ಕೋಟ್ಯಾಂತರ ರೂಪಾಯಿ ಕಸ ವಿಲೇವಾರಿ ಸಂಬಂಧಿಸಿದ ಪಾಲಿಕೆಯ ಟೆಂಡರ್ ನಲ್ಲಿ ಲಕ್ಷ ಲಕ್ಷ, ಕಿಕ್ ಬ್ಯಾಕ್ ಆರೋಪ.!

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪದೇ ಪದೇ ಬ್ರಷ್ಟಾಚಾರದ ವಾಸನೆ ಕೇಳಿಬರುತ್ತಿದೆ, ಇತ್ತೀಚೆಗೆ ಪಾಲಿಕೆಯ ಕಚೇರಿಯಲ್ಲಿ ಓರ್ವ ವ್ಯವಸ್ಥಾಪಕ ಜಕಾತಿ ಟೆಂಡರ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಲಂಚದ ಹಣ ಪಡೆಯುವಾಗ ಹಣದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದು ಮಾಸುವ ಮುನ್ನವೇ ಮತ್ತೋಂದು ಬ್ರಷ್ಟಾಚಾರದ ಬಗ್ಗೆ ಪಾಲಿಕೆಯ ಗೋಡೆಗಳಲ್ಲಿ ಪಿಸು ಪಿಸು ಗುಸು ಗುಸು ಸದ್ದಿನ ಮಳೆ ಪ್ರಾರಂಭವಾಗಿದೆ.
ಜಕಾತಿ ಟೆಂಡರ್ ವಿಷಯಕ್ಕೆ ಲಂಚಾವತಾರ ಒಂದು ರೀತಿಯಾದ್ರೆ ಇದೀಗ ಮನೆ ಮನೆಗೆ ತೆರಳಿ ಕಸ ವಿಲೇವಾರಿ ಸಂಬಂಧಿಸಿದ ಟೆಂಡರ್ ನಲ್ಲಿ 2021-22 ನೇ ಸಾಲಿನಲ್ಲಿ ಮೂರು ಪ್ರತ್ಯೇಕ ಟೆಂಡರ್ ಕರೆಯಲಾಗಿ ಕೂಡ ಬ್ರಷ್ಟಾಚಾರ ನಡೆದಿದೆ ಎನ್ನಲಾಗಿದ್ದು ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನ ನೀಡಿ ಎಂದು ಕೇಳಿದ್ರೆ ಅಧಿಕಾರಿಗಳು ಕುಂಟು ನೆಪ ನೀಡಿ ದಆಖಲೆಗಳನ್ನು ನೀಡುವಲ್ಲಿ ವಿಳಂಬ ನೀತಿ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಸದರಿ ಟೆಂಡರ್ ನಲ್ಲಿ ಯಾರೆಲ್ಲ ಭಾಗವಹಿಸಿದ್ದರು ಹಾಗೂ ಅವರಿಗೆ ನೀಡಿರುವ ಕಾರ್ಯಾದೇಶ, ಅಗ್ರಿಮೆಂಟ್, ಕೆಲಸ ಪ್ರಾರಂಭಿಸಲು ನೀಡುವ ಪತ್ರ, ಗುತ್ತಿಗೆದಾರರು ಸಲ್ಲಿಸಿರುವ ಪತ್ರಗಳು, ಹೀಗೆ ಟೆಂಡರ್ ಕರಾರಿನಂತೆ ಗುತ್ತಿಗೆ ಪಡೆಯಲು ಸಲ್ಲಿಸಿದ ದಾಖಲೆ ನೀಡಿ ಎಂದು ಮಂಜುನಾಥ್ ಎಂಬುವವರು ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿರುವ ದಾಖಲೆಗಳನ್ನು ನೀಡುವಂತೆ ಕೋರಿದ್ದರು. ಆದರೆ ಮಹಾನಗರ ಪಾಲಿಕೆಯ ಇಂಜಿನಿಯರ್/ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕೋರಿರುವ ಮಾಹಿತಿಯು 12968 ಪುಟಗಳಿದ್ದು ಪುಟಕ್ಕೆ 2 ರೂನಂತೆ 25936 ರೂ ಗಳನ್ನು ಬ್ಯಾಂಕಿಗೆ ಪಾವತಿಸಿ ಮಾಹಿತಿಯ ಪ್ರತಿಗಳನ್ನ ಪಡೆಯಬಹದಾಗಿದೆ ಎಂದು ಹಿಂಬರಹ ನೀಡಿದ್ದಾರೆ.
