ಚಳ್ಳಕೆರೆ ಇನ್ಸಪೆಕ್ಟರ್ ಜಿ. ಬಿ. ಉಮೇಶ್ ವಿರುದ್ದ ರೇಪ್ ಕೇಸ್ ದಾಖಲು.!

ಚಿತ್ರದುರ್ಗ (ಚಳ್ಳಕೆರೆ): ನಿವೇಶನ ಸಮಸ್ಯೆ ಬಗೆಹರಿಸುವ ವಿಚಾರವಾಗಿ ಸಹಾಯ ಮಾಡುತ್ತೆನೆ ಎಂದು ನಂಬಿಸಿ 5 ವರ್ಷಗಳಿಂದ ಅತ್ಯಾಚಾರ ಮಾಡಲಾಗಿದೆ, ಗರ್ಭಪಾತ ಮಾಡಿಸಿದ್ದಾರೆ, ಎಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿ. ಬಿ. ಉಮೇಶ್ ವಿರುದ್ಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾಗಿದೆ.
5 ವರ್ಷದ ಹಿಂದೆ ದಾವಣಗೆರೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ವೇಳೆಯಲ್ಲಿ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಇದೀಗ ದೂರು ದಾಖಲಾಗಿದೆ. ಸಿಪಿಐ ಉಮೇಶ್ ಈಗಾಗಲೇ ಇಬ್ಬರನ್ನ ಮದುವೆಯಾಗಿರುವ ಸಂಗತಿ ಈ ದೂರಿನಿಂದ ಬೆಳಕಿಗೆ ಬಂದಿದೆ
ಸಿಪಿಐ ಉಮೇಶ್ ವಿರುದ್ಧ ಕಲಂ 376 ಕ್ಲಾಸ್ (2)(k)(n), 323,504, 506 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದಂತೆ ಸಿಪಿಐ ಉಮೇಶ್ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದೂರಿನ ಸಾರಾಂಶ:
ದಿನಾಂಕ: 23-10-2022 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಚಿತ್ರದುರ್ಗ ನಗರದಲ್ಲಿ, ಬಿಎಡ್ ವಿದ್ಯಾಭ್ಯಾಸ ಮಾಡುತ್ತಿದ್ದು ಈಗೆ, ಸುಮಾರು 5 ವರ್ಷಗಳ ಹಿಂದೆ ಪಿರ್ಯಾದಿಯು ಶಿವಮೊಗ್ಗ ನಗರದಲ್ಲಿ, ವಿದ್ಯಾಭ್ಯಾಸ ಮಾಡುವಾಗ ಪಿರ್ಯಾದಿ ತಾಯಿಯ ಅಣ್ಣನ ಮಗನಾದ ಜಿ. ಬಿ. ಉಮೇಶ್ ಇವರು ದಾವಣಗೆರೆ ನಗರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಪಿರ್ಯಾದಿಯವರ ಜಾಗದ ವಿಚಾರವಾಗಿ ಅವರ ತಾಯಿ ಉಮೇಶ್ ಇವರನ್ನು ಸಹಾಯ ಕೇಳಿದ್ದು, ಉಮೇಶ್ ರವರು ಪಿರ್ಯಾದಿಯವರಿಗೆ ಸಹಾಯ ಮಾಡಿದ್ದು ನಂತರ ಪಿರ್ಯಾದಿಯನ್ನು ತಾವು ಕೆಲಸ ಮಾಡುವ ಸ್ಥಳಕ್ಕೆ ಬರುವಂತೆ ಕರೆದಿದ್ದು ಪಿರ್ಯಾದಿ ದಿನಾಂಕ: 13-09-2017 ರಂದು ದಾವಣಗೆರೆ ನಗರಕ್ಕೆ ಅವರು ಹೇಳಿದ ಜಾಗಕ್ಕೆ ಹೋಗಿದ್ದು, ಉಮೇಶ ರವರು ಅಲ್ಲಿ, ಪಿರ್ಯಾದಿಗೆ ಬಲವಂತವಾಗಿ ಅತ್ಯಾಚಾರ ಮಾಡಿರುತ್ತಾರೆ.
