ಮಕ್ಕಳು ಪತ್ರಿಕೆಗಳನ್ನ ಹೆಚ್ಚಾಗಿ ಓದಬೇಕು.! ಪತ್ರಕರ್ತರು ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ತಿಳಿಸಿ – ಪ್ರೊಫೆಸರ್ ಆರ್. ಶಿವಪ್ಪ

mysore university UNICEF project program for journalist

ಮೈಸೂರು: ಮಕ್ಕಳು ಭಾರತ ದೇಶದ ಮುಂದಿನ ಪ್ರಜೆಗಳು. ಅವರು ಚಿಕ್ಕವರಾಗಿದ್ದರೆ ನಾವು ಅವರ ಬಗ್ಗೆ ಅತಿ ಹೆಚ್ಚು ಪ್ರೀತಿ ಕಾಳಜಿ ಹಾಗೂ ಜಾಗೃತಿ ವಹಿಸಬೇಕು. ಅವರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಬೇಕು ಮಕ್ಕಳಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕೆಲಸಗಳಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊಫೆಸರ್ ಶಿವಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿಂದು ಕೋವಿಡ್ ಅವಧಿಯ ನಂತರ ಮಕ್ಕಳ ಸಮಸ್ಯೆ ಕುರಿತು ಪತ್ರಕರ್ತರ ಸಂವೇದನೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಹಾಗೂ ಹೈದರಾಬಾದಿ ಯುನಿಸೆಫ್ ಸಹಯೋಗದಲ್ಲಿ ಈ ಕಾರ್ಯಗಾರವನ್ನ ಆಯೋಜಿಸಲಾಗಿತ್ತು. ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊಫೆಸರ್ ಆರ್ ಶಿವಪ್ಪ ಕಾರ್ಯಗಾರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಭಾರತ ದೇಶ ಮತ್ತು ಸಮಾಜ ಅಭಿವೃದ್ಧಿ ಆಗಬೇಕಾದರೆ ಮಕ್ಕಳಲ್ಲಿ ಮೌಲ್ಯಗಳು ಅತ್ಯವಶ್ಯಕ. ಆದರೆ ಇಂದಿನ ಕಾಲದಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಹೀಗೆ ಆಗಬಾರದು ಪತ್ರಿಕೋದ್ಯಮ ಸಮಾಜದ ಕಣ್ಣು ಇದ್ದಂತೆ. ಈ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮವು ಸಹಕರಿಸಬೇಕು ಮಕ್ಕಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಯಾವ ಮಕ್ಕಳಾದರೂ ಅವರ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಪ್ರತಿಯೊಂದು ಮಕ್ಕಳಿಗೂ ಇಂದಿನ ಕಾಲದಲ್ಲಿ ಶಿಕ್ಷಣ ಅತ್ಯವಶ್ಯಕ. ಹಾಗಾಗಿ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು. ಅವರಿಗೆ ಸೂಕ್ತ ಶಿಕ್ಷಣವನ್ನು ಪೋಷಕರು ನೀಡಬೇಕು ಮಕ್ಕಳಿಗೆ ಸರಿಯಾದ ಗುರಿ ತಲುಪಲು ಪೋಷಕರು ಮತ್ತು ಶಿಕ್ಷಕರು ಉತ್ತಮ ಮಾರ್ಗದರ್ಶನ ತೋರಬೇಕು.

ಈ ಹಿಂದಿನ ದಿನಗಳಲ್ಲಿ ಪುಸ್ತಕದ ಜೊತೆ ಜೊತೆಗೆ ಪತ್ರಿಕೆಗಳನ್ನ ಮಕ್ಕಳು ಓದುತ್ತಿದ್ದರು. ಆದ್ರೆ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಈ ಕೆಲಸ ಹೆಚ್ಚಾಗಿ ಆಗಬೇಕು. ಉತ್ತಮ ಸಮಾಜವನ್ನು ಕಟ್ಟುವ ಕಾಯಕವನ್ನು ಸಮಾಜವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಬದಲಾವಣೆಗಾಗಿ ಶ್ರಮಿಸುತ್ತಿದ್ದಾರೆ. ಸ್ವಸ್ಥ ಸಮಾಜ ಕಾಪಾಡುವ ನಿಟ್ಟಿನಲ್ಲಿ ಪತ್ರಿಕೆಯ ಪಾತ್ರ ಅತ್ಯಂತ ದೊಡ್ಡದು. ಹಾಗಾಗಿ ಮಕ್ಕಳು ಪತ್ರಿಕೆಗಳನ್ನ ಹೆಚ್ಚಾಗಿ ಓದಬೇಕು ಪತ್ರಕರ್ತರು ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಮಕ್ಕಳಿಗೆ ತಿಳಿಯುವಂತೆ ಮಾಡಬೇಕು ಎಂದರು.

