ಪುರಾತತ್ವ ಇಲಾಖೆ ಉತ್ಕಲನ ಮಾಡಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು! ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ

sree

ನ್ಯಾಮತಿ: ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ 64 ವೀರಶೈವ ಮಠಗಳಿದ್ದವು, ಈಗ ಬೆರಳಣಿಕೆಯಷ್ಟು ಮಾತ್ರ ಮಠಗಳಿವೆ, ಉಳಿದೆಲ್ಲವೂ ಬೇರೆಯವರ ಪಾಲಾಗಿದೆ ಎಂದು ಹೊಟ್ಯಾಪುರ ಹಾಗೂ ಮಂಗಳೂರಿನ ಬಸವನಗುಡಿ ಉಜ್ಜಯಿನಿ ಶಾಖಾ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಂಗಳೂರಿನ ಮಳಲಿ ಮಸೀದಿ ದೇಗುಲಕ್ಕೆ ಸಂಬ0ಧಪಟ್ಟ ಜಾಗದ ಬಗ್ಗೆ ಶನಿವಾರ ಮಾತನಾಡಿರುವ ಉಜ್ಜಯಿನಿ ಶಾಖಾ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಿವಾಧಿತ ಮಸೀದಿ ಜಾಗದಲ್ಲಿ 1500 ವರ್ಷಗಳ ಹಿಂದೆ ಶಿವ ಸಾನ್ನಿಧ್ಯ ಹಾಗೂ ಗುರುಮಠವಿತ್ತು ಎಂಬ ಮಾಹಿತಿ ಇದೆ ಈ ಬಗ್ಗೆ ಸರಕಾರ ಮದ್ಯಪ್ರವೇಶ ಮಾಡಿ, ಪುರಾತತ್ವ ಇಲಾಖೆಯಿಂದ ಉತ್ಕಲನ ಮಾಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದರು.

ನೂರಾರು ವರ್ಷಗಳ ಹಿಂದೆ ಈ ಪುಣ್ಯಸ್ಥಳದಲ್ಲಿ ಉಜ್ಜಯನಿಯ ಜಗದ್ಗುರು ಗುರು ಸಿದ್ದೇಶ್ವರರು ಜಪ ತಪ ಮಾಡುತ್ತಿದ್ದರು ಎಂಬುದರ ಬಗ್ಗೆ ನಾವೂ ಕೇಳಿದ್ದೇವೆ, ಇತಿಹಾಸದಿಂದಲ್ಲೂ ತಿಳಿಯುತ್ತದೆ ಆದರೆ ಲಿಖಿತವಾಗಿ ಇನ್ನು ದಾಖಲೆಗಳು ಸಿಕ್ಕಿಲ್ಲ, ಇದು ಗುರುಪುರ ಜಂಗಮಮಠ ಕೂಡ ಹೌದು ಎಂದ ಉಜ್ಜಯಿನಿ ಶಾಖಾ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಂಗಳೂರಿನ ಚಿತ್ರ ಟಾಕೀಸ್ ಬಳಿ ಮಸೀದಿ ಇದೆ ಅದರ ಎದುರು ಮುರ್ಗಿಮಠ ಕಾಂಪೌ0ಡ್ ಇದೆ, ಇಲ್ಲಿಯೂ ಸಹ ಜಂಗಮ ಮಠ ಇತ್ತು ಎಂದು ಹೇಳಲಾಗುತ್ತಿದೆ, ಆದರೆ ಸರಿಯಾದ ದಾಖಲೆಗಳು ಸಿಗುತ್ತಿಲ್ಲ ಎಂದರು.

ಅಷ್ಟಮAಗಳದ ಪ್ರಶ್ನೆಯನ್ನು ಟೀಕಿಸುವ ಹಾಗೂ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಅಷ್ಟಮಂಗಳ ಪ್ರಶ್ನೆ ಕೇಳುವುದು ಹಿಂದುಗಳಾದ ನಮ್ಮ ಧಾರ್ಮಿಕ ಹಕ್ಕು. ಈ ಬಗ್ಗೆ ಮಂಗಳೂರು ಹಾಗೂ ಉಡುಪಿಯ ಜನರಿಗೆ ಬಹಳ ಭಕ್ತಿ ಹಾಗೂ ಗೌರವ, ಈ ವಿಚಾರವನ್ನು ತಮ್ಮ ಅಧಿಕಾರಕ್ಕಾಗಿ ಟೀಕಿಸುವುದು, ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಯಾವ ರಾಜಕಾರಣಿಯೂ ಮಾಡಬಾರದು ಎಂದು ಸ್ವಾಮೀಜಿ ಹೇಳಿದರು.

ಬೇರೆಯವರು ಬಂದು ನಮ್ಮ ಮನೆಗೆ ಬೀಗ ಹಾಕಿದರೆ ಸುಮ್ಮನಿರಬೇಕೆ? ದೇಶದ ವಿವಿಧ ಕಡೆಗಳಲ್ಲಿ ದೇಗುಲವನ್ನು ಕೆಡವಿ ಮಸೀದಿಯನ್ನು ಕಟ್ಟಿದ್ದಾರೆ, ಇದನ್ನು ನೋಡಿಕೊಂಡು ಸುಮ್ಮನೆ ಕೂರಬೇಕೆ ಎಂದು ಪ್ರಶ್ನಿಸಿದ ಅವರು, ಬೇರೆಯವರು ನಮ್ಮ ಮನೆಗೆ ಬಂದು ನಮ್ಮನ್ನು ಹೊರಗೆ ಕಳುಹಿಸಿ ಬೀಗ ಹಾಕಿದರೆ ನಾವುಗಳು ಸುಮ್ಮನಿರಬೇಕಾ ಎಂದು ಅವರು ದೇಗುಲಗಳ ಜಾಗದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣದ ಮಾಡಿರುವ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!