ವಿರಕ್ತ ಮಠದಲ್ಲಿ ಬರುವ ಬಸವ ಜಯಂತಿಯಿಂದ ನಿತ್ಯ ಮಹಾ ದಾಸೋಹ ಸೇವೆ – ಬಸವಪ್ರಭು ಶ್ರೀ

basava prabhu viraktha matha

ದಾವಣಗೆರೆ: ಶ್ರೀ ಬಸವೇಶ್ವರ ಸರ್ವಧರ್ಮ ದಾಸೋಹ ಸಂಘದ ವತಿಯಿಂದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಬರುವ ಬಸವಜಯಂತಿಯಿಂದ ನಿತ್ಯ ಮಹಾದಾಸೋಹ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತಮಠದ ಬಸವಪ್ರಭು ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿರಕ್ತಮಠದಲ್ಲಿ ನಿತ್ಯ ದಾಸೋಹ ಏರ್ಪಡಿಸಬೇಕೆಂಬುದು ಹಲವು ದಿನಗಳ ಅಪೇಕ್ಷೆಯಿತ್ತು. ಅದರಂತೆ, ಈಗ ಮುರುಘಾ ಶರಣರ ಪಿಠಾರೋಹಣದ ತೃತೀಯ ದಶಮಾನೋತ್ಸವದ ಸವಿನೆನಪಿಗೆ ಮತ್ತು ಕನ್ನಡ ಚಿತ್ರರಂಗದ ದಿಗ್ಗಜರ ಸ್ಮರಣಾರ್ಥ ನಿತ್ಯ ದಾಸೋಹ ಹಮ್ಮಿಕೊಳ್ಳಲು ಸರ್ವಧರ್ಮ ದಾಸೋಹ ಸಂಘ ಮುಂದೆಬಂದಿದೆ ಎಂದರು.

ಪ್ರತಿದಿನ ಸಂಜೆ ೭-೩೦ ರಿಂದ ನಿತ್ಯ ದಾಸೋಹ ಪ್ರಾರಂಭವಾಗಲದ್ದು, ನಗರದಲ್ಲಿರುವ ಬಡಜನರಿಗೆ, ಕಾರ್ಮಿಕರಿಗೆ, ಆಟೋ ಚಾಲಕರಿಗೆ, ಇತರೆ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ದಾಸೋಹದಿಂದ ಸಹಾಯವಾಗಲಿದೆ ಎಂದು ಹೇಳಿದರು.

ಬಸವಜಯಂತಿಯಿಂದ ಪ್ರತಿದಿನ ಸಂಜೆ ೭:೩೦ ರಿಂದ ನಿತ್ಯ ದಾಸೋಹ ನಡೆಯಲಿದ್ದು, ಈಗಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಾಸೋಹಕ್ಕೆ ದವಸ-ಧಾನ್ಯ, ಹಣ ನೀಡಲಿಚ್ಛಿಸುವವರು ಕೊಂಡಜ್ಜಿ ರಸ್ತೆಯಲ್ಲಿರುವ ಗೋಪಿಕಾ ಡ್ರೈವಿಂಗ್ ಸ್ಕೂಲ್ ಅವರನ್ನು ಸಂಪರ್ಕಿಸಿ ದಾನ ನೀಡಿ, ರಸೀದಿ ಪಡೆಯಬಹುದು. ಮೊ: ೭೩೫೩೫೨೭೫೫೫, ೯೦೩೫೩೯೧೬೦೮ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.

ನಗದನ್ನು ದಾನ ನೀಡಲಿಚ್ಛಿಸುವ ದಾನಿಗಳು ಶ್ರೀ ಬಸವೇಶ್ವರ ಸರ್ವಧರ್ಮ ದಾಸೋಹ ಸಂಘ, ಕರ್ನಾಟಕ ಬ್ಯಾಂಕ್, ಖಾತೆ ನಂ. ೧೯೦೨೫೦೦೧೦೨೯೯೬೦೦೧, ಐಎಫ್‌ಎಸ್‌ಸಿ ಕೋಡ್: KARB0000190  ಹಣ ಕಳುಹಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅರವಿಂದಾಕ್ಷ, ಶಾಂತಕುಮಾರ್, ಜೆ.ಕೆ. ಹನುಮಂತಪ್ಪ, ನಾಗರಾಜ್, ವೀರಣ್ಣ, ಕರಿಯಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!