Award: ಕರ್ನಾಟಕ ಛಾಯಾರತ್ನ ಪ್ರಶಸ್ತಿ ಸ್ವೀಕರಿಸಿ ದಾವಣಗೆರೆಯ ಮುದ್ದಳ್ಳಿ ಅರುಣ್. ಬಿ ಮಂಜುನಾಥ್, ಶ್ರೀಮತಿ ಸುಮಾ ಎಸ್ ಎ

ಬೆಂಗಳೂರು: (Award) ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ಹಾಗೂ ಬೈ ಅಂಡ್ ಸೇಲ್ ಇಂಟಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಅಂತರಾಷ್ಟ್ರೀಯ ಫೋಟೋಗ್ರಾಫಿ ವಿಡಿಯೋಗ್ರಾಫಿ ಆಲ್ಬಮ್ ಮತ್ತು ಡಿಜಿಟಲ್ ಪ್ರಿಂಟಿಗ್ ಇಮೇಜಿಂಗ್ ಪ್ರದರ್ಶನ ಫೋಟೋ ಟುಡೆ ಎಕ್ಸಿಮಿಷನ್ ಮತ್ತು 25ನೇ ವರ್ಷದ ಬೆಳ್ಳಿ ಮಹೋತ್ಸವದ ಸಂಭ್ರಮಾಚರಣೆ ಅಂಗವಾಗಿ ಬೆಂಗಳೂರು ಅರಮನೆ ಮೈದಾನ ತ್ರಿಪುರ ವಾಸವಿ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನೆರವೇರಿತು.
ದಾವಣಗೆರೆ ಜಿಲ್ಲಾ ಛಾಯಾಗ್ರಾಹಕರ ಸಂಘದ ನಿರ್ದೇಶಕರು ಹಿರಿಯ ಛಾಯಾಗ್ರಾಹಕರು,ಸಿದ್ಧಿವಿನಾಯಕ ಕಲರ್ ಲ್ಯಾಬ್ ಮತ್ತು ಸ್ಟುಡಿಯೋ ಮಾಲೀಕರಾದ ಬಿ.ಅರುಣ್ ಮುದಳ್ಳಿ ಹಾಗೂ ದಾವಣಗೆರೆ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಗೌರವ ಅಧ್ಯಕ್ಷರು ಹಾಗೂ ಹಿರಿಯ ಛಾಯಾಗ್ರಾಹಕರು ಅನು ವಿಡಿಯೋ ಮಾಲೀಕರಾದ ಬಿ. ಮಂಜುನಾಥ್ ಹಾಗೂ ಸುಮಾ ಡಿಜಿಟಲ್ ಫೋಟೋಸ್ ಮಾಲೀಕರು ಆದ ಶ್ರೀಮತಿ ಎಸ್. ಎ.ಸುಮಾ ಕಲ್ಲೇಶ್ ಇವರುಗಳಿಗೆ ಛಾಯಾಗ್ರಣ ಕ್ಷೇತ್ರ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ರವರು ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಭಯ ಪ್ರಸಾದ್ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಹುಬ್ಬಳ್ಳಿ ಧಾರವಾಡ ಶಾಸಕರು ಕಿರಣ್ ಬಂಕಾಳೆ ದೂರದರ್ಶನದ ವರದಿಗಾರರು ಹಾಗೂ ಅಧ್ಯಕ್ಷರು ಹುಬ್ಬಳ್ಳಿ ಫೋಟೋಗ್ರಾಫರ್ಸ್ ಮತ್ತು ವಿಡಿಯೋ ಅಸೋಸಿಯೇಷನ್ ರಿ, ಶರಣ ಬಸಪ್ಪ , ಕರ್ನಾಟಕ ಫೋಟೋ ಪತ್ರಕರ್ತರ ಸಂಘ ಬೆಂಗಳೂರು, ದಿನೇಶ್ ಚಂದ್ರ ವರ್ಮ, ಅಧ್ಯಕ್ಷರು ಉತ್ತರ ಪ್ರದೇಶ ಫೋಟೋಗ್ರಾಫರ್ಸ್ ಅಸೋಸಿಯೇಶನ್, ಹಾಗೂ ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ರಾಜ್ಯ ಪದಾಧಿಕಾರಿಗಳಾದ ಬೆಜಿಮನ್, ಜಗದೀಶ್, ಛಾಯಾ ಸುದ್ದಿ ಸಂಪಾದಕ ಖಾಜಪೀರ್ ಹೊಸಪೇಟೆ, ಕೃಷ್ಣಪ್ಪ ಹಾಗೂ ದಾವಣಗೆರೆ ತಾಲೂಕು ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘದ ಅಧ್ಯಕ್ಷ ಎಂ ಮನು ಗೌರವ ಸಲಹೆಗಾರರು ಆದ ಸಂತೋಷ್ ದೊಡ್ಮನಿ, ಕೊಂಡಜ್ಜಿ ಎಸ್ ರಾಜಶೇಖರ್ ಅಧ್ಯಕ್ಷರು ಗ್ರಾಮಾಂತರ ವಲಯ ,ಉಪಾಧ್ಯಕ್ಷ ರಮೇಶ್ ಡಿ ಹಿಮಾಲಯ, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಕೆ ಕುಮಾರ್ , ಖಜಾಂಚಿ, ರಂಗನಾಥ್ ಡಿ ಸಂಚಾಲಕ ಸಂಜಯ್ ಎಚ್ಎಫ್, ಮಲ್ಲೇಶ್ ಎಚ್ ಪಾಟೀಲ್ , ಹಾಗೂ ಸಂಘದ ಸದಸ್ಯರು ಕುಟುಂಬ ವರ್ಗದವರು ಭಾಗವಹಿಸಿದ್ದರು.
ಫೋಟೋ ಟುಡೆ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕಂಪನಿಗಳಾದ ನಿಕಾನ್ , ಪ್ಯಾನಸೋನಿಕ್, ಕೆನಾನ್, ಸೋನಿ , ಕೊಡೆಕ್ಸ್, ಫ್ಯೂಸಿ ಫಿಲಂ , ಇನ್ನು ಮುಂತಾದ ಕಂಪನಿಗಳು ಭಾಗವಹಿಸಿದ್ದವು ಇದೇ ಸಂದರ್ಭದಲ್ಲಿ ರಾಜ್ಯದ ಜಿಲ್ಲೆಗಳಿಂದ ಆಗಮಿಸಿದ 51ಕ್ಕೂ ಹೆಚ್ಚು ಛಾಯಾಗ್ರಾಕರಿಗೆ ಹಾಗೂ ಕರ್ನಾಟಕ ಪತ್ರಕರ್ತರ ಫೋಟೋಗ್ರಾಫರ್ ಗಳಿಗೂ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಪಡೆದರು