ಬಂಗಾರದ ಗಿರಿವಾಸ ಕಲ್ಬಿಗಿರಿ ಶ್ರೀ ಲಕ್ಷ್ಮಿರಂಗನಾಥ ಕ್ಷೇತ್ರ ದರ್ಶನ

.2

ದಾವಣಗೆರೆ : ಅರೇ ಮಲೆನಾಡಿನ ಹೆಬ್ಬಾಗಿಲು ಮಧ್ಯ ಕರ್ನಾಟಕದ ಕೇಂದ್ರಬಿಂದು ಎತ್ತ ಕಣ್ಣು ತೆರೆದು ನೋಡಿದರೂ ಬೆಟ್ಟಗುಡ್ಡಗಳಿಂದ ಹಚ್ಚಹಸಿರಿನಿಂದ ಕಂಗೊಳಿಸುವ ಭೂಮಿಯ ತಳಭಾಗದಿಂದ ಸುಮಾರು ಆರು ಕಿಲೋಮೀಟರ್ ಎತ್ತರ ಭಾಗದಲ್ಲಿ ಬೆಟ್ಟದಲ್ಲಿ ನೆಲೆಸಿರುವ ಬಂಗಾರದ ಗಿರಿವಾಸನೇ ಕಲ್ಬಿಗಿರಿ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ಪುರಾತನ ಪುಣ್ಯಕ್ಷೇತ್ರವಾಗಿದೆ. ಇದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನಿಂದ ಸುಮಾರು ಹದಿನೈದು ಕಿಲೋಮೀಟರ್ ಕ್ರಮಿಸಿದರೆ ಸಿಗುವಂತ ಸ್ಥಳ ಕಲ್ಬಿಗಿರಿ ಬೆಟ್ಟವಾಗಿದೆ, ಇದು ಮೂಲತಹ ವಿಜಯನಗರ ಸಂಸ್ಥಾನದ ಬೆಳಗುತ್ತಿ ಅರಸು ಬಾಂಧವರು ಧರ್ಮದರ್ಶಿ ವಂಶಸ್ಥರ ಆಳ್ವಿಕೆಗೆ ಒಳಪಟ್ಟ ತಾಲೂಕಿನ ಪ್ರಮುಖ ಧಾರ್ಮಿಕ ನೆಲೆಯಾಗಿದೆ.

