ಹರಿಹರದಲ್ಲಿ ಇಮ್ರಾನ್ ಸಿದ್ದೀಕಿ ವಿರುದ್ದ ಮತ್ತೊಂದು FIR ದಾಖಲು.!

GARUDAVOICE EXCLUSIVE
ದಾವಣಗೆರೆ: ಜೀವ ಬೆದರಿಕೆ Life Threat ಹಾಕಿ ಮರಳು ಲೀಸ್ ಪಾಯಿಂಟ್ Sand Mining Lease Point ಮ್ಯಾನೆಜ್ಮೆಂಟ್ ನೋಡಿಕೊಳ್ಳುತ್ತಿದ್ದ ವ್ಯಕ್ತಿಯಿಂದ 8 Lakhs Amount 8 ಲಕ್ಷ ಹಣ ಪಡೆದು, ಇನ್ನೂ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿರುವ ಆರೋಪದಡಿ Imran Siddiqee ಇಮ್ರಾನ್ ಸಿದ್ದಿಕ್ ಮತ್ತು ಜೂಲ್ಫಿಕರ್ Julfikhar ಎಂಬುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ Harihara Rural Police Station FIR ಹರಿಹರದ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.
ದಾವಣಗೆರೆ ನಿವಾಸಿ ಅಶೋಕ ಎಸ್ ಎಂಬುವವರು ಮರಳಿನ ಬ್ಯುಸಿನೆಸ್ ನಡೆಸಿಕೊಂಡು ಜೀವನ ಸಾಗಿಸುತ್ತಿರುತ್ತಾರೆ, ಇವರು ಹಾವೇರಿ ಜಿಲ್ಲೆಯ ಐರಣಿ ಗ್ರಾಮದ ಇಮಾಮ್ ಸಾಬ್ ಬಾಗಲಕೋಟೆ ಎಂಬುವವರಿಗೆ ಸೇರಿದ ಮರಳಿನಲ್ಲಿ ಲೀಜ್ ಪಾಯಿಂಟ್ ನಲ್ಲಿ ಮ್ಯಾನೇಜ್ ಮೆಂಟ್ ಕೆಲಸ ಮಾಡಿಕೊಂಡಿರುತ್ತಾರೆ.
13 ಸೆಪ್ಟೆಂಬರ್ 2021 ರಂದು ಶಿವಮೊಗ್ಗ – ಹರಿಹರ ರಸ್ತೆಯ ಡಾಬಾ ಒಂದರಲ್ಲಿ ಊಟ ಮಾಡುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ಕಾರಿನಲ್ಲಿ ಬಂದು ನನ್ನನ್ನು ಕರೆದು ನಮ್ಮ ಬಾಸ್ ಕಾರಿನಲ್ಲಿದ್ದಾರೆ ಅವರ ಬಳಿ ಬಂದು ಮಾತನಾಡು ಅಂತಾ ಹೇಳ್ತಾರಂತೆ. ಆಗ ನಾನು ಅವನ ಬಳಿ ನನ್ನದೇನು ಮಾತು ಅಂತಾ ಹೇಳಿದ್ದಕ್ಕೆ ಜುಲ್ಫಿಕರ್ ಎಂಬ ವ್ಯಕ್ತಿ ಅವರು ಶಿವಮೊಗ್ಗ ಹಾಗೂ ಮೈಸೂರ್ ಡಾನ್ ಇಮ್ರಾನ್ ಸಿದ್ದೀಕಿ ಎಂದಾಗ ಹೆದರಿ ಅವರನ್ನ ಮಾತನಾಡಿಸಿದರಂತೆ, ಆಗ ಕಾರಿನಿಂದ ಕೆಳಗೆ ಇಳಿದು ಬಂದ ವ್ಯಕ್ತಿ, ನಾನು ಇಮ್ರಾನ್ ಸಿದ್ದೀಕ್, ನನಗೆ ಎಲ್ಲಾ ಅಧಿಕಾರಿಗಳು ಗೊತ್ತಿದ್ದಾರೆ, ನೀನು ನನ್ನ ಅನುಮತಿ ಇಲ್ಲದೇ ಮರಳಿನ ಲೀಜ್ ನಡೆಸುತ್ತಿರುವೆ ಎಂದು ಹೇಳಿ 10 ಲಕ್ಷ ಹಣವನ್ನು ನೀಡಿದರೆ ಮಾತ್ರ ನಾನು ನಿನಗೆ ಮರಳನ್ನು ಸಾಗಾಣಿಕೆ ಮಾಡಲು ಬಿಡುತ್ತೇನೆಂದು ಹೇಳಿ ಬೆದರಿಕೆ ಹಾಕಿದರಂತೆ. ಆಗ ಅವನಿಗೆ ಹೆದರಿಕೊಂಡು ಅಂದೇ 4 ಲಕ್ಷ ನೀಡಿರುತ್ತಾರಂತೆ. ಈ ರೀತಿ ಯಾಕೆ ನನ್ನ ಮೇಲೆ ದೌರ್ಜನ್ಯ ಮಾಡುತ್ತೀರಿ ಎಂದು ಕೇಳಿದ್ದಕ್ಕೆ ಇಮ್ರಾನ್ ಸಿದ್ದೀಕ್, ಅಶೋಕ್ ಅವರಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಾಡಿದರಂತೆ, ನನಗೆ ಗೊತ್ತಿಲ್ಲದೇ ಬುಸಿನೆಸ್ ಮಾಡಿದ್ರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ, ನಮ್ಮ ಹುಡುಗರಿಗೆ ಹೇಳಿ ನಿನ್ನ ಕೈಕಾಲು ಮುರಿಸುತ್ತೇನೆಂದು ಧಮಿಕಿ ಹಾಕಿದ್ರಂತೆ.
