ಸಿ ಬಿ ಎಸ್ ಸಿ ಎಂದು ಅಡ್ಮಿಷನ್ ಮಾಡಿಸಿಕೊಂಡ ಚೇತನ ಒಲಂಪಿಯಾಡ್.! ಎಕ್ಸಾಂ ಬರೆಸಿದ್ದು ಸ್ಟೇಟ್ ಸಿಲೆಬಸ್.!

ದಾವಣಗೆರೆ: ಬಿಎಸ್ ಇ ಅನುಮತಿ ಪಡೆಯದೇ ಮಕ್ಕಳನ್ನು ಸೇರಿಕೊಂಡು, ಇದೀಗ ಸ್ಟೇಟ್ ಬೋರ್ಡ್ ನಡೆಸುವ ಪಬ್ಲಿಕ್ ಪರೀಕ್ಷೆ ಬರೆಸುತ್ತಿರುವ ಶಾಲೆಗಳ ವಿರುದ್ಧ ಇದೀಗ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪರೀಕ್ಷೆಗಳು ಆರಂಭವಾಗಿದ್ದು, ಸ್ಟೇಟ್ ಹಾಗೂ ಸಿಬಿಎಸ್ಸಿ ಎರಡೂ ಪರೀಕ್ಷೆಗಳನ್ನು ಮಕ್ಕಳಿಗೆ ಒಂದೇ ದಿನ ಬರೆಸಲಾಗುತ್ತಿದೆ. ಇದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಗಳು ಸಿಬಿಎಸ್ಸಿ ಸಿಲಬಸ್ ಓದಿಸುತ್ತೇವೆಂದು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಸಿಬಿಎಸ್ಸಿಗೆ ಅನುಮತಿಯನ್ನೇ ಪಡೆದಿಲ್ಲ. ಇದರ ಹಿಂದೆ ಬಿಇಒಗಳು ಹಾಗೂ ಡಿಡಿಪಿಐ ಸೇರಿದಂತೆ ಹಿರಿಯ ಅಧಿಕಾರಿಗಳ ಶಾಮೀಲಾಗಿದ್ದಾರೆ.
ಶಾಲಾ ಮಾಲೀಕರು ಹಾಗೂ ಅಧಿಕಾರಿಗಳ ಈ ಆಟದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಅನೇಕ ಪೋಷಕರು ಕಿಡಿಕಾರಿದ್ದಾರೆ.
ಶನಿವಾರ ನಗರದ ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಚೇತನ ಓಲಂಪಿಯಾಡ್ ಶಾಲಾ ಆಡಳಿತ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ಕಳೆದ 5 ವರ್ಷದಿಂದ ಶಾಲೆ ಆಡಳಿತ ಮಂಡಳಿ, ಸಿಬಿಎಸ್ ಇ ಶುಲ್ಕ ಕಟ್ಟಿಸಿಕೊಂಡು ಈಗ ಸ್ಟೇಟ್ ಸಿಲೆಬಸ್ ಪರೀಕ್ಷೆ ಬರೆಸುತ್ತಿದ್ದಾರೆ ಎಂದು ಶಾಲೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಪರೀಕ್ಷೆ ಆದ ಕಾರಣ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಸಿಬಿಎಸ್ ಇ ಪರೀಕ್ಷೆ ಬರೆಸದೇ ಸ್ಟೇಟ್ ಸಿಲಬಸ್ ಬರೆಸಿದೆ. 5 ನೇ ತರಗತಿಯ ವಿಶ್ವಚೇತನಾ, ವಿದ್ಯಾ ನಿಕೇತನ ಶಾಲೆಯಲ್ಲಿ ಈ ಅಚಾತುರ್ಯ ನಡೆದಿದೆ. ಮಕ್ಕಳಿಗೆ ಸ್ಟೇಟ್ ಸಿಲಬಸ್ ಪರೀಕ್ಷೆ ಉತ್ತರ ಪತ್ರ ಕೊಟ್ಟು ಬರೆಸಿದ ಆರೋಪ ಕೇಳಿ ಬಂದಿದೆ. ವಿಚಾರ ಗೊತ್ತಾಗುತ್ತಿದ್ದಂತೆ ಆಡಳಿತ ಮಂಡಳಿ ಕಚೇರಿಗೆ ನುಗ್ಗಿದ ಪೋಷಕರು ಕಿಡಿಕಾರಿದರು.
ಈ ಶಾಲೆಯಲ್ಲಿ ಫೀಸ್ ಕೂಡಾ ಕಡಿಮೆ ಇಲ್ಲಾ. ಎಲ್ಲಾ ರೀತಿಯಲ್ಲೂ ಸೌಲಭ್ಯ ಪಡೆದುಕೊಂಡು ನಂತರ ವಿದ್ಯಾರ್ಥಿಗಳಿಗೆ ಸಲ್ಲಬೇಕಿದ್ದ ನ್ಯಾಯ ಮಾತ್ರ ನೀಡುತ್ತಿಲ್ಲ ಎಂಬುದು ಪೋಷಕರ ವಾದವಾಗಿದೆ. ಒಟ್ಟು 90 ವಿದ್ಯಾರ್ಥಿಗಳು ಶಾಲೆಗೆ ಸೇರಿದ್ದರು. ಸಿ
ಬಿಎಸ್ಇ ತರಗತಿಗೆ 55ರಿಂದ 60 ಸಾವಿರ ರೂ. ಶುಲ್ಕ ಪಡೆದಿದ್ದ ಆಡಳಿತ ಮಂಡಳಿ ಇದೀಗ ತಿರುಗಿನಿಂತಿದೆ. ಈ ಶಾಲೆ ಯಾವುದೇ ಸಿಬಿಎಸ್ ಇ ಅನುಮತಿ ಪಡೆದಿಲ್ಲ ಸಿಬಿಎಸ್ ಇ ಇದೆ ಎಂದು ಸುಳ್ಳು ಹೇಳಿ ವಂಚಿಸಿ ಮಕ್ಕಳನ್ನು ದಾಖಲು ಮಾಡಿಕೊಂಡಿದೆ.
ಅಜಾಗರೂಕತೆ, ಮೋಸ, ವಂಚನೆ, ಕಾನೂನು ಬಾಹಿರ ಹಿನ್ನೆಲೆ ಚೇತನಾ ಒಲಂಪಿಯಾಡ್ ಶಾಲೆ ಕಾರ್ಯದರ್ಶಿ ವಿಜಯಲಕ್ಷ್ಮೀ, ಆಡಳಿತಾಧಿಕಾರಿ ಪವನ್, ಪ್ರಾಂಶುಪಾಲ ಶ್ರೀನಿವಾಸ್ ಮೂರ್ತಿ, ಉಪಪ್ರಾಂಶುಪಾಲರಾದ ಮಹಾದೇವಿ, ಮಾನಸ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕಳೆದ 5 ವರ್ಷಗಳ ಕಾಲ ಕಟ್ಟಿದ್ದ ಶುಲ್ಕ ವಾಪಸ್ ಗೆ ಪೋಷಕರ ಆಗ್ರಹ ವ್ಯಕ್ತವಾಗುತ್ತಿದೆ.
ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ 5 ಹಾಗೂ 8ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲಾಗಿತ್ತು. ಈ ತರಗತಿಗಳ ವಿದ್ಯಾರ್ಥಿಗಳು ರಾಜ್ಯಾದ್ಯಂತ ಒಟ್ಟಿಗೆ ಪರೀಕ್ಷೆ ಬರೆಯುತ್ತಿರುವುದು ಇದೇ ಮೊದಲು. ಇದು ಬೋರ್ಡ್ಗಳಿಗೆ ಹೋಲುವ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಈ ರೀತಿ ಅನ್ಯಾಯ ಆಗಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.