂರು ಕೆಮಿಕಲ್ಸ್ & ಫರ್ಟಿಲೈಸರ್ಸ್ ಲಿಮಿಟೆಡ್ ಸಂಸ್ಥೆಯ ಸಿ ಯಸ್ ಆರ್ ಅಡಿಯಲ್ಲಿ ಅತೀಶೀಘ್ರದಲ್ಲಿ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗಾಗಿ ಮೂಲ ಕೃಷಿ ಶಿಕ್ಷಣವನ್ನು ಪ್ರಾರಂಬಿಸಲಾಗುತ್ತಿದೆ.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಗ್ರಾಮೀಣ ಕೃಷಿ ಸಮುದಾಯದಿಂದ ಬಂದಿರುವ ಯುವ ಶಾಲಾ ಪ್ರತಿಭೆಯನ್ನ ಆಧುನಿಕ ಕೃಷಿಯ ಬಗ್ಗೆ ತಿಳಿದುಕೊಳ್ಳಲು ಉತ್ತೇಜಿಸುವುದು ಹಾಗು ತರಬೇತಿ ನೀಡುವುದು. ಮೊದಲ ಹಂತದಲ್ಲಿ, ಈ ತರಬೇತಿಗಳನ್ನು ದಾವಣಗೆರೆ ಜಿಲ್ಲೆಯ 5 ಗ್ರಾಮಗಳಾದ ಕಾಡಜ್ಜಿ, ಆಲೂರ, ಎಲೆಬೇತೂರ್, ಜಮ್ಮಾಪುರ ಹಾಗು ತೋರಣಗಟ್ಟಿಯ ಆಸಕ್ತಿವುಳ್ಳ ವಿದ್ಯಾರ್ಥಿಗಳಿಗೆ ನೆಡೆಸಲಾಗುವುದು.
ಈ ಕೃಷಿ ಅಭಿವೃದ್ಧಿ ಕಾರ್ಯಕ್ರಮವನ್ನು ದಿನಾಂಕ 19.11.2022 ರ ಶನಿವಾರದಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಪ್ರಾರಂಬಿಸಲಾಗುತ್ತಿದೆ.
ರೈತ ಭಾಂದವರು, ಮಂಗಳ ಸಂಸ್ಥೆಯ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ನಿಮ್ಮ ಯುವ ಕೃಷಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದು ಪ್ರಕಟಣೆ ತಿಳಿಸಿದೆ.
A
a