ಐತಿಹಾಸಿಕ ಹಿನ್ನೆಲೆ : ಕಲ್ಬಿಗಿರಿ ಬೆಟ್ಟದ ಮೂಲ ಹಿನ್ನೆಲೆ ಪುರಾತನ ಇತಿಹಾಸ ನೋಡಿದಾಗ 12 ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಬೆಳಗುತ್ತಿ ಧರ್ಮದರ್ಶಿ ವಂಶಸ್ಥರ ಆಳ್ವಿಕೆಗೆ ಒಳಪಟ್ಟಿದ್ದು. ಕಲ್ಬಿಗಿರಿ ಎಂದು ಹೆಸರು ಬರಲು 12 ಶತಮಾನದ ಪುರಾತನ ಕಾಲದ ಬೆಟ್ಟದ ಸುತ್ತಮುತ್ತಲಿನ 16 ಹಳ್ಳಿಗಳಿಗೆ ಸಂಬಂಧಪಟ್ಟಂತೆ ಪರಿಪೂರ್ಣವಾದ ಬೆಟ್ಟಗುಡ್ಡಗಳಿಂದ ವಾಸಿಸುವ ಜನಗಳಿಗೆ ರಾಕ್ಷಸರ ಉಪಟಳ ಜಾಸ್ತಿಯಾಗಿತ್ತು. ಕಲ್ಪಿ ಮತ್ತು ಕಲ್ಬ ಎಂಬ ಇಬ್ಬರು ಅಕ್ಕ ಮತ್ತು ತಮ್ಮ ರಾಕ್ಷಸರು ಭಕ್ತಾದಿಗಳಿಗೆ ಜನಗಳಿಗೆ ಹೆಚ್ಚಿನ ತೊಂದರೆಯುಂಟು ಮಾಡುತ್ತಿದ್ದರು ಅದನ್ನು ಸಹಿಸಲಾಗದ ಭಕ್ತಾದಿಗಳು ಶ್ರೀರಂಗನಾಥಸ್ವಾಮಿಯ ಕೋರಿಕೆಗೆ ನಮ್ಮನ್ನು ಕಾಪಾಡು ಎಂದು ಮೋರೆ ಹೋದರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಳ್ಳೂರು ಬೆಟ್ಟದಲ್ಲಿ ನೆಲೆಸಿರುವ ಶ್ರೀ ರಂಗನಾಥ ಸ್ವಾಮಿ ಶ್ರೀರಾಮನ ರೂಪದಲ್ಲಿ ಬಿಲ್ಲು ಬಾಣ ಬತ್ತಳಿಕೆಯ ವೇಷದಾರಿಯಾಗಿ ವಿಜಯದಶಮಿ (ದಸರಾ) ಸಮಯದಲ್ಲಿ ರಾಕ್ಷಸರಾದ ಕಲ್ಬಿ ಮತ್ತು ಕಲ್ಬ ಇಬ್ಬರನ್ನು ಸಂಹಾರ ಮಾಡಿತು ಅಂದಿನಿಂದ ಈ ಬೆಟ್ಟವು ಕಲ್ಬಿಗಿರಿ ಬೆಟ್ಟ ಎಂದು ಪ್ರಸಿದ್ಧಿಯಾಯಿತು, ಹಾಗೆಯೇ ರಾಕ್ಷಸರ ಸಂಹಾರದ ನಂತರ ಜನಪ್ರತಿನಿಧಿಗಳು ಭಕ್ತಾದಿಗಳು ಸುಖ ಜೀವನ ನಡೆಸಲು ತೊಡಗಿದರು ಹಾಗೆಯೇ ಒಂದು ದಂತಕಥೆಯ ಕಾಕತಾಳಿಯಂತೆ ಶ್ರೀ ಸ್ವಾಮಿಯ ಬೆಟ್ಟದ ಸುತ್ತಮುತ್ತಲು ಬಂಗಾರದ ಗಣಿ ನಿಕ್ಷೇಪ ಇರುವುದರಿಂದ ಸ್ವಾಮಿಯ ಬೆಟ್ಟವನ್ನು ಬಂಗಾರದ ಗಿರಿವಾಸ ಎಂದು ಕರೆಯುತ್ತಾರೆ.

ದಾಸಯ್ಯನ ಬೆಟ್ಟ : ಕಲ್ಬಿಗಿರಿ ಬೆಟ್ಟದ ನಡುವಿನ ಕಾಲುದಾರಿಯಲ್ಲಿ ದಾಸಯ್ಯನ ಬೆಟ್ಟ ಕಂಡುಬರುತ್ತದೆ ಇದರ ಹಿನ್ನೆಲೆ ನೋಡಿದಾಗ ಜಾತ್ರೆಯ ಸಮಯ ಸಂಭ್ರಮದಲ್ಲಿ ಇರುವ ಸಮಯದಲ್ಲಿ ದಾಸಯ್ಯ ದೇವರ ಮೇಲಿನ ಒಡವೆಗಳನ್ನು ಯಾರು ಇಲ್ಲದ ಸಮಯವನ್ನು ನೋಡಿ ತನ್ನ ದುರಾಸೆಯಿಂದ ಒಡವೆಗಳನ್ನು ತೆಗೆದುಕೊಂಡು ಪರಾರಿಯಾಗುವ ಸಮಯದಲ್ಲಿ ಗುಡ್ಡದ ನಡುವೆ ಸಂಹಾರವಾದ ಅಂದಿನಿಂದಲೂ ಈ ಬೆಟ್ಟವನ್ನು ದಾಸಯ್ಯನ ಬೆಟ್ಟ ಎಂದು ಕರೆಯುತ್ತಾರೆ.

