8 ವರ್ಷ ಆಡಳಿತ ಪೂರೈಸಿರುವ ಬಿಜೆಪಿ! ಸೇವಾದಿವಸ್ ಆಚರಣೆ

d308f632-a599-42ac-8dac-0703b1ed8f3b

ದಾವಣಗೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 8 ವರ್ಷಗಳ ಆಡಳಿತ ಪೂರ್ಣಗೊಳಿಸಿರುವ ಪ್ರಯುಕ್ತ ಬಿಜೆಪಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ಇಂದು ನಗರದ ಆನಂದಧಾಮದಲ್ಲಿ ಹಣ್ಣುಗಳನ್ನು ವಿತರಿಸುವ ಮೂಲಕ ಸೇವಾ ದಿವಸ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಶಿವಯೋಗಿ ಸ್ವಾಮಿ ಮಾತನಾಡಿ, ಇಲ್ಲಿ ನೆರೆದಿರುವ ತಾಯಂದಿರ ಪ್ರಾರ್ಥನೆಯ ಮೇರೆಗೆ ಮೋದಿಯವರು ಎರಡನೇ ಬಾರಿ ಪ್ರಧಾನಮಂತ್ರಿ ಆಗಿದ್ದಾರೆ. ಅದೇ ಮಾದರಿಯಲ್ಲಿ ತಮ್ಮ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಪ್ರಾರ್ಥಿಸಿದರು.

ಶಾಸಕರಾದ ಎಸ್.ಎ ರವೀಂದ್ರನಾಥ್ ಮಾತನಾಡಿ, ಇಂದಿರಾಗಾ0ಧಿ 17 ವರ್ಷ ಪ್ರಧಾನಿ ಆಗಿದ್ದರು. ಆದರೆ ದೇಶದ ಹಳ್ಳಿಗಳಲ್ಲಿ ಸ್ವಚ್ಛ ಭಾರತ ಅಭಿಯಾದಡಿಯಲ್ಲಿ 10 ಕೋಟಿ ಶೌಚಾಲಯ ಕಟ್ಟಿಸಲು ನರೇಂದ್ರ ಮೋದಿ ಬರಬೇಕಾಯಿತು. ದೇಶದಲ್ಲಿ ಗ್ರಾಮ್ ಸಡಕ್ ಯೋಜನೆ ಅಡಿಯಲ್ಲಿ ಸಂಪೂರ್ಣ ದೇಶದಲ್ಲಿ ಸಂಪರ್ಕ ಸಾಧಿಸಲು ರಾಷ್ಟಿಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ಯೋಜನೆ ಅಟಲ್ ಜಿ ರವರ ಸರ್ಕಾರ ಮಾಡಿತ್ತು. ಆದರೆ, ಅಂದು ಅಟಲ್ ಜಿ ಸರ್ಕಾರ ಮಾಡಿರುವ ಸಾಧನೆಗಳನ್ನು, ನಾವು ಕಾರ್ಯಕರ್ತರಾಗಿ ದೇಶದ ಜನತೆಗೆ ಮುಟ್ಟಿಸಲಿಲ್ಲ. ಆದರೆ, ಇಂದು ಆ ತಪ್ಪನ್ನ ಮಾಡುವುದು ಬೇಡ ಮನೆ ಮನೆಗೂ ನರೇಂದ್ರ ಮೋದಿ ಸರ್ಕಾರ ಮಾಡಿರುವ ಎಲ್ಲಾ ಯೋಜನೆ ಮತ್ತು ಕಾರ್ಯ ಮುಟ್ಟಿಸುವ ಸಂಕಲ್ಪ ಮಾಡೋಣ ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಕೋಷ್ಠಗಳ ಪ್ರಮುಖರು, ಮಾಜಿ ಮುಖ್ಯ ಸಚೇತಕರಾದ, ಡಾ. ಎ.ಎಚ್ ಶಿವಯೋಗಿ ಸ್ವಾಮಿ, ಹಾವೇರಿ ಜಿಲ್ಲಾ ಪ್ರಭಾರಿಗಳಾದ ಎಲ್.ಎನ್ ಕಲ್ಲೇಶ್, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಮತಿ ಸುಧಾ ಜಯರುದ್ರೇಶ್, 24ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶಿವರಾಜ್ ಪಟೇಲ್, ಉತ್ತರ ಮಂಡಲದ ಅಧ್ಯಕ್ಷರಾದ ಸಂಗನಗೌಡರು, ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ಮತ್ತು ಬಸವರಾಜಯ್ಯ, ಮಹಾಶಕ್ತಿ ಕೇಂದ್ರದ ಪ್ರಮುಖರಾದ ಪದ್ಮನಾಭ ಶೆಟ್ರು, ರಾಜು ಶಾಮನೂರು, ರವಿನಾಯ್ಕ್, ಕಿರಣ್, ಮಧು, ಶಂಕರ್ ಹಾಗು ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

garudavoice21@gmail.com

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!