ಬಿ.ಐ.ಇ.ಟಿ. ಕಾಲೇಜನ ವಿನೂತನ ಸಂಶೋಧನಾ ಯೋಜನೆಗೆ ವಿ.ಟಿ.ಯು. ಪ್ರಾಯೋಜಕತ್ವ

WhatsApp Image 2022-02-24 at 6.06.59 PM

ದಾವಣಗೆರೆ: ಇಂದಿನ ದಿನಗಳಲ್ಲಿ ಆಗುತ್ತಿರುವ ವಿಪರೀತವಾದ ಸಾಂಪ್ರದಾಯಿಕ ಇಂಧನಗಳ ಬಳಕೆ, ಅವುಗಳನ್ನು ನಾಶದ ಅಂಚಿಗೆ ನೂಕುತ್ತಿದ್ದು, ಮುಂದಿನ ಪೀಳಿಗೆಗೆ ಪೆಟ್ರೋಲಿಯಮ್ ಉತ್ಪನ್ನಗಳು ದೊರಕಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಸಾಂಪ್ರದಾಯಿಕ ಇಂಧನಗಳ ಸತತ ಮತ್ತು ಅವೈಜ್ಞಾನಿಕ ಬಳಕೆ, ಅತಿಯಾದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಂದ ನವೀಕರಿಸಲ್ಪಡುವ ಪರಿಸರ ಸ್ನೇಹೀ ಪರ್ಯಾಯ ಇಂಧನಗಳ ಶೋಧ ಸತತವಾಗಿ ಪ್ರಪಂಚದಾದ್ಯಂತ ನಡೆಯುತ್ತಿದೆ. ಬಿ.ಐ.ಇ.ಟಿ. ಆಡಳಿತ ಮಂಡಳಿ, ಹೊಸ ಸಂಶೋಧನಾ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತ ಸಂಶೋಧನೆಗಳಲ್ಲಿ ತೊಡಗಲು ಸಹಕಾರಿಯಾಗಿದೆ.

ಬಿ.ಐ.ಇ.ಟಿ. ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ| ಶಂಕರಮೂರ್ತಿ ಅವರು ಬೆಂಗಳೂರಿನ ರೋವ ಲ್ಯಾಬ್ ಸಹಯೋಗದೊಂದಿಗೆ ಸಲ್ಲಿಸಿದ “ಡಿಸೈನ್ ಎಂಡ್ ಡೆವೆಲಪ್‌ಮೆಂಟ್ ಆಫ್ ಡೈ ಸೆನ್ಸಿಟೈಸ್ಟ ಹೈಬ್ರಿಡ್ ಈ-ವೆಹಿಕಲ್” ಯೋಜನಾ ಪ್ರಸ್ಥಾವನೆಗೆ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, 9 ಲಕ್ಷ ರೂಪಾಯಿಗಳ ಮಂಜೂರಾತಿ ನೀಡಿದೆ. ಮತ್ತು ಬಿ.ಐ.ಇ.ಟಿ. ಅಡಳಿತ ಮಂಡಳಿ 3 ಲಕ್ಷ ರೂಪಾಯಿಗಳ ಸಹಾಯಧನ ನೀಡಿದೆ. ಈ ಸಂಶೋಧನೆಯಲ್ಲಿ ವಾಹನಗಳ ಬ್ಯಾಟರಿ ರೀಚಾರ್ಜ ಮಾಡಲು ನವೀನ ತಂತ್ರಜ್ಞಾನವನ್ನು ಆವಿಷ್ಕರಿಸಲಾಗುತ್ತಿದ್ದು, ಇದರಿಂದ ಸೂರ್ಯನ ಬೆಳಕಲ್ಲದೆ ರಾತ್ರಿಯಲ್ಲೂ ಕೂಡಾ ಮಂದವಾದ ಬೆಳಕನ್ನು ಉಪಯೋಗಿಸಿ ಬ್ಯಾಟರಿ ರೀಚಾರ್ಜ ಮಾಡಲು ಸಾಧ್ಯವಾಗಲಿದೆ. ಇದರಿಂದ ವಿದ್ಯುತ್ ವಾಹನಗಳ ಪ್ರಸ್ತುತ ಸಮಸ್ಯೆ ನಿವಾರಣೆಯಾಗಲಿದ್ದು, ವಿದ್ಯುತ್ ವಾಹನಗಳ ಬಳಕೆ ಹೆಚ್ಚಾಗಲಿದೆ.

ಬಿ.ಐ.ಇ.ಟಿ. ಕಾಲೇಜಿನ ಈ ಸಾಧನೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶಾಮನೂರು ಶಿವಶಂಕರಪ್ಪನವರು ಹಾಗೂ ಜಂಟೇ ಕಾರ್ಯದರ್ಶಿಗಳಾದ ಎಸ್. ಎಸ್. ಮಲ್ಲಿಕಾರ್ಜುನ ಅವರು ಅಭಿನಂದಿಸಿದ್ದಾರೆ.

ನಿರ್ದೇಶಕರಾದ ಫ್ರೋ. ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲರಾದ ಡಾ|| ಎಚ್.ಬಿ.ಅರವಿಂದ,
ಸಾರ್ವಜನಿಕ ಸಂಪರ್ಕ ಡೀನ್,
ಡಾ|| ಜಿ. ಪಿ. ದೇಸಾಯಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!