ಒಂದು ತಿಂಗಳ ನಂತರ ಅಂದರೆ 14 ಅಕ್ಟೋಬರ್ 2021 ರಂದು ಶಿವಮೊಗ್ಗ – ಹರಿಹರ ರಸ್ತೆ,ಯಲ್ಲಿ ಜುಲ್ಫಿಕರ್ ಹಾಗೂ ಇಮ್ರಾನ್ ಸಿದ್ಧಿಕ್ ಅಶೋಕ್ ಅವರ ಕಾರಿಗೆ ಅಡ್ಡ ಬಂದು ಉಳಿದ 06 ಲಕ್ಷ ಹಣವೆಲ್ಲಿ ಅಂತಾ ಕೇಳ್ತಾರೆ. ಆಗ ಅವರಿಗೆ ಹೆದರಿ ಅಶೋಕ್ ಅವರ ಕಾರನ್ನು ಅಲ್ಲಿಯೇ ಬಿಟ್ಟು ಬೇರೆ ವಾಹನದಲ್ಲಿ, ಹೋಗಿ 04 ಲಕ್ಷ ಹಣವನ್ನು ಹೊಂದಿಸಿಕೊಂಡು ಬಂದು ಇಮ್ರಾನ್ ಸಿದ್ದಿಕ್ ಗೆ ಒಟ್ಟು 8 ಲಕ್ಷ ಹಣವನ್ನು ನೀಡಿದ್ದಾರೆ. ಇಮ್ರಾನ್ ಸಿದ್ದೀಕ್ ಅಂದು ನನಗೆ ಉಳಿದ 02 ಲಕ್ಷ ಹಣವನ್ನು ಆದಷ್ಟು ಬೇಗ ತಂದು ಕೊಡು ಇಲ್ಲವಾದಲ್ಲಿ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಅದ್ದರಿಂದ ನನಗೆ ಜೀವ ಬೆದರಿಕೆ ಹಾಕಿ ನನ್ನಿಂದ 08 ಲಕ್ಷ ಹಣ ಪಡೆದು ಇನ್ನೂ ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟಿರುವ ಇಮ್ರಾನ್ ಸಿದ್ದಿಕ್ ಮತ್ತು ಜುಲ್ಫಿಕರ್ ವಿರುದ್ಧ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಬೇಕಾ ಹರಿಹರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಆಶೋಕ್.

ಆಶೋಕ್ ನಿಂದ ದೂರು ಪಡೆದ ಹರಿಹರ ಗ್ರಾಮಾಂತರ ಪೋಲಿಸ್ ನವರು ಇಮ್ರಾನ್ ಸಿದ್ದೀಕಿ ಹಾಗೂ ಜುಲ್ಫಿಕರ್ ವಿರುದ್ದ IPC 1860 (U/s-384,504,506,34) ರಡಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಇಮ್ರಾನ್ ಸಿದ್ದೀಕಿ ಹಾಗೂ ಜುಲ್ಫಿಕರ್ ವಿರುದ್ದ ದಾವಣಗೆರೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕೂಡ ದೂರು ದಾಖಲಾಗಿದ್ದು ಸಧ್ಯ ಇಮ್ರಾನ್ ಸಿದ್ದೀಕಿ ದಾವಣಗೆರೆಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಜುಲ್ಫಿಕರ್ ಪೊಲೀಸ್ ರಿಂದ ತಪ್ಪಿಸಿಕೊಂಡಿದ್ದು ಅವನ ಬಂಧನಕ್ಕೆ ದಾವಣಗೆರೆ ಎಸ್ ಪಿ ಸಿ.ಬಿ. ರಿಷ್ಯಂತ್ ತಂಡ ಬಲೆ ಬೀಸಿದೆ.
garudavoice21@gmail.com 9740365719