ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೆ ಬೆಳ್ಳಿ ಗಣೇಶ ಮೂರ್ತಿ ಆರೋಪ 

ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೆ ಬೆಳ್ಳಿ ಗಣೇಶ ಮೂರ್ತಿ ಆರೋಪ 

ದಾವಣಗೆರೆ:  ಚುನಾವಣೆ ಹಿನ್ನೆಲೆಯಲ್ಲಿ ನಗರದ‌ ಭಾರತ್ ಕಾಲೋನಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮತದಾರರಿಗೆ ಬೆಳ್ಳಿ ಗಣೇಶನ‌ ಮೂರ್ತಿ ನೀಡಿ ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಇಂದು ಬೆಳಗಿನ ಜಾವ ಐದು ಗಂಟೆ ವೇಳೆಗೆ ಭಾರತ್ ಕಾಲೋನಿಯಲ್ಲಿ ಬೆಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಭಾವಚಿತ್ರದ ಬ್ಯಾಲೆಟ್ ಪೇಪರ್ ಜೊತೆ ಬೆಳ್ಳಿ ಗಣೇಶನ‌ ಮೂರ್ತಿ ಹಂಚಲಾಗಿದೆ. ಸುದ್ದಿ ತಿಳಿದು‌ ಕಾಂಗ್ರೆಸ್ ಕಾರ್ಯಕರ್ತರು ಹೋಗುವ ವೇಳೆಗೆ ಬಿಜೆಪಿ ಕಾರ್ಯಕರ್ತರು ಓಡಿ ಹೋದ ವೀಡಿಯೋ ಸಾಮಾಜಿಕ‌ ಜಾಲ‌ತಾಣದಲ್ಲಿ‌ ಹರಿದಾಡುತ್ತಿದೆ.

 

Leave a Reply

Your email address will not be published. Required fields are marked *

error: Content is protected !!