CEN DYSP: ಬಂಕಾಳಿ ನಾಗಪ್ಪ ದಾವಣಗೆರೆ ಸಿಇಎನ್ ಠಾಣೆಗೆ, ಪದ್ಮಶ್ರೀ ಗುಂಜೀಕರ್ ಲೋಕಾಯುಕ್ತ ಇಲಾಖೆಗೆ ವರ್ಗಾವಣೆ

CEN DYSP_ Bankali Nagappa transferred to Davanagere CEN police station, Padmashri Gunjeekar to Lokayukta department

ದಾವಣಗೆರೆ: (CEN DYSP) ದಾವಣಗೆರೆ ಜಿಲ್ಲೆಯ ಸೈಬರ್, ಎನ್ ಫೋರ್ಸ್ ಮೆಂಟ್, ನಾರ್ಕೋಟಿಕ್ಸ್ (ಸಿಇಎನ್) ಠಾಣೆ ಬಂಕಾಳಿ ನಾಗಪ್ಪ ಡಿ ವೈ ಎಸ್ ಪಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಇವರು ಈ ಹಿಂದೆ ದಾವಣಗೆರೆ ಜಿಲ್ಲೆಯ ಗುಪ್ತಚರ ಇಲಾಖೆಯ ಡಿ ವೈ ಎಸ್ ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಿಇಎನ್ ಠಾಣೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಶ್ರೀ ಗುಂಜೀಕರ್ ಅವರನ್ನು ಕರ್ನಾಟಕ ಲೋಕಾಯುಕ್ತ ಕಛೇರಿಗೆ ವರ್ಗಾವಣೆ ಮಾಡಲಾಗಿದೆ. ಪದ್ಮಶ್ರೀ ಅವರು ದಾವಣಗೆರೆಯಲ್ಲಿ ಅತ್ಯುತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಣೆ‌ ಮಾಡಿದ್ದರು. ಪ್ರಮುಖವಾಗಿ ಮಾದಕ ವಸ್ತುಗಳ ಪತ್ತೆ ಕಾರ್ಯ, ಸೈಬರ್ ವಂಚನೆಯ ಪ್ರಕರಣಗಳ ಪತ್ತೆಕಾರ್ಯ ನಿರ್ವಹಣೆ ಮಾಡಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!