ಇನ್ನು ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಉಂಟಾಗಿದ್ದ ಕೋವಿಡ್ ಸಮಸ್ಯೆಯಿಂದ ಅನೇಕ ಮಕ್ಕಳು ಸಾವಿಗೀಡಾಗಿದ್ದರು. ಅಲ್ಲದೆ ಬಹುತೇಕ ಜನರು ಅನೇಕ ಕಷ್ಟಗಳನ್ನ ಅನುಭವಿಸಿದ್ದರು. ಆದರೆ ಇದೇ ವೇಳೆ ಪತ್ರಕರ್ತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಮಾಜಮುಖಿ ಕೆಲಸಗಳನ್ನು ಮಾಡಿದ್ರು. ಪವಿತ್ರ ಕಾಲದಲ್ಲಿ ಮಕ್ಕಳು ಅನೇಕ ಸಮಸ್ಯೆಗಳನ್ನ ಎದುರಿಸಿದ್ರು. ಇನ್ನು ಮುಂದಾದರೂ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜೊತೆಗೆ ಜಾಗೃತಗೊಳಿಸಬೇಕು ಇದು ಪ್ರತಿಯೊಬ್ಬರ ಪತ್ರಕರ್ತ ಹಾಗೂ ಪೋಷಕರ ಆದ್ಯ ಕರ್ತವ್ಯವಾಗಿದೆ. ಸಮಾಜಕ್ಕೆ ದಾರಿದೀಪ ಮತ್ತು ಶಿಕ್ಷಣ ನೀಡಬೇಕಾದ ದೊಡ್ಡ ಜವಾಬ್ದಾರಿ ಪತ್ರಿಕೆಗಳದ್ದು. ಮಕ್ಕಳು ಕಲಿಕೆಯ ಜೊತೆಗೆ ಇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಹಾಗೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಇದರ ಜೊತೆಗೆ ಯುನಿಸ್ ಮಕ್ಕಳಿಗೆ ಉಪಯೋಗವಾಗುವ ಒಳ್ಳೆಯ ಕೆಲಸವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಬಳಿಕ ತೆಲಂಗಾಣದ ಯುನಿಸೆಫ್ ಅಧಿಕಾರಿ ಪ್ರೊಫೆಸರ್ ಪ್ರೊಸೂನ್ ಸೆನ್ ಮಾತನಾಡಿ ಇದೊಂದು ಬಹಳ ವಿಭಿನ್ನ ಪ್ರಾಜೆಕ್ಟ್ ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು. ಕೊವಿಡ್ ನಿಂದಾಗಿ ಅನೇಕ ಮಕ್ಕಳು ಸಾವಿಗೀಡಾಗಿದ್ದಾರೆ ಅಲ್ಲದೆ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದೆ. ಶಾಲೆಗಳು ಮುಚ್ಚುವುದರ ಜೊತೆಗೆ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿದೆ. ಹಾಲು ಮೊಟ್ಟೆ ಮಕ್ಕಳಿಗೆ ಸಿಗದ ಕಾರಣ ಮಕ್ಕಳು ವೀಕ್ ಆಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಅನೇಕರು ಬಾಲ್ಯ ವಿವಾಹ ಮಾಡಿಕೊಂಡಿದ್ದಾರೆ ಜೊತೆಗೆ ಬಾಲಕಾರ್ಮಿಕರ ಸಂಖ್ಯೆಯು ಹೆಚ್ಚಾಗಿತ್ತು ಇದನ್ನೆಲ್ಲ ತೊಡೆದು ಹಾಕಲು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಕೊನೆಯದಾಗಿ ಈಶ್ವರ್ಯ ದೈತೋಟ ಮಾತನಾಡಿ ಪತ್ರಿಕೋದ್ಯಮದ ಜವಾಬ್ದಾರಿಯನ್ನ ತಿಳಿಸಿಕೊಟ್ಟರು. ಸಮಾಜದ ಏಳಿಗೆಗೆ ಪತ್ರಿಕೋದ್ಯಮದ ಪಾತ್ರ ಬಹಳ ದೊಡ್ಡದು ಶೇಕಡ 49ರಷ್ಟು ಪತ್ರಿಕೆ, ಮಾಲೀಕತ್ವದ ಬಗ್ಗೆ ಜನರಿಗೆ ಮಾಹಿತಿ ಇಲ್ಲ ಹತ್ತು ವರ್ಷದ ಹಿಂದೆ ಶೇಕಡ ಐದರಷ್ಟು ಸುಳ್ಳು ಸುದ್ದಿ ಬರುತ್ತಿತ್ತು ಆದರೆ ಈಗ ಶೇಕಡ 40ರಷ್ಟು ಸುಳ್ಳು ಸುದ್ದಿ ಬರುತ್ತಿದೆ ಪ್ರಾದೇಶಿಕ ಭಾಷೆಗಳ ನಿರ್ಲಕ್ಷ ಮಾಡದೆ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಕಾರ್ಯಗಾರದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನದ ವಿಭಾಗ ಅಧ್ಯಕ್ಷ ಪ್ರೊಫೆಸರ್ ಸಿ ಕೆ ಪುಟ್ಟಸ್ವಾಮಿ, ಪ್ರಾಧ್ಯಾಪಕಿ ಪ್ರೊಫೆಸರ್ ಡಾ. ಎಂಎಸ್ ಸ್ವಪ್ನ, ಸಹ ಪ್ರಾಧ್ಯಾಪಕಿ ಡಾಕ್ಟರ್ ಮಮತಾ ಎನ್ ಡಾಕ್ಟರ್ ರಾಕೇಶ್ ಸೇರಿದಂತೆ ಪತ್ರಿಕೋದ್ಯಮದ ವಿದ್ಯಾರ್ಥಿಗಳು  ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!