ಅಥಣಿ ಶಿವಯೋಗಿಗಳ ೧೮೬ ನೇ ಜಯಂತ್ಯೋತ್ಸವ

IMG_20210710_195113

 

ದಾವಣಗೆರೆ.ಜು.೧೦; ಅಥಣಿ ಶಿವಯೋಗಿಗಳು ದೇಶ ಕಂಡಮಹಾನ್ ಶಿವಯೋಗಿಯಾಗಿದ್ದಾರೆ ಆಧ್ಯಾತ್ಮಿಕ ರತ್ನವಾಗಿದ್ದಾರೆ, ನುಡಿಯೊಳಗೆ ನಡೆತುಂಬಿ ನಡೆಯೊಳಗೆನುಡಿ ತುಂಬಿದ ಜ್ಞಾನದ ಕಡಲಾಗಿದ್ದರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ಶಿಯೋಗಾಶ್ರಮದಲ್ಲಿ ಅಥಣಿ ಶಿವಯೋಗಿಗಳವರ ೧೮೬ ನೇ ಜಯಂತಿಯನ್ನು ಸರಳವಾಗಿ ಆಚರಿಸಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಜಂಜಾಟಕ್ಕೆ ಸಿಲುಕಿ ಸಮಸ್ಯೆಗಳ ಮುಕ್ತಿಗಾಗಿ ಹಲವು ದೇವರನ್ನು ಸುತ್ತಾಡಿ ಬರುತ್ತಾರೆ.

ಅದರ ಬದಲು ಅತ್ತಲಿತ್ತ ಹರಿವ ಮನವನ್ನು ಇಷ್ಠಲಿಂಗದಲ್ಲಿ ಸಲ್ಲಿಸಿದಾಗ ಬದುಕಿನ ಸಂಕಷ್ಟಗಳು ನಿವಾರಣೆಯಾಗುತ್ತವೆ.ಚಂಚಲ ಮನವನ್ನು ಗೆದ್ದು ಘನಮಾನವನ್ನಾಗಿಸಿಕೊಂಡು ಬಂದಾಗ ಭಕ್ತರ ಕಷ್ಟಗಳು ನಿವಾರಣೆಗುತ್ತದೆ ಮಹಾತ್ಮರನ್ನು ಸ್ಮರಿಸಿದರೆ ನಮ್ಮ ಪಾಪ ಕಷ್ಠಗಳು ನಿವಾರಣೆಯಾಗುತ್ತದೆ ಎಂದು ಭಕ್ತರು ಬಯಸುತ್ತಾರೆ.ಸತ್ತಾಗ ಮುಕ್ತಿ ಸಿಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಬದುಕಿದ್ದಾಗ ಮುಕ್ತಿಯನ್ನು ಅನುಭವಿಸಬೇಕು ಮುಕ್ತಿ ಎಂದರೆ ನಿಶ್ಚಿಂತ ಸ್ಥಿತಿ ಅದು ಧ್ಯಾನ ಶಿವಯೋಗದಿಂದ ಸಿಗುತ್ತದೆ.ಪ್ರತಿಯೊಬ್ಬರೂ ಧ್ಯಾನ ಶಿವಯೋಗ ಮಾಡಬೇಕು.ಬದುಕಿನ ಚಿಂತೆ ಬಿಟ್ಟು ಚಿಂತನೆ ಮಾಡಿದರೆ ಪರಿಹಾರವಾಗುತ್ತದೆ ಎಂದರು.

ಈ ವೇಳೆ ಭಜನಾ ಸಂಘದ ಅಧ್ಯಕ್ಷ ಜಯದೇವಪ್ಪ,ಜಿ.ಸೋಮನಾಥ್,ಬುಸ್ನೂರು ಶಿವಯೋಗಿ,ಎಂ ಜಯಕುಮಾರ್,ಅಂದನೂರು ಮುಪ್ಪಣ್ಣ,ಎಸ್ ಓಂಕಾರಪ್ಪ,ಕಣಕುಪ್ಪೆ ಮುರುಗೇಶಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!