ಧಾರ್ಮಿಕ ಆಚರಣೆಗಳು: ಕಲ್ಬಿಗಿರಿಯ ಬೆಟ್ಟದಲ್ಲಿ ಲಕ್ಷ್ಮಿ ದೇವಾಲಯ ಆಂಜನೇಯ ದೇವಾಲಯ ಚೌಡೇಶ್ವರಿ ದೇವಿ ಬನ್ನಿಮಂಟಪ ಪಾದರಕ್ಷೆ ಇವುಗಳನ್ನು ಒಳಗೊಂಡಿದ್ದು ಪ್ರತಿವರ್ಷ ವಿಜಯದಶಮಿ ದಿನದಂದು ಬೆಳಗುತ್ತಿ ಗ್ರಾಮದ ಅರಸು ಮನೆತನದ ಆಡಳಿತ ಮಂಡಳಿಯಿಂದ ಕಲ್ಬಿಗಿರಿ ರಂಗನಾಥಸ್ವಾಮಿ ಶಿಲಾಮೂರ್ತಿ, ಭೂತರಾಯ ಸ್ವಾಮಿ ಆಂಜನೇಯಸ್ವಾಮಿ ಚೌಡಮ್ಮದೇವಿ ಉಡಿ ಕೆಂಚಮ್ಮ ಶಿಲಾಮೂರ್ತಿ ಮತ್ತು ಉತ್ಸವಮೂರ್ತಿಗೆ ನಾನಾ ಪೂಜಾ ವಿಶೇಷ ಅಭಿಷೇಕ ಹೂವಿನ ಅಲಂಕಾರಗಳು ಹೋಮ-ಹವನಗಳು ಸಕಲ ವಾದ್ಯಗಳೊಂದಿಗೆ ಜಾಗಟೆ ಶಂಕನಾದ ಹಾಗೂ ಭಕ್ತರ ಜಯಘೋಷದೊಂದಿಗೆ ಬನ್ನಿಮಂಟಪಕ್ಕೆ ತಂದು ಭಕ್ತರಿಂದ ಭೂತನ ಸೇವೆ ಆಡಿಸಿ ರಾಜ್ಯದ ಮೂಲೆ ಮೂಲೆ ಸಾವಿರಾರು ಭಕ್ತರು ಬನ್ನಿ ಮುಡಿಯಲಾಗುತ್ತದೆ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಅಭಿಷೇಕ ಪೂಜೆ ಭಕ್ತರ ಹರಕೆಗಳು ನಡೆಯುವಂತ ಅತ್ಯಂತ ಪುರಾತನವಾದ ಸ್ಥಳವಾಗಿದೆ ಎಂಬ ಸಂಕ್ಷಿಪ್ತವಾದ ಇತಿಹಾಸದ ತಿರುಳನ್ನು ವಿಜಯನಗರ ಸಂಸ್ಥಾನದ ಬೆಳಗುತ್ತಿ ಅರಸು ವಂಶಸ್ಥರು ದೇಗುಲದ ಧರ್ಮದರ್ಶಿ ಶ್ರೀ ಬಿ, ಪಿ ಸುಬ್ರಮಣ್ಯ ರಾಜ್, ಶ್ರೀ ನವೀನ್ ರಾಜ್ ಅರಸ್ ತಿಳಿಸಿದರು. ಇಂಥ ಪ್ರಾಚೀನ ಪುರಾತನವಾದ ಇತಿಹಾಸದ ಲೇಖನವನ್ನು ಈ ನಾಡಿನ ಜನತೆಗೆ ತಿಳಿಸುವಲ್ಲಿ ಹರ್ಷದಾಯಕವಾಗುತ್ತದೆ .

ರವಿಕುಮಾರ್,

ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತರು

ಕೋಣನತಲೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!