ನಂತರ ಪಿರ್ಯಾದಿ ಹೆದರಿಕೊಂಡು ವಾಪಸ್ ಶಿವಮೊಗ್ಗಕ್ಕೆ ಹೋಗಿದ್ದು ಪಿರ್ಯಾದಿಗೆ ಉಮೇಶ್ ರವರಿಗೆ ಮತ್ತೆ ಮತ್ತೆ ಫೋನ್ ಮಾಡಿ ಬರುವಂತೆ ಕರೆದಿದ್ದಾರೆ, ಪಿರ್ಯಾದಿ ಹೋಗದೇ ಇದ್ದಾಗ ಅವರೇ ಪಿರ್ಯಾದಿ ಇದ್ದ ಕಡೆಗೆ ಬಂದು ಪಿರ್ಯಾದಿಗೆ ಜೀವ ಬೆದರಿಕೆ ಹಾಕಿ ಪದೇ ಪದೇ ಬಲವಂತವಾಗಿ ಅತ್ಯಾಚಾರ ಮಾಡುತ್ತಿರುತ್ತಾರೆ, ಪಿರ್ಯಾದಿ ಉಮೇಶರವರಿಗೆ ಹೆದರಿಕೊಂಡು ಬೇರೆ ಕಡೆಗೆ ಕೆಲಸಕ್ಕೆ ಹೋಗಿದ್ದು ಅಲ್ಲಿಗೂ ಸಹ ಉಮೇಶರವರು ಹೋಗಿ ಪಿರ್ಯಾದಿಗೆ ಹೊಡೆದು ಬಲವಂತವಾಗಿ ಹಿಂಸೆ ಮಾಡುತ್ತಿರುತ್ತಾರೆ, ಹಾಲಿ ಉಮೇಶ ಜಿ.ಬಿ, ಇವರಿಗೆ ಇಬ್ಬರು ಪತ್ನಿಯರಿದ್ದರೂ ಸಹ ಬಲವಂತವಾಗಿ ಪಿರ್ಯಾದಿಯವರಿಗೆ ಅತ್ಯಾಚಾರ ಮಾಡಿ ಹಿಂಸೆ ನೀಡುತ್ತಿರುತ್ತಾರೆ.
ನೀನು ನನ್ನ ಮೂರನೇ ಹೆಂಡತಿಯ ಹಾಗೆ ಇರು ಅಂತ ಪಿರ್ಯಾದಿಗೆ ಬಲವಂತ ಮಾಡುತ್ತಿರುತ್ತಾರೆ, ಹಾಗೂ ಪಿರ್ಯಾದಿಗೆ ದಿನಾಂಕ: 2-10 2021 ರಂದು ಚಳ್ಳಕೆರೆ ನಗರದ ನರ್ಸಿಂಗ್ ಹೋಂನಲಿ, ಗರ್ಭಪಾತ ಮಾಡಿಸಿರುತ್ತಾರೆ. ಹಾಗೂ 4-5 ಬಾರಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿರುತ್ತಾರೆ, ಪಿರ್ಯಾದಿಯು ತನಗೆ ಚಿಕ್ಕವಯಸ್ಸು ಬಿಟ್ಟು ಬಿಡಿ ಅಂತ ಕೇಳಿಕೊಂಡರೂ ಸಹ ಉಮೇಶ್ ಇವರು ಪಿರ್ಯಾದಿಯನ್ನು ಬಿಡದೇ ಬಲವಂತವಾಗಿ ಈಗ್ಗೆ 5 ವರ್ಷಗಳಿಂದ ಅತ್ಯಾಚಾರ ಮಾಡಿಕೊಂಡು ಬಂದಿರುತ್ತಾರೆ.ಪಿರ್ಯಾದಿಯವರ ಜಾಗದ ಸಮಸ್ಯೆಯನ್ನು ಇಟ್ಟುಕೊಂಡು ನಿಮಗೆ ಜಾಗ ಸಿಗದಂತೆ ಮಾಡುತ್ತೇನೆ ನಿಮ್ಮ ತಂದೆ ತಾಯಿಯನ್ನು ಬೀದಿಗೆ ತರುತ್ತೇನೆ ಅಂತ ಪಿರ್ಯಾದಿಗೆ ಪ್ರಾಣ ಬೆದರಿಕೆ ಹಾಕುತ್ತಿರುತ್ತಾರೆ.
ಈ ಮೇಲ್ಕಂಡ ಕಾರಣಗಳಿಂದ ನಾನು ಇಲ್ಲಿಯವರೆಗೆ ದೂರು ಕೊಡದೇ ಇದ್ದು ನಾನು ದೂರು ನೀಡಿದರೆ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಆಕ್ಸಿಡೆಂಟ್ ಮೂಲಕ ಕೊಲೆ ಮಾಡಿಸುವುದಾಗಿ ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿರುವ ಮೇಲ್ಕಂಡ ಪೊಲೀಸ್ ಇನ್ಸ್ ಪೆಕ್ಟರ್ ಜಿ.ಬಿ, ಉಮೇಶ್ ಇವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.