ಈ ರೀತಿ ಹಿಂಬರಹ ನೀಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎನ್ನಲಾಗಿದ್ದು, ಒಂದು ವೇಳೆ ಸದರಿ ಟೆಂಡರ್ ನಲ್ಲಿ ಅಷ್ಟೊಂದು ಪುಟಗಳಿದ್ದರೆ ಮಾಹಿತಿ ಕೋರಿರುವ ವಯಕ್ತಿ ಗಎ ಪತ್ರದ ಮೂಲಕವೋ ಅಥವಾ ದೂರವಾಣಿ ಕರೆ ಮಾಡಿ ನೀವು ಕೋರಿರುವ ಮಾಹಿತಿ ಆಗಾಧವಾಗಿದ್ದು ನಿಮಗೆ ನೀವು ಕೇಲಿರುವ ದಾಖಲೆಗಳು ಯಾವುದು ಬೇಕು ಅಂತಾ ದಾಖಲೆಗಳನ್ನು ತೋರಿಸಿ ಅವರಿಗೆ ಭೇಕಾದ ದಾಖಲೆಗಳ ಸಂಖ್ಯೆಗಳ ಅನುಗುಣವಾಗಿ ಶುಲ್ಕ ಪಾವತಿಸಿಕೊರ್ಳಳು ಅವಕಾಶ ಮಾಡಿಕೊಡಬಹುದಿತ್ತು ಆದ್ರೆ ಪಾಲಿಕೆಯ ಅಧಿಕಾರಿಗಳು ಮಾಹಿತಿ ಹಕ್ಕು ಅಧಿನಿಯಮವನ್ನ ಸರಿಯಾದ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲ, ಇದೆ ಕಾರಣಕ್ಕಾಗಿ ಇವರೆಲ್ಲರ ವಿರುದ್ದ ನ್ಯಾಯಲಯದಲ್ಲಿ ದಾವೆ ಹೂಡಲು ಮುಂದಾಗಿದ್ದಾರೆ ದೂರುದಾರ ಮಂಜುನಾಥ್.
ಹೊರಗುತ್ತಿಗೆ ನೌಕರರನ್ನು ಪಡೆಯಲು 11 ತಿಂಗಳ ಹಿಂದೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಅಂದಾಜು 4 ಕೋಟಿಗಳ ಮೊತ್ತದ ಟೆಂಡರ್ ಕರೆಯಲಾಗಿದ್ದು, ಪ್ರತ್ಯೇಕವಾಗಿ ಮೂರು ಕಾರ್ಯಾದೇಶ ಪತ್ರಗಳನ್ನ ನೀಡಲಾಗಿದೆಯಂತೆ. ಟೆಂಡರ್ ಪಡೆದಿರುವ ವ್ಯಕ್ತಿಗಳಿಂದ ಪಾಲಿಕೆಯ ಕೆಲ ಅಧಿಕಾರಿಗಳು, ಆಡಳಿತ/ವಿರೋಧ ಪಕ್ಷದ ಸದಸ್ಯರುಗಳು, ಲಕ್ಷ ಲಕ್ಷ ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನುವ ಮಾತುಗಳು ಪಾಲಿಕೆಯ ಕೆಲ ಅಧಿಕಾರಿಗಳು ಹಾಗೂ ಸದಸ್ಯರು, ನೌಕರರು ಅವರವರಲ್ಲೆ ಗುಸು ಗುಸು ಸದ್ದಿನೊಂದಿಗೆ ಮಾತನಾಡಿಕೊಳ್ಳುತ್ತಿದ್ದಾರಂತೆ. ಮೇಲ್ನೋಟಕ್ಕೆ ಸದರಿ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಬಲ್ಲ ಮೂಲಗಳಿಂದ ಅನಧಿಕೃತವಾಗಿ ದಾಖಲೆಗಳು ಲಭ್ಯವಾಗಿದ್ದು ಅಧಿಕೃತವಾಗಿ ಪಾಲಿಕೆಯಿಂದ ದೃಡಿಕರಿಸಿದ ದಾಖಲೆ ಪಡೆಯಲು ಮಾಹಿತಿ ಕೇಳಿದ್ರೆ ಇಲ್ಲ ಸಲ್ಲದ ಕಾರಣ ನೇಪವೊಡ್ಡಿ ವಿಳಂಭ ಮಾಡುತ್ತಿರುವುದು ಯಾಕೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಒಟ್ಟಾರೆ ಮಹಾನಗರ ಪಾಲಿಕೆಯಲ್ಲಿ ಏನು ಬೇಕಾದರು ನಡೆಯುತೆ ಎಂಬುದಕ್ಕೆ ಹಲವು ಸಾಕ್ಷಿಗಳು ಲಭ್ಯವಿದ್ದರು, ಅಧಿಕಾರಿಗಳು ಏನು ನಡೆದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದರಿಂದ ಇವರಿಗೆಲ್ಲಾ ಸರಿಯಾದ ಬುದ್ದಿ ಕಲಿಸಲು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.