Baby Found: 21 ದಿನದ ಹಿಂದೆ ಅಪಹರಣಕ್ಕೊಳಗಾದ ಮಗು ಪತ್ತೆ.! ಪ್ರಕರಣದ ಆರೋಪಿತಳನ್ನು ಬಂಧಿಸಿದ ದಾವಣಗೆರೆ ಪೋಲೀಸ್

Baby boy handover to parents in Davanagere

 

ದಾವಣಗೆರೆ: ಕಳೆದ ದಿನಾಂಕ 16-03-2022 ರಂದು ದಾವಣಗೆರೆ ಚಾಮರಾಜ ಪೇಟೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗು ಹುಟ್ಟಿದ 2-3 ಗಂಟೆಯಲ್ಲಿ ಆಸ್ಪತ್ರೆಯಿಂದ ಮಗು ಅಪಹರಣ ಆಗಿರುವ ಬಗ್ಗೆ ಮಗುವಿನ ತಂದೆಯಾದ ಇಸ್ಮಾಯಿಲ್ ಜಬೀವುಲ್ಲಾ ತಂದೆ ಕಳ್ಳಬಾವಿ ಜಮಾಲ್ ಸಾಬ್, 28 ವರ್ಷ, ಮೆಕಾನಿಕ ಕೆಲಸ, ಗುಂಡಿನ ಕೆರೆ, 09 ನೇ ವಾರ್ಡ್ ಅರಸೀಕೆರೆ ರಸ್ತೆ, ಹರಪನಹಳ್ಳಿ, ವಿಜಯನಗರ ಜಿಲ್ಲೆ ನೀಡಿದ ದೂರಿನ ಆಧಾರದ ಮೇರೆಗೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲ ಗುನ್ನೆ ನಂ: 47/2022 ಕಲಂ:363 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡಿದ್ದು, ದಿನಾಂಕ: 05-04-2022 ರಂದು ಸಂಜೆ ಸುಮಾರು 4-00 ಗಂಟೆಯ ಸಮಯಕ್ಕೆ ದಾವಣಗೆರೆ ಬಡಾವಣೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸುಮಾರು 15-20 ದಿನದ ಗಂಡು ಮಗು ಪತ್ತೆಯಾಗಿದ್ದು, ಈ ಸಂಬಂಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 43/2022 ಕಲಂ: 317 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ದಾವಣಗೆರೆ ಮಹಿಳಾ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಮಹಿಳೆಯನ್ನು ಈ ದಿನ ಠಾಣೆಗೆ ಕರೆತಂದು ವಿಚಾರಣೆ ಮಾಡುವ ಕಾಲಕ್ಕೆ ಸದರಿ ಶಂಕಿತ ಶ್ರೀಮತಿ ಗುಲ್ದಾರ್ ಬಾನು ಗಂಡ ಜಿಲಾನಿ, 44 ವರ್ಷ, ಗೃಹಿಣಿ ವಾಸ: 1ನೇ ಮೇನ್, 15ನೇ ಕ್ರಾಸ್ ಆಜಾದ ನಗರ ದಾವಣಗೆರೆ ಇವಳಗೆ ಮೂವರು ಮಕ್ಕಳಿದ್ದು, ಮೊದಲನೇಯವಳು ಫಾನ್ ಖಾನಂ, ಇವಳನ್ನು ಬೆಂಗಳೂರಿನ ವಾಸಿಯಾದ ತೌಸೀಫ್ ಇವರಿಗೆ ಮದುವೆ ಮಾಡಿಕೊಟ್ಟದ್ದು, ಸದರಿಯವರನ್ನು ಮದುವೆಯಾಗಿ ಸುಮಾರು ವರ್ಷಗಳಾದರೂ ಮಕ್ಕಳಾಗದ ಕಾರಣ ಸದರಿ ಶಂಕೀತಳಾದ ಗುಲ್ದಾರ್‌ ಬಾನು ಇವಳು ದಾವಣಗೆರೆ ಚಾಮರಾಜ ಪೇಟೆ ಆಸ್ಪತ್ರೆಗೆ ಹೋಗಿದ್ದು ಆಗ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಅಪಹರಣ ಮಾಡಿಕೊಂಡು ಅಲ್ಲಿಂದ ಬೆಂಗಳೂರಿಗೆ ಹೋಗಿ ತನ್ನ ಮಗಳು ಮತ್ತು ಅಳಿಯನಾದ ಫರಾನ ಖಾನಂ ಮತ್ತು ತೌಸೀಫ್ ಇವರಿಗೆ ಕೊಟ್ಟು ಬಂದಿರುತ್ತೇನೆ. ನಂತರ ಪೊಲೀಸರು ಆಜಾದ್ ನಗರದಲ್ಲಿ ಬಂದು ಪ್ರತಿಯೊಂದು ಮನೆಯನ್ನು ಚೆಕ್ ಮಾಡಿಕೊಂಡು ಬಂದಾಗ ಶಂಕಿತ ಮಹಿಳೆ ತನ್ನ ಮಗಳಿಗೆ ಪೋನ್ ಮಾಡಿ ಮಗುವನ್ನು ತಂದು ವಾಪಸ್‌ ದಾವಣಗೆರೆ ಬಿಟ್ಟು ಹೋಗು ಅಂತಾ ಹೇಳಿದಾಗ ಶಂಕಿತ ಮಹಿಳೆಯ ಮಗಳು ಬೆಂಗಳೂರಿನಿಂದ ದಾವಣಗೆರೆಗೆ ಮಗುವನ್ನು ಕರೆದುಕೊಂಡು ಬಂದು 20 ದಿನಗಳ ನಂತರ ಬಿಟ್ಟು ಹೋಗಿರುತ್ತಾಳೆ. ಈ ದಿನ ಪತ್ತೆಯಾದ ಮಗುವನ್ನು ಸಿಜಿ ಆಸ್ಪತ್ರೆಯಲ್ಲಿ ಪೋಷಕರ ವಶಕ್ಕೆ ಕೂಡಲಾಗಿರುತ್ತದೆ ಮತ್ತು ಆರೋಪಿತಳ ವಿರುದ್ಧ ಮಾನವ ಕಳ್ಳ ಸಾಗಾಣಿಕೆ ರೀತ್ಯಾ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡಿರುತ್ತದೆ.

ಸದರಿ ಪ್ರಕರಣದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ, ದಾವಣಗೆರೆ ರವರ ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ, ದಾವಣಗೆರೆ ರವರ ಮಾರ್ಗದರ್ಶನದಲ್ಲಿ, ಶ್ರೀ ನರಸಿಂಹ ತಾಮ್ರಧ್ವಜ, ಮಾನ್ಯ ಪೊಲೀಸ್ ಉಪಾಧೀಕ್ಷಕರು, ನಗರ ಉಪ ವಿಭಾಗ, ದಾವಣಗೆರೆ ರವರ ನೇತೃತ್ವದಲ್ಲಿ, ಶ್ರೀಮತಿ ಶಿಲ್ಪಾ.ವೈ.ಎಸ್, ಪಿಐ, ಮಹಿಳಾ ಪೊಲೀಸ್ ಠಾಣೆ, ಸಿಬ್ಬಂದಿಯವರಾದ ಶ್ರೀ ರಸೂಲ್ ಸಾಬ್ ಹಾಗೂ ಶ್ರೀ ಗೋವಿಂದಪ್ಪ ಮುನೇಗೌಡ, ಶ್ರೀ ಗಿರೀಶ್ ಗೌಡ, ಶ್ರೀ ರಾಘವೇಂದ್ರ, ಶಾಂತರಾಜು, ಉಮೇಶ ರವರನ್ನೊಳಗೊಂಡ ತಂಡ ಅಪಹರಣವಾದ ಮಗು ಮತ್ತು ಆರೋಪಿತಳನ್ನು ಪತ್ತೆ ಮಾಡಿದ್ದು, ಸದರಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯಂತ್ ದಾವಣಗೆರೆ ಜಿಲ್ಲೆ, ಹಾಗೂ ಉಪ ಅಧೀಕ್ಷಕರಾದ ಬಸರಗಿ ಯವರು ದಾವಣಗೆರೆ ರವರು ಪ್ರಸಂಶೆಯನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿಗಾಗಿ ಸಂಪರ್ಕಿಸಿ ;- garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!