ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ.! ASP ಕನ್ನಿಕಾ ಸಿಕ್ರಿವಾಲ್ ನೇತೃತ್ವ

ದಾವಣಗೆರೆ: ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರಿವಾಲ್, ಐ.ಪಿ.ಎಸ್ ಸಿಬ್ಬಂದಿಗಳೊಂದಿಗೆ ದಿನಾಂಕ-20.08.2022 ರಂದು ದಾವಣಗೆರೆ ತಾ. ಹಳೇಬಾತಿ ಗ್ರಾಮದ ಹತ್ತಿರ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ತಿಪ್ಪಣ್ಣ ನಾಟೇಕರ್, 56 ವರ್ಷ, ಯಾದಗಿರಿ ಜಿಲ್ಲೆ ರವರ ಮೇಲೆ ದಾಳಿ ನಡೆಸಿ 20,000 ರೂ. ಬೆಲೆಯ 600 ಗ್ರಾಂ ತೂಕದ ಗಾಂಜಾ ಒಣಗಿದ ಸೊಪ್ಪನ್ನು ವಶಕ್ಕೆ ಪಡೆದುಕೊಂಡು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತದೆ.
ದಾಳಿಯಲ್ಲಿ ಶ್ರೀಮತಿ ಕನ್ನಿಕಾ ಸಿಕ್ರಿವಾಲ್, ಸಹಾಯಕ ಪೊಲೀಸ್ ಅಧೀಕ್ಷಕರು, ದಾವಣಗೆರೆ ಗ್ರಾಮಾಂತರ ಉಪ ವಿಭಾಗ, ದಾವಣಗೆರೆ ಇವರ ನೇತೃತ್ವದಲ್ಲಿ ಶ್ರೀ ಲಿಂಗನಗೌಡ ನೇಗಳೂರು, ಪಿ.ಐ, ಶ್ರೀ ಹಾರೂನ್ ಅರ್., ಪಿ.ಎಸ್.ಐ, ಯಾಸೀನುಲ್ಲಾ ಎ.ಎಸ್.ಐ., ಶ್ರೀ ಸೈಯದ್ ಗಫಾರ್, ನಾಗರಾಜಯ್ಯ, ತಿಮ್ಮಪ್ಪ ರವರು ಭಾಗವಹಿಸಿದ್ದು, ಭಾಗವಹಿಸಿದ ಎಲ್ಲಾ ಅಧಿಕಾರಿ, ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ದಾವಣಗೆರೆ ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ರವರು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.