ಅರಸಿಕೆರೆಯಲ್ಲಿ ತಾಡಪಾಲು ವಿತರಣೆಗೆ ಅರ್ಜಿ ಆಹ್ವಾನ

ದಾವಣಗೆರೆ : ಹರಪನಹಳ್ಳಿ ತಾಲೂಕಿನ ಅರಸಿಕೆರೆ ಗ್ರಾಮದ ರೈತರು ತಾಡಪಾಲುಗಳ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಅರಸಿಕೆರೆ ಪ್ರಕಟಣೆ ಹೊರಡಿಸಿದ್ದು, ಕಳೆದ ಮೂರು ವರ್ಷದಲ್ಲಿ ತಾಡಪಾಲು ತೆಗೆದುಕೊಳ್ಳದೆ ಇರುವ ರೈತರು ದಿನಾಂಕ 01-06-2022ರಿಂದ 10-06-2022ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಷ್ಟೇಅಲ್ಲದೆ ಗ್ರಾಮ ಪಂಚಾಯ್ತಿ ಸೂಚನಾ ಫಲಕದಲ್ಲಿ ಪ್ರಕಟಣೆ ಅಳವಡಿಸಲು ಸೂಚಿಸಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಚಾಲ್ತಿ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ(ಎಸ್ಸಿ, ಎಸ್ಟಿ) ಮಾತ್ರ ಕಡ್ಡಾಯವಾಗಿ ಜಾತಿ ಪ್ರಮಾಣವು ಆಧಾರ್ ಕಾರ್ಡಿನಲ್ಲಿ ಇರುವ ಹೆಸರಿನಂತೆ ಇರಬೇಕು(ವಿಜಯನಗರ ಜಿಲ್ಲೆ ಹೊಸ ಜಾತಿ ಪ್ರಮಾಣ ಪತ್ರ ಜೆರಾಕ್ಸ್)
ಸೂಚನೆಗಳು :
• ಕಳೆದ 3 ವರ್ಷಗಳಲ್ಲಿ ತಾಡಪಾಲು ಪಡೆದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
• ಅವಧಿ ಮೀರಿ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
• ಅರ್ಜಿಯನ್ನು ಬೆಳಿಗ್ಗೆ 10.30 ರಿಂದ 4 ಗಂಟೆಯವರೆಗೆ ಪಡೆಯಲಾಗುತ್ತದೆ.
• ಲಾಟರಿ ಮೂಲಕ ದಿನಾಂಕ 15-06-2022ರ ಬೆಳಿಗ್ಗೆ 11.30ಕ್ಕೆ ಆಯ್ಕೆ ಮಾಡಲಾಗುತ್ತದೆ.