Commissioner; ವಾಣಿಜ್ಯ ಮಳಿಗೆ ಮರು ಹರಾಜು ಪ್ರಕ್ರಿಯ ಅಕ್ರಮ; ಇಲಾಖೆ ಆಯುಕ್ತ ಆರ್ ಚೇತನ್ ರಿಗೆ ಮನವಿ ನೀಡಿದ ಜೈ ಕರ್ನಾಟಕ ಸಂಘಟನೆ

ದಾವಣಗೆರೆ: (Commissioner) ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಯುವ ಸಬಲೀಕರಣ ಕ್ರೀಡಾಂಗಣದಲ್ಲಿ ನಿರ್ಮಿಸಿರುವ 50 ವಾಣಿಜ್ಯ ಮಳೆಗಗಳ ಮರು ಹರಾಜು ಪ್ರಕ್ರಿಯ ನಡೆಸದಿರುವ ಅಕ್ರಮದ ಕುರಿತು ಮತ್ತು ಉದ್ಯಮ / ಪರವಾನಿಗಿಗೆಗಳನ್ನು ಕ್ರೀಡಾ ಇಲಾಖೆಯಿಂದ ಮತ್ತು ನಗರ ಸಭೆಯಿಂದ ನವೀಕರಿಸಿ ಕೊಳ್ಳದೆ ವ್ಯಾಪಾರ/ ವಹಿವಾಟು ನಡೆಸುತ್ತಿರುವ ವಿರುದ್ದ ಜೈ ಕರ್ನಾಟಕ ಸಂಘಟನೆಯ ಹರಿಹರ ಘಕದ ಅಧ್ಯಕ್ಷರು ಮನವಿ ಸಲ್ಲಿಸಿದರು.
ಹರಿಹರ ನಗರಸಭೆ ವ್ಯಾಪ್ತಿಯ ಹಾಲಿ ವಾರ್ಡ್ ನಂಬರ್ 10 ರ ಮಹಾತ್ಮ ಗಾಂಧಿ ಮೈದಾನದ ಮುಂಬಾಗದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆ ಆಧೀನದಲ್ಲಿರುವ ನೆಲ ಮಾಡಿಯ 26 ಮಳೆಗೆಗಳು ಮತ್ತು 01ನೇ ಮಹಡಿಯ 24 ಮಳಿಗೆಗಳು ಇದ್ದು ಈ ಬಾಡಿಗೆದಾರರ ಅವಧಿ 2019 ಕೇ ಬಾಡಿಗೆ ಕರಾರು ಅವಧಿ ಮುಗಿದಿರುತ್ತದೆ ಆದರೂ ಈ ಬಾಡಿಗೆದಾರರು 4 ರಿಂದ 5 ವರ್ಷಗಳಾದರೂ 50 ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಅನಾದಿಕೃತವಾಗಿ ನಡೆಸುತ್ತಿರುವ ಉದ್ಯಮಗಳಿಗೆ ನಗರಸಭೆಯಿಂದ ಉದ್ಯಮ / ವ್ಯಾಪಾರ ಪರವಾನಿಗೆ ಗಳನ್ನು ಪಡೆದು ನವೀಕರಿಸಿ ಕೊಂಡಿರುವುದಿಲ್ಲ ಮತ್ತು ಈ ಅಕ್ರಮವು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಇದ್ದರೂ ಸಹ ಕ್ರಮ ಕೈಗೊಳ್ಳದೆ ಮಳಿಗೆದಾರರನ್ನು ಇವರೆಗೂ ಖಾಲಿ ಮಾಡಿಸದೆ ಮತ್ತು ನಿಯಮಾನುಸಾರ ಮರು ಹರಾಜು ಪ್ರಕ್ರಿಯವನ್ನು ನಡೆಸದೆ ಇಲ್ಲಿನ ಅಧಿಕಾರಿಗಳು ಈ ಹಳೆ ಬಾಡಿಗೆದಾರರೊಂದಿಗೆ ಶಾಮಿಲ್ ಆಗಿದ್ದಾರೆಂದು ಸಾರ್ವಜನಿಕರಲ್ಲಿ ಅನುಮಾನ ಸೃಷ್ಟಿಯಾಗಿದೆ.
ಸದರಿ ಮಾಳಿಗೆಗಳನ್ನು ಈವರೆಗೂ ಹರಾಜು ಪ್ರಕ್ರಿಯೆ ನಡೆಸದೆ ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ ಅದೇ ರೀತಿ ಈ ಮಳಿಗೆ ದಾರರಿಗೆ ಸರ್ಕಾರ ನಿಗದಿಪಡಿಸಿರುವ ಬಾಡಿಗೆ ದರ ಕೇವಲ 1600 ರಿಂದ 2800 ಹಾಗೂ 3500 ರೂಪಾಯಿಗಳು ಮಾತ್ರ ಆದರೆ ಈ ಮಳಿಗೆ ದಾರರು ವಿದ್ಯಾವಂತ ನಿರುದ್ಯೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಮಳೆಗೆಗಳನ್ನು 18000 ರಿಂದ 20000 ಸಾವಿರದವರೆಗೆ ಒಳ ಬಾಡಿಗೆ ಕೊಟ್ಟು ಸರ್ಕಾರಕ್ಕೆ ಸೇರಬೇಕಾದ ರಾಜ ಧನವನ್ನು ಈ ಬಾಡಿಗೆದಾರರೇ ಪಡೆಯುತ್ತಿದ್ದಾರೆ.ಸುಮಾರು 10ಕ್ಕೂ ಹೆಚ್ಚು ಮಳಿಗೆಗಳಿಗೆ ಈವರೆಗೂ ಯಾವುದೇ ಕರಾರು ಪತ್ರವಿಲ್ಲದೆ ವ್ಯಾಪಾರ/ ವೈವಾಟುಗಳನ್ನು ನಡಿಸುತ್ತಿದ್ದಾರೆ.
ದಿನಾಂಕ 13/12 /2002 ರಂದು ಹರಾಜು ಪ್ರಕ್ರಿಯೆ ನಡೆಸುತ್ತೇವೆಂದು ಅರ್ಜಿಗಳನ್ನು ವಿತರಣೆ ಮಾಡಿ 185 ಸಾರ್ವಜನಿಕರಿಂದ ತಲಾ 500 ಗಳನ್ನು ಪಡೆದುಕೊಂಡು ಹರಾಜು ಪ್ರಕ್ರಿಯೆಯನ್ನು ನಡೆಸಿರುವುದಿಲ್ಲ ಮತ್ತು ದಿನಾಂಕ 27/ 9/2024 ರಂದು ಪುನಃ ಹರಾಜು ಪ್ರಕ್ರಿಯೆ ನಡೆಸುತ್ತೇವೆಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಅರ್ಜಿ ಫಾರಮುಗಳನ್ನು ವಿತರಣೆ ಮಾಡುವ ದಿನಾಂಕವನ್ನು ನಿಗದಿಪಡಿಸಿ ಮಳೆಗೆದ್ದಾರರಿಗೆ 10 ದಿನದೊಳಗೆ ಖಾಲಿ ಮಾಡುವಂತೆ ನೋಟಿಸ್ ವಿತರಣೆ ಮಾಡಿ ಯಾವುದೇ ಹರಾಜು ಪ್ರಕ್ರಿಯೆ ನಡೆಸಿರುವುದಿಲ್ಲ.
ದಿನಾಂಕ 10.11.2022 ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾಂಗಣದ ಕ್ರೀಡಾ ತರಬೇತಿಯು ಶೈಕ್ಷಣಿಕ ಚಟುವಟಿಕೆ ಅಂಗವಾಗಿರುವುದರಿಂದ 150 ಮೀಟರ್ ದೂರದವರೆಗೆ ಮಧ್ಯ ಮಾರಾಟ ನಿಷೇಧವಿರುವ ಕಾರಣ ಕೂಡಲೇ ವಾಣಿಜ್ಯ ಮಳೆಗೆಗಳಲ್ಲಿರುವ ಅಂಬೆಮಾ ವೈನ್ಸ್ ಮಧ್ಯದ ಅಂಗಡಿಯನ್ನು ತೆರವುಗೊಳಿಸಲು ಹಾಗೂ ಹೊಸದಾಗಿ ನಿಯಮಾನುಸಾರ ಅಂಗಡಿ ಮಳೆಗೆಗಳನ್ನು ಹರಾಜು ಪ್ರಕ್ರಿಯ ಮೂಲಕ ಹಂಚಿಕೆ ಮಾಡಲು ತಾಲೂಕು ಕ್ರೀಡಾಂಗಣ ಸಮಿತಿಗೆ ಸೂಚನೆ ನೀಡಿರುತ್ತಾರೆ ಆದರೆ ಯಾವುದೇ ರೀತಿ ಅಂಬೆಮಾ ವೈನ್ಸ್ ಮಧ್ಯದ ಅಂಗಡಿಯನ್ನು ತೆರವುಗೊಳಿಸದೆ. ಮತ್ತು ಹರಾಜು ಪ್ರಕ್ರಿಯ ನಡೆಸದೆ ಈವರೆಗೂ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳಾಗಲಿ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆಯ ಅಧಿಕಾರಿಗಳಾಗಲಿ ಮತ್ತು ನಗರಸಭೆಯ ಪೌರಯುಕ್ತರಾಗಲಿ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಮೌನ ವಹಿಸಿರುವುದನ್ನು ಗಮನಿಸಿದರೆ ಈ ಬಾಡಿಗೆದಾರರ ಜೊತೆ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಎಂಬ ದಟ್ಟ ಅನುಮಾನ ಕಾಡುತ್ತಿದ್ದು.ಅಷ್ಟೇ ಅಲ್ಲದೆ ಈ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಅತ್ತ ಕ್ರೀಡಾ ಇಲಾಖೆಗೂ ಮೋಸ ಮಾಡುತ್ತಾ ಇತ್ತ ನಗರ ಸಭೆಗೂ ವಂಚಿಸುತ್ತಿರುವುದು ಖಂಡನಿಯ.
ಮುಂದುವರೆದು ಕೆಲ ಮಳಿಗೆಗಳ ಬಾಡಿಗೆದಾರರು ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದು ಉಲ್ಲೇಖ 4ರ ಪತ್ರದಲ್ಲಿ ದಾವಾ ಆಸ್ತಿಗಳ ಯಥಾ ಸ್ಥಿತಿ (ಸ್ಟೋಸ್ Que) ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಲಾಗಿರುತ್ತದೆ ಎಂದು ತಿಳಿದು ಬಂದಿರುವುದು ಸರಿ ಅಷ್ಟೇ. ಆದರೆ 50 ಮಳೆಗಳ ಪೈಕಿ ಕೆಲ ಮಳೆಗೆ ಬಾಡಿಗೆದಾರರು ನ್ಯಾಯಾಲಯಕ್ಕೆ ಹೋಗಿರೂವರನ್ನು ಹೊರತುಪಡಿಸಿ ಇನ್ನುಳಿದ ಮಳ್ಗೆದಾರರನ್ನು ಕಾಲಿ ಮಾಡಿಸಿ ನಿಯಮಾನಸಾರ ಹರಾಜು ಪ್ರಕ್ರಿಯೆ ನಡೆಸುವಂತೆ ನಮ್ಮ ಜಯ ಕರ್ನಾಟಕ ಸಂಘಟನೆ ವತಿಯಿಂದ ಹರಿಹರ ನಗರದ ಗಾಂಧಿ ವೃತ್ತದಲ್ಲಿ ಕಳೆದ 93 ದಿನಗಳಿಂದ ನಿರಂತರ ಧರಣಿ /ಪ್ರತಿಭಟನೆ ನಡೆಸುತ್ತಿದ್ದು ಹಾಗೂ ಪರವಾನನಿಗಿ ಪಡೆಯದಿರುವ ಮಳೆಗೆ ಬಾಡಿಗೆದಾರರನ್ನು ಕಾಲಿ ಮಾಡಿಸಲು ಆದೇಶ ಹೊರಡಿಸಲು ಹೊಸದಾಗಿ ನಿಯಮಾನಸಾರ ಟೆಂಡರ್ ಮೂಲಕ ಹರಾಜು ಪ್ರಕ್ರಿಯ ಕೈಗೊಳ್ಳಬೇಕೆಂದು ನಮ್ಮ ಸಂಘಟನೆ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳವರಿಗೂ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳವರಿಗೂ ಹಾಗೂ ನಗರಸಭೆಯ ಪೌರಾಯುಕ್ತರಿಗೂ ಮನವಿಗಳನ್ನು ಸಲ್ಲಿಸಿರುತ್ತೇವೆ.
ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಮ್ಮ ಜಯಕರ್ನಾಟಕ ಸಂಘಟನೆ ವತಿಯಿಂದ ಹರಾಜು ಪ್ರಕ್ರಿಯೆ ನಡೆಸುವಂತೆ ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಆದಕಾರಣ ಈ ಕೂಡಲೇ ಕ್ರಮ ಕೈಗೊಂಡು ತನಿಖೆ ಮಾಡಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವರೆಗೆ ಹಾಗೂ ದಾವಣಗೆರೆ ಜಿಲ್ಲಾ ಅಧಿಕಾರಿಗಳ ವರೆಗೆ ಸೂಕ್ತ ಆದೇಶ ನೀಡಬೇಕೆಂದು ಹಾಗೂ ನಮ್ಮ ಹೋರಾಟ ಬೇಡಿಕೆ ಈಡೇರವರೆಗೂ ಮುಂದುವರೆಯುತ್ತಿರುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಫ್ರಿಡಂ ಪಾರ್ಕಿನಲ್ಲಿ ಅನಿರ್ದಿಷ್ಟ ಅವಧಿ ವರೆಗೂ ಉಪವಾಸ ಧರಣಿ ಸತ್ಯಾಗ್ರ ಹಮ್ಮಿಕೊಳ್ಳಲಾಗುವುದು ಮತ್ತು ಪ್ರತಿಭಟನೆಗಾರರಿಗೆ ಯಾವುದೇ ರೀತಿಯಿಂದ ತೊಂದರೆಗಳು ಆದಲ್ಲಿ ಜಿಲ್ಲಾ ಆಡಳಿತ / ಕ್ರೀಡಾ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರ ಆಗಿರುತ್ತಾರೆ ಎಂದು ಮನವಿ ಕೊಡಲಾಯಿತು.
ನಂತರ ಮಾತನಾಡಿದ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಆಯುಕ್ತರು ಆರ್ ಚೇತನ್ ಸರ್ ರವರು ಈ ವಿಷಯದ ಬಗ್ಗೆ ನಮ್ಮ ಗಮನದಲ್ಲಿ ಇದೆ ಈ ಯುವಜನೋತ್ಸವ ಕಾರ್ಯಕ್ರಮ ಮುಗಿದ ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರಾದ ಎಸ್ ಗೋವಿಂದ್ ತಾಲೂಕು ಉಪಾಧ್ಯಕ್ಷರಾದ ಆನಂದ್ ಎಂ ಆರ್ ಪ್ರಧಾನ ಕಾರ್ಯದರ್ಶಿ ಸುನಿಲ್ ಸಹ ಕಾರ್ಯದರ್ಶಿ ಭರತ್ ಎಮ್ ವಿದ್ಯಾರ್ಥಿ ಘಟಕ ದ ಅಧ್ಯಕ್ಷರು ಶ್ರೀನಿವಾಸ್ ಎಚ್ ಪಿ ಉಪಸ್ಥಿತಿಯಲ್ಲಿ