ದಾವಣಗೆರೆ ಮೇಯರ್ ಎಸ್.ಟಿ.ವೀರೇಶ್ ಸಿಟಿ ರೌಂಡ್ಸ್

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ಅವರು ಬುಧವಾರ ಸಂಜೆ ನಗರದಲ್ಲಿ ಸಿಟಿ ರೌಂಡ್ಸ್ ನಡೆಸಿದರು.
ನಗರದ ಗಡಿಯಾರ ಕಂಬದ ಸುತ್ತ ಮುತ್ತ ಇರುವ ಅನೇಕ ಸಮಸ್ಯೆಗಳನ್ನು ಗಮನಿಸಿದ ವೀರೇಶ್ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ಸ್ಥಳದಲ್ಲಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ನಾಮ ನಿರ್ದೇಶನ ಸದಸ್ಯ ಶಿವನಗೌಡ ಪಾಟೀಲ್ ಇತರರು ಉಪಸ್ಥಿತರಿದ